ಮುಂಬೈ: ನಿರ್ಬಂಧಕ್ಕೆ ಒಳಪಟ್ಟಿರುವ ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ಗ್ರಾಹಕರು ಠೇವಣಿ ವಾಪಸ್ ಪಡೆಯುವ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ₹ 1 ಲಕ್ಷಕ್ಕೆ ಹೆಚ್ಚಿಸಿದೆ.
ಮಿತಿ ಸಡಿಲಿಕೆಯಿಂದ ಪ್ರತಿಯೊಬ್ಬ ಗ್ರಾಹಕ ಈಗ ಗರಿಷ್ಠ ₹ 1 ಲಕ್ಷದವರೆಗಿನ ತಮ್ಮ ಠೇವಣಿ ಮೊತ್ತವನ್ನು ಹಿಂದೆ ಪಡೆಯಬಹುದು. ಇದು ಈ ಹಿಂದೆ ಅನುಮತಿ ನೀಡಲಾಗಿದ್ದ ₹ 35 ಸಾವಿರ ಮೊತ್ತವನ್ನೂ ಒಳಗೊಂಡಿರಲಿದೆ.
ಈ ಹೊಸ ಸಡಿಲಿಕೆಯಿಂದ ಬ್ಯಾಂಕ್ನ ಶೇ 54ಕ್ಕೂ ಹೆಚ್ಚು ಠೇವಣಿದಾರರು ತಮ್ಮೆಲ್ಲ ಹಣವನ್ನು ಹಿಂದೆ ಪಡೆಯಲು ಸಾಧ್ಯವಾಗಲಿದೆ ಎಂದು ಆರ್ಬಿಐ ತಿಳಿಸಿದೆ.
ಪಂಜಾಬ್ ಆ್ಯಂಡ್ ಮಹಾರಾಷ್ಟ್ರ ಕೋ–ಆಪರೇಟಿವ್ ಬ್ಯಾಂಕ್ (ಪಿಎಂಸಿ) ಸೇರಿದಂತೆ ಒಟ್ಟು ಐದು ಸಹಕಾರಿ ಬ್ಯಾಂಕ್ಗಳಿಂದ ಠೇವಣಿ ಹಿಂದೆ ಪಡೆಯುವ ಮಿತಿಯನ್ನು ಆರ್ಬಿಐ ಹೆಚ್ಚಿಸಿದೆ.