‘ಯುರೋಪಿನ ಮಾರುಕಟ್ಟೆಗಳು ಆರ್ಥಿಕ ಹಿಂಜರಿತದ ಭಯದಿಂದ ಹೊರಬರಲು ಹೆಣಗಾಡಿದ್ದರಿಂದ ಮಧ್ಯಾಹ್ನದ ವಹಿವಾಟಿನಲ್ಲಿ ಷೇರುಪೇಟೆಗಳು ತಮ್ಮ ಗಳಿಕೆಯಲ್ಲಿ ಒಂದಿಷ್ಟು ಕಳೆದುಕೊಂಡವು. ಆದರೆ, ಅಂತಿಮವಾಗಿ ಗಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸುವಲ್ಲಿ ಯಶಸ್ವಿಯಾದವು’ ಎಂದು ಆನಂದ ರಾಠಿ ಕಂಪನಿಯ ಈಕ್ವಿಟಿ ಸಂಶೋಧನೆಯ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.