ಮುಂಬೈ: ‘ದೇಶದ ಬ್ಯಾಂಕಿಂಗ್ ವ್ಯವಸ್ಥೆ ಸುರಕ್ಷಿತವಾಗಿದೆ. ಗಾಬರಿ ಬೀಳುವ ಅಗತ್ಯ ಇಲ್ಲ’ ಎಂದು ಆರ್ಬಿಐ ಭರವಸೆ ನೀಡಿದೆ.
ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ–ಆಪರೇಟಿವ್ ಬ್ಯಾಂಕ್ನ (ಪಿಎಂಸಿ) ಬಿಕ್ಕಟ್ಟನ್ನೂ ಒಳಗೊಂಡು ಹಣಕಾಸು ವಲಯದ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಆರ್ಬಿಐ ಈ ಹೇಳಿಕೆ ನೀಡಿದೆ.
ಬ್ಯಾಂಕಿಂಗ್ ವಲಯದ ಷೇರುಗಳು ಮಂಗಳವಾರ ಹೆಚ್ಚಿನ ನಷ್ಟ ಕಂಡಿವೆ.
ಸಹಕಾರಿ ಬ್ಯಾಂಕ್ಗಳನ್ನೂ ಒಳಗೊಂಡು ಕೆಲವು ಬ್ಯಾಂಕ್ಗಳ ಬಗ್ಗೆ ವದಂತಿಗಳು ಹರಿದಾಡುತ್ತಿದ್ದು, ಠೇವಣಿದಾರರಲ್ಲಿ ಆತಂಕ ಸೃಷ್ಟಿಸುವಂತೆ ಮಾಡಿವೆ. ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರನ್ನು ಉದ್ದೇಶಿಸಿ ಆರ್ಬಿಐ ಟ್ವೀಟ್ ಮಾಡಿದೆ.