ನವದೆಹಲಿ: ಪಿಂಚಣಿದಾರರ ಖಾತೆಗಳಿಗೆ ಪಿಂಚಣಿ ಮೊತ್ತವನ್ನು ಜಮಾ ಮಾಡಿದ ನಂತರ, ಅದರ ವಿವರವನ್ನು ಬ್ಯಾಂಕ್ಗಳು ಎಸ್ಎಂಎಸ್ ಹಾಗೂ ಇ–ಮೇಲ್ ಜೊತೆ ವಾಟ್ಸ್ಆ್ಯಪ್ ಮೂಲಕವೂ ರವಾನಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಪಿಂಚಣಿ ಮತ್ತು ಪಿಂಚಣಿದಾರರ ಅಭಿವೃದ್ಧಿ ಇಲಾಖೆಯು ಈ ಸಂಬಂಧ ಆದೇಶ ಹೊರಡಿಸಿದೆ. ‘ಪಿಂಚಣಿ ವಿತರಣೆ ಮಾಡುವ ಬ್ಯಾಂಕ್ಗಳು ಪಿಂಚಣಿ ಚೀಟಿಯನ್ನು ಪಿಂಚಣಿದಾರರಿಗೆ ನೀಡಬೇಕು. ಅದರಲ್ಲಿ, ಜಮಾ ಆಗಿರುವ ಪಿಂಚಣಿ ಮೊತ್ತ, ಕಡಿತ ಮಾಡಿರುವ ತೆರಿಗೆ ಮೊತ್ತ ನಮೂದಾಗಿರಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.