ಬೆಂಗಳೂರು: ಬೆಂಗಳೂರು ಮಹಾನಗರ ಮತ್ತು ರಾಜ್ಯದ 17 ನಗರಗಳ ಬಳಕೆದಾರರು ಇನ್ನು ಮುಂದೆ ‘ಬೆಂಗಳೂರು ಒನ್’ ಹಾಗೂ ‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಪೇಟಿಎಂ ಮೂಲಕ ಹಣ ಪಾವತಿ ಮಾಡಬಹುದಾಗಿದೆ.
ಕನಿಷ್ಠ ₹ 200 ಪಾವತಿಸುವ ಗ್ರಾಹಕರಿಗೆ ಆರಂಭಿಕ ಕೊಡುಗೆಯಾಗಿ ಶೇ 10ರಷ್ಟು ಹಣ ಹಿಂದಿರುಗಿಸಲಾಗುವ ಕೊಡುಗೆ ಇದೆ ಎಂದು ‘ಪೇಟಿಎಂ’ನ ಸಿಒಒ ಕಿರಣ್ ವಸಿರೆಡ್ಡಿ ಹೇಳಿದ್ದಾರೆ. ಪೇಟಿಎಂ ಮಾಲೀಕತ್ವ ಹೊಂದಿರುವ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್, ರಾಜ್ಯ ಸರ್ಕಾರದ ಅಂಗಸಂಸ್ಥೆಗಳಾದ ಇಡಿಸಿಎಸ್ ಮತ್ತು ಡಿಪಿಎಆರ್ (ಇ-ಆಡಳಿತ) ಜತೆ ಒಪ್ಪಂದ ಮಾಡಿಕೊಂಡಿದೆ.
ಗೋಏರ್: ಬೆಂಗಳೂರಿನಿಂದ ಫುಕೆಟ್, ಮಾಲೆಗೆ ಸಂಪರ್ಕ ಬೆಂಗಳೂರು: ವಿಮಾನ ಯಾನ ಸಂಸ್ಥೆ ಗೋಏರ್, ಬೆಂಗಳೂರಿನಿಂದ ಫುಕೆಟ್ ಮತ್ತು ಮಾಲೆಗೆ ವಿಮಾನ ಹೊಸ ಸೇವೆ ಆರಂಭಿಸಲಿದ್ದು, ಡಿಸೆಂಬರ್ 9ರಿಂದ ಜಾರಿಗೆ ಬರಲಿದೆ.
ಬೆಂಗಳೂರು-ಫುಕೆಟ್ ಮಧ್ಯೆ ವಾರಕ್ಕೆ ಮೂರು ಬಾರಿ ಮತ್ತು ಬೆಂಗಳೂರು-ಮಾಲೆ ಮಧ್ಯೆ ವಾರಕ್ಕೆ ಎರಡು ಬಾರಿ ವಿಮಾನ ಸೇವೆ ಇರಲಿದೆ. ಗೋಏರ್ ಮೊಬೈಲ್ ಆ್ಯಪ್ನಲ್ಲಿಯೂ ಟಿಕೆಟ್ ಖರೀದಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ.