‘ಬೆಂಗಳೂರಿನಲ್ಲಿರುವ ಜವಾಹರ ಲಾಲ್ ನೆಹರೂ ತಾರಾಲಯಕ್ಕಿಂತ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ತಾರಾಲಯವನ್ನು ಸೈನ್ಸ್ ಸಿಟಿಯಲ್ಲಿ ಸ್ಥಾಪಿಸಲಾಗುವುದು. ಈಗಾಗಲೇ ಮಂಗಳೂರಿನ ಪಿಳಿಕುಳದಲ್ಲಿ ಇಂಥ ತಾರಾಲಯ ನಿರ್ಮಿಸಲಾಗಿದೆ. ಜೊತೆಗೆ ವಿಜ್ಞಾನ ಮಾದರಿಗಳನ್ನು ಇಡಲಾಗುವುದು. ವಿಜ್ಞಾನದ ಬೆಳವಣಿಗೆ, ವಿಸ್ಮಯ, ಕೊಡುಗೆ, ಯಾವ ರೀತಿ ಸಂಶೋಧನೆ ಕೈಗೆತ್ತಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ಇರಲಿದೆ. ವಿಜ್ಞಾನ ಪ್ರದರ್ಶನದ ಜೊತೆಗೆ ನಿರಂತರ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಇದೆ. ಪ್ರಯೋಗದ ಮೂಲಕ ಜ್ಞಾನ ವಿಸ್ತಾರ ಮಾಡುವ ಕೇಂದ್ರ ಇದಾಗಲಿದೆ’ ಎಂದು ವಿವರಿಸಿದರು.