<p><strong>ನವದೆಹಲಿ</strong>: ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆ ಮಾಡುವ ಯೋಜನೆಗಳಿಗೆ ಅನುಮೋದನೆ ನೀಡುವುದನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.</p>.<p>ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯವು ಹೋಟೆಲ್ಗಳು, ಉದ್ಯಮಗಳು ಹಾಗೂ ಕುಟುಂಬಗಳನ್ನು ಬಾಧಿಸುವುದು ಮುಂದುವರಿದಿರುವ ಹೊತ್ತಿನಲ್ಲಿ ಈ ಸೂಚನೆ ಬಂದಿದೆ. ಇನ್ನೊಂದೆಡೆ, ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿರುವ ಗ್ರಾಹಕರು, ಸಿಲಿಂಡರ್ ಪಡೆಯಲು ಹೆಚ್ಚಿನ ಅವಧಿಗೆ ಕಾಯಬೇಕಾಗುತ್ತಿದೆ.</p>.<p>ಪಶ್ಚಿಮ ಏಷ್ಯಾದಲ್ಲಿನ ಸಮರವು ಭಾರತಕ್ಕೆ ಎಲ್ಪಿಜಿ ಪೂರೈಕೆಗೆ ಅಡ್ಡಿ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಇಂಡಕ್ಷನ್ ಕುಕ್ಟಾಪ್ ಸೇರಿದಂತೆ ವಿವಿಧ ಪರ್ಯಾಯಗಳ ಬಳಕೆಗೆ ಒತ್ತು ನೀಡಲಾರಂಭಿಸಿದೆ.</p>.<p>‘ಪರಿಸ್ಥಿತಿಯು ಕಳವಳಕಾರಿ ಆಗಿಯೇ ಇದೆ. ಆದರೆ ನಾವು ಮನೆಬಳಕೆಗೆ ಎಲ್ಪಿಜಿ ಪೂರೈಕೆಯನ್ನು ಮೊದಲಿನ ರೀತಿಯಲ್ಲಿಯೇ ಮಾಡುತ್ತಿದ್ದೇವೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದರು.</p>.<p>‘ಆದರೆ ನಾವು ಪರ್ಯಾಯಗಳತ್ತ ಗಮನ ಹರಿಸಬೇಕಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>ಭೀತಿಗೆ ಒಳಗಾಗಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಮಾರ್ಚ್ 13ರಂದು ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ದಿನ ಒಟ್ಟು 87.7 ಲಕ್ಷ ಬುಕಿಂಗ್ ಬಂದಿದ್ದವು. ಸೋಮವಾರದ ಹೊತ್ತಿಗೆ ಬುಕಿಂಗ್ ಸಂಖ್ಯೆಯು ಸರಿಸುಮಾರು 70 ಲಕ್ಷಕ್ಕೆ ಇಳಿಕೆಯಾಗಿದೆ. ಯುದ್ಧಕ್ಕೂ ಮೊದಲು ದಿನವೊಂದಕ್ಕೆ 55 ಲಕ್ಷ ಬುಕಿಂಗ್ ಬರುತ್ತಿದ್ದವು ಎಂದು ಸುಜಾತಾ ತಿಳಿಸಿದರು.</p>.<p>ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸಾಕಾಗುವಷ್ಟು ಇದೆ ಎಂಬ ಭರವಸೆ ನೀಡಲಾಗಿದ್ದರೂ, ಜನ ಭೀತಿಗೆ ಒಳಗಾಗಿ ಬುಕ್ ಮಾಡುವುದು ನಿಂತಿಲ್ಲ ಎಂದರು. ಮಾರ್ಚ್ 5ರ ಮಟ್ಟಕ್ಕೆ ಹೋಲಿಸಿದರೆ ದೇಶಿ ಎಲ್ಪಿಜಿ ಉತ್ಪಾದನೆಯು ಶೇ 38ರಷ್ಟು ಹೆಚ್ಚಳ ಕಂಡಿದೆ.</p>.<p>ಎಲ್ಪಿಜಿ ಬೇಡಿಕೆ ಮೇಲಿನ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಹಾಗೂ ಮನೆಬಳಕೆ ಎಲ್ಪಿಜಿ ಗ್ರಾಹಕರಿಗೆ ಪಿಎನ್ಜಿ ಬಳಕೆ ಮಾಡುವಂತೆ ಒತ್ತಾಯಿಸುತ್ತಿದೆ. ನಗರ ಅನಿಲ ಪೂರೈಕೆ (ಪಿಎನ್ಜಿ ಪೂರೈಸುವ) ಕಂಪನಿಗಳು ತ್ವರಿತವಾಗಿ ಸಂಪರ್ಕ ಒದಗಿಸುತ್ತಿವೆ, ಉತ್ತೇಜನ ಕ್ರಮಗಳನ್ನು ಪ್ರಕಟಿಸಿವೆ.</p>.<p>‘ಕೇಂದ್ರ ಸರ್ಕಾರ ಕೂಡ ಪಿಎನ್ಜಿ ಜಾಲವನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ಬಳಕೆ ಎಲ್ಪಿಜಿ ದಾಸ್ತಾನನ್ನು ರಾಜ್ಯಗಳ ಕೈಗೆ ನೀಡಲಾಗಿದೆ. ಆದ್ಯತೆ ಮೇರೆಗೆ ಅದರ ಬಳಕೆ ಬಗ್ಗೆ ತೀರ್ಮಾನಿಸುವಂತೆ ರಾಜ್ಯಗಳನ್ನು ಕೋರಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಎಲ್ಪಿಜಿ ವಿತರಣೆಗೆ ಮಾರ್ಗಸೂಚಿ ಪ್ರಕಟಿಸಿವೆ ಎಂದು ಸುಜಾತಾ ಅವರು ವಿವರಿಸಿದರು.</p>.<p><strong>ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ</strong></p><p>ಮಾರ್ಚ್ 16ರಂದು ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳು ಹೀಗಿವೆ</p><ul><li><p>ಪಿಎನ್ಜಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು</p> </li><li><p> ಬೃಹತ್ ಪ್ರಮಾಣದ ನಗರ ಅನಿಲ ಯೋಜನೆಗಳಿಗೆ ಅನುಮತಿ ಕೋರಿರುವ ಅರ್ಜಿ ಬಾಕಿ ಇದ್ದಲ್ಲಿ, ಪರಿಭಾವಿತ ಅನುಮೋದನೆ ನೀಡಬೇಕು</p> </li><li><p> ಹೊಸದಾದ ನಗರ ಅನಿಲ ಯೋಜನೆಗೆ 24 ಗಂಟೆಗಳಲ್ಲಿ ಅನುಮೋದನೆ ನೀಡಬೇಕು</p> </li><li><p> ರಸ್ತೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಶುಲ್ಕವನ್ನು ಮನ್ನಾ ಮಾಡಬೇಕು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕೊಳವೆ ಮೂಲಕ ನೈಸರ್ಗಿಕ ಅನಿಲ (ಪಿಎನ್ಜಿ) ಪೂರೈಕೆ ಮಾಡುವ ಯೋಜನೆಗಳಿಗೆ ಅನುಮೋದನೆ ನೀಡುವುದನ್ನು ಚುರುಕುಗೊಳಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚನೆ ನೀಡಿದೆ.</p>.<p>ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯವು ಹೋಟೆಲ್ಗಳು, ಉದ್ಯಮಗಳು ಹಾಗೂ ಕುಟುಂಬಗಳನ್ನು ಬಾಧಿಸುವುದು ಮುಂದುವರಿದಿರುವ ಹೊತ್ತಿನಲ್ಲಿ ಈ ಸೂಚನೆ ಬಂದಿದೆ. ಇನ್ನೊಂದೆಡೆ, ಎಲ್ಪಿಜಿ ಸಿಲಿಂಡರ್ ಬುಕ್ ಮಾಡಿರುವ ಗ್ರಾಹಕರು, ಸಿಲಿಂಡರ್ ಪಡೆಯಲು ಹೆಚ್ಚಿನ ಅವಧಿಗೆ ಕಾಯಬೇಕಾಗುತ್ತಿದೆ.</p>.<p>ಪಶ್ಚಿಮ ಏಷ್ಯಾದಲ್ಲಿನ ಸಮರವು ಭಾರತಕ್ಕೆ ಎಲ್ಪಿಜಿ ಪೂರೈಕೆಗೆ ಅಡ್ಡಿ ಉಂಟುಮಾಡಿದೆ. ಹೀಗಾಗಿ ಕೇಂದ್ರ ಸರ್ಕಾರವು ಇಂಡಕ್ಷನ್ ಕುಕ್ಟಾಪ್ ಸೇರಿದಂತೆ ವಿವಿಧ ಪರ್ಯಾಯಗಳ ಬಳಕೆಗೆ ಒತ್ತು ನೀಡಲಾರಂಭಿಸಿದೆ.</p>.<p>‘ಪರಿಸ್ಥಿತಿಯು ಕಳವಳಕಾರಿ ಆಗಿಯೇ ಇದೆ. ಆದರೆ ನಾವು ಮನೆಬಳಕೆಗೆ ಎಲ್ಪಿಜಿ ಪೂರೈಕೆಯನ್ನು ಮೊದಲಿನ ರೀತಿಯಲ್ಲಿಯೇ ಮಾಡುತ್ತಿದ್ದೇವೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದರು.</p>.<p>‘ಆದರೆ ನಾವು ಪರ್ಯಾಯಗಳತ್ತ ಗಮನ ಹರಿಸಬೇಕಾಗಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>ಭೀತಿಗೆ ಒಳಗಾಗಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಮಾರ್ಚ್ 13ರಂದು ಗರಿಷ್ಠ ಮಟ್ಟವನ್ನು ತಲುಪಿತ್ತು. ಆ ದಿನ ಒಟ್ಟು 87.7 ಲಕ್ಷ ಬುಕಿಂಗ್ ಬಂದಿದ್ದವು. ಸೋಮವಾರದ ಹೊತ್ತಿಗೆ ಬುಕಿಂಗ್ ಸಂಖ್ಯೆಯು ಸರಿಸುಮಾರು 70 ಲಕ್ಷಕ್ಕೆ ಇಳಿಕೆಯಾಗಿದೆ. ಯುದ್ಧಕ್ಕೂ ಮೊದಲು ದಿನವೊಂದಕ್ಕೆ 55 ಲಕ್ಷ ಬುಕಿಂಗ್ ಬರುತ್ತಿದ್ದವು ಎಂದು ಸುಜಾತಾ ತಿಳಿಸಿದರು.</p>.<p>ಮನೆಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಸಾಕಾಗುವಷ್ಟು ಇದೆ ಎಂಬ ಭರವಸೆ ನೀಡಲಾಗಿದ್ದರೂ, ಜನ ಭೀತಿಗೆ ಒಳಗಾಗಿ ಬುಕ್ ಮಾಡುವುದು ನಿಂತಿಲ್ಲ ಎಂದರು. ಮಾರ್ಚ್ 5ರ ಮಟ್ಟಕ್ಕೆ ಹೋಲಿಸಿದರೆ ದೇಶಿ ಎಲ್ಪಿಜಿ ಉತ್ಪಾದನೆಯು ಶೇ 38ರಷ್ಟು ಹೆಚ್ಚಳ ಕಂಡಿದೆ.</p>.<p>ಎಲ್ಪಿಜಿ ಬೇಡಿಕೆ ಮೇಲಿನ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆ ಹಾಗೂ ಮನೆಬಳಕೆ ಎಲ್ಪಿಜಿ ಗ್ರಾಹಕರಿಗೆ ಪಿಎನ್ಜಿ ಬಳಕೆ ಮಾಡುವಂತೆ ಒತ್ತಾಯಿಸುತ್ತಿದೆ. ನಗರ ಅನಿಲ ಪೂರೈಕೆ (ಪಿಎನ್ಜಿ ಪೂರೈಸುವ) ಕಂಪನಿಗಳು ತ್ವರಿತವಾಗಿ ಸಂಪರ್ಕ ಒದಗಿಸುತ್ತಿವೆ, ಉತ್ತೇಜನ ಕ್ರಮಗಳನ್ನು ಪ್ರಕಟಿಸಿವೆ.</p>.<p>‘ಕೇಂದ್ರ ಸರ್ಕಾರ ಕೂಡ ಪಿಎನ್ಜಿ ಜಾಲವನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಹೇಳಿದರು.</p>.<p>ವಾಣಿಜ್ಯ ಬಳಕೆ ಎಲ್ಪಿಜಿ ದಾಸ್ತಾನನ್ನು ರಾಜ್ಯಗಳ ಕೈಗೆ ನೀಡಲಾಗಿದೆ. ಆದ್ಯತೆ ಮೇರೆಗೆ ಅದರ ಬಳಕೆ ಬಗ್ಗೆ ತೀರ್ಮಾನಿಸುವಂತೆ ರಾಜ್ಯಗಳನ್ನು ಕೋರಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಎಲ್ಪಿಜಿ ವಿತರಣೆಗೆ ಮಾರ್ಗಸೂಚಿ ಪ್ರಕಟಿಸಿವೆ ಎಂದು ಸುಜಾತಾ ಅವರು ವಿವರಿಸಿದರು.</p>.<p><strong>ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ</strong></p><p>ಮಾರ್ಚ್ 16ರಂದು ಬರೆದಿರುವ ಪತ್ರದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳು ಹೀಗಿವೆ</p><ul><li><p>ಪಿಎನ್ಜಿ ಯೋಜನೆಗಳಿಗೆ ತ್ವರಿತವಾಗಿ ಅನುಮೋದನೆ ನೀಡಬೇಕು</p> </li><li><p> ಬೃಹತ್ ಪ್ರಮಾಣದ ನಗರ ಅನಿಲ ಯೋಜನೆಗಳಿಗೆ ಅನುಮತಿ ಕೋರಿರುವ ಅರ್ಜಿ ಬಾಕಿ ಇದ್ದಲ್ಲಿ, ಪರಿಭಾವಿತ ಅನುಮೋದನೆ ನೀಡಬೇಕು</p> </li><li><p> ಹೊಸದಾದ ನಗರ ಅನಿಲ ಯೋಜನೆಗೆ 24 ಗಂಟೆಗಳಲ್ಲಿ ಅನುಮೋದನೆ ನೀಡಬೇಕು</p> </li><li><p> ರಸ್ತೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಶುಲ್ಕವನ್ನು ಮನ್ನಾ ಮಾಡಬೇಕು</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>