‘ಈ ಘಟನೆಯ ಪ್ರಾಮುಖ್ಯತೆಯನ್ನು ನಾನು ವಿಪರೀತವಾಗಿ ಬಿಂಬಿಸುತ್ತಿದ್ದೆನೆ ಎಂದು ನನ್ನನ್ನು ದೂಷಿಸಬಹುದು. ಆದರೆ, ಏರ್ ಇಂಡಿಯಾದಲ್ಲಿನ ಸರ್ಕಾರದ ಷೇರು ಹಿಂತೆಗೆತವು, ಭಾರತೀಯ ಔದ್ಯಮಿಕ ರಂಗದ ಪುನಾರಚನೆಗೆ ದಾರಿ ಮಾಡಿಕೊಡಬಹುದು ಎಂದು ನಾನು ಭಾವಿಸುತ್ತೇನೆ. ಹೌದು, ಸರ್ಕಾರ ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಯತ್ನಿಸುತ್ತಿರಬಹುದು. ಆದರೆ ಖಾಸಗಿ ರಂಗದ ಮೇಲೆ ದಶಕಗಳ ನಂತರ ತನ್ನ ನಂಬಿಕೆಯನ್ನು ಮರುಸ್ಥಾಪಿಸುತ್ತಿದೆ,‘ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.