‘ಆರ್ಥಿಕ ವೃದ್ಧಿ ದರವು ಕುಸಿತದ ಹಾದಿಯಲ್ಲಿ ಸಾಗಲಿರುವುದನ್ನು ಕೇಂದ್ರೀಯ ಬ್ಯಾಂಕ್ ಮುಂಚಿತವಾಗಿಯೇ ಅಂದಾಜಿಸಿತ್ತು. ಇದೇ ಕಾರಣಕ್ಕೆ ನಾವು ಅಲ್ಪಾವಧಿ ಬಡ್ಡಿ ದರ ಕಡಿತದ ವಿಷಯದಲ್ಲಿ ಫೆಬ್ರುವರಿ ತಿಂಗಳಿನಲ್ಲಿಯೇ ಮುಂದಾಲೋಚನೆಯ ನಿರ್ಧಾರ ಕೈಗೊಂಡಿದ್ದೆವು. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲೆಂಬ ಉದ್ದೇಶದಿಂದ ನಿರಂತರವಾಗಿ ರೆಪೊ ದರ ಇಳಿಕೆ ಮಾಡುತ್ತ ಬರಲಾಗಿತ್ತು’ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.