<p><strong>ಭುವನೇಶ್ವರ:</strong> ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ದೇಶದ ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯು ಬಹಳ ಹೆಚ್ಚಾಗಿದ್ದರೂ, ‘ಭಿನ್ನ ಬಗೆಯ ಆಘಾತಗಳನ್ನು ತಾಳಿಕೊಳ್ಳುವ ಶಕ್ತಿಯು ಭಾರತದ ಮಾರುಕಟ್ಟೆಗಳಿಗೆ ಇದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.</p>.<p>ಜಗತ್ತಿನ ಒಂದು ಕಡೆ ಬಿಕ್ಕಟ್ಟು ಸೃಷ್ಟಿಯಾದಾಗ ಅದು ಇತರ ಕಡೆಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂದು ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ. ಇಲ್ಲಿ ನಡೆದ, ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಪ್ರಾದೇಶಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.</p>.<p>‘ಯುದ್ಧದ ಕಾರಣದಿಂದಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಉಂಟಾಗಿದೆ... ಭಾರತದ ಮಾರುಕಟ್ಟೆಗಳ ಅನುಕೂಲವೆಂದರೆ, ಬೇರೆ ಬೇರೆ ಬಗೆಯ ಆಘಾತಗಳನ್ನು ಇವು ತಾಳಿಕೊಳ್ಳಬಲ್ಲವು. ಬಿಕ್ಕಟ್ಟುಗಳು ಕೊನೆಗೊಂಡ ನಂತರದಲ್ಲಿ ಮಾರುಕಟ್ಟೆಗಳು ತಮ್ಮ ಎಂದಿನ ಚಲನೆಯನ್ನು ಮತ್ತೆ ಪಡೆಯಲಿವೆ’ ಎಂದು ಪಾಂಡೆ ವಿವರಿಸಿದ್ದಾರೆ.</p>.<p class="bodytext">ಹಣಕಾಸು ಹಾಗೂ ಷೇರುಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡುವ ‘ಫಿನ್ಫ್ಲುಯೆನ್ಸರ್’ಗಳು ಮೊದಲು ಸೆಬಿ ಬಳಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ:</strong> ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ದೇಶದ ಷೇರು ಮಾರುಕಟ್ಟೆಗಳಲ್ಲಿ ಅನಿಶ್ಚಿತತೆಯು ಬಹಳ ಹೆಚ್ಚಾಗಿದ್ದರೂ, ‘ಭಿನ್ನ ಬಗೆಯ ಆಘಾತಗಳನ್ನು ತಾಳಿಕೊಳ್ಳುವ ಶಕ್ತಿಯು ಭಾರತದ ಮಾರುಕಟ್ಟೆಗಳಿಗೆ ಇದೆ’ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.</p>.<p>ಜಗತ್ತಿನ ಒಂದು ಕಡೆ ಬಿಕ್ಕಟ್ಟು ಸೃಷ್ಟಿಯಾದಾಗ ಅದು ಇತರ ಕಡೆಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂದು ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ. ಇಲ್ಲಿ ನಡೆದ, ಹೂಡಿಕೆದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಪ್ರಾದೇಶಿಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.</p>.<p>‘ಯುದ್ಧದ ಕಾರಣದಿಂದಾಗಿ ಇಂಧನ ಪೂರೈಕೆಯ ಮೇಲೆ ಪರಿಣಾಮ ಉಂಟಾಗಿದೆ... ಭಾರತದ ಮಾರುಕಟ್ಟೆಗಳ ಅನುಕೂಲವೆಂದರೆ, ಬೇರೆ ಬೇರೆ ಬಗೆಯ ಆಘಾತಗಳನ್ನು ಇವು ತಾಳಿಕೊಳ್ಳಬಲ್ಲವು. ಬಿಕ್ಕಟ್ಟುಗಳು ಕೊನೆಗೊಂಡ ನಂತರದಲ್ಲಿ ಮಾರುಕಟ್ಟೆಗಳು ತಮ್ಮ ಎಂದಿನ ಚಲನೆಯನ್ನು ಮತ್ತೆ ಪಡೆಯಲಿವೆ’ ಎಂದು ಪಾಂಡೆ ವಿವರಿಸಿದ್ದಾರೆ.</p>.<p class="bodytext">ಹಣಕಾಸು ಹಾಗೂ ಷೇರುಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡುವ ‘ಫಿನ್ಫ್ಲುಯೆನ್ಸರ್’ಗಳು ಮೊದಲು ಸೆಬಿ ಬಳಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>