ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬ್ಯಾಂಕಿಂಗ್ ವ್ಯವಸ್ಥೆ ದೃಢ: ಶಕ್ತಿಕಾಂತ ದಾಸ್

Last Updated 17 ಮಾರ್ಚ್ 2023, 15:14 IST
ಅಕ್ಷರ ಗಾತ್ರ

ಮುಂಬೈ: ಆಸ್ತಿ ಹಾಗೂ ಹೊರೆ ನಡುವೆ ಅಸಮತೋಲನ ಹೆಚ್ಚಾಗದಂತೆ ಬ್ಯಾಂಕ್‌ಗಳು ನಿಗಾ ವಹಿಸಬೇಕು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕಿವಿಮಾತು ಹೇಳಿದ್ದಾರೆ. ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಮೂಡುವುದಕ್ಕೆ ಅಸಮತೋಲನವು ಕಾರಣವಾಗಿರಬಹುದು ಎಂದು ಅವರು ಅಂದಾಜು ಮಾಡಿದ್ದಾರೆ.

ಕೊಚ್ಚಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ದೃಢವಾಗಿದೆ, ಹಣದುಬ್ಬರದ ಕೆಟ್ಟ ದಿನಗಳು ಮುಗಿದಿವೆ’ ಎಂದು ಹೇಳಿದ್ದಾರೆ.

ಅಮೆರಿಕದ ಡಾಲರ್‌ ಮೌಲ್ಯವು ಹೆಚ್ಚುತ್ತಲೇ ಇರುವುದು ರಾಷ್ಟ್ರಗಳ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು ಎಂಬ ಆತಂಕದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದಾಸ್, ‘ಇಲ್ಲಿ ನಾವು ಭಯಪಡಬೇಕಾದ ಅಗತ್ಯವಿಲ್ಲ. ನಮ್ಮ ವಿದೇಶಿ ಸಾಲವು ನಿಭಾಯಿಸಬಹುದಾದ ಮಟ್ಟದಲ್ಲಿ ಇದೆ. ಹೀಗಾಗಿ ಡಾಲರ್ ಮೌಲ್ಯ ವೃದ್ಧಿಯು ನಮಗೆ ಯಾವುದೇ ಸಮಸ್ಯೆಯನ್ನು ತರುವುದಿಲ್ಲ’ ಎಂದಿದ್ದಾರೆ.

ಕ್ರಿಪ್ಟೊಕರೆನ್ಸಿಗಳು ಹಣಕಾಸು ವ್ಯವಸ್ಥೆಗೆ ಒಡ್ಡುವ ಅಪಾಯಗಳನ್ನು ಕೂಡ ಅಮೆರಿಕದಲ್ಲಿನ ಬ್ಯಾಂಕಿಂಗ್ ಬಿಕ್ಕಟ್ಟು ಸ್ಪಷ್ಟವಾಗಿ ತೋರಿಸುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT