<p><strong>ಮುಂಬೈ:</strong> ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನಗೊಳ್ಳುವ ಆಶಾಭಾವ ಮೂಡಿದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆ ಕಂಡಿತು. ಇದರ ಪರಿಣಾಮವಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರ ತೇಜಿ ವಹಿವಾಟು ನಡೆಯಿತು.</p>.<p>ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 940 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 298 ಅಂಶ ಏರಿಕೆ ಕಂಡವು. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ತಮ ವಹಿವಾಟು ಕೂಡ ದೇಶಿ ಮಾರುಕಟ್ಟೆಗಳಿಗೆ ಹುರುಪು ತುಂಬಿದವು.</p>.<p>ಸಾಲ ಖಾತರಿ ಯೋಜನೆಯ ಘೋಷಣೆ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯ ಪರಿಣಾಮವಾಗಿ ಇಂಟರ್ಗ್ಲೋಬ್ ಏವಿಯೇಷನ್ ಕಂಪನಿಯ ಷೇರುಮೌಲ್ಯವು ಶೇ 6.6ರಷ್ಟು ಹೆಚ್ಚಳ ಕಂಡಿತು.</p>.<p>‘ಮಾರುಕಟ್ಟೆ ಜಿಗಿತಕ್ಕೆ ಜಾಗತಿಕ ಸಂಗತಿಗಳೇ ಮುಖ್ಯವಾಗಿದ್ದವು. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದವೊಂದು ಸಾಧ್ಯವಾಗುತ್ತದೆ ಎಂಬ ಆಶಾವಾದವು ಕಚ್ಚಾ ತೈಲದ ಬೆಲೆಯು ತೀವ್ರವಾಗಿ ಇಳಿಕೆ ಕಾಣಲು ಕಾರಣವಾಯಿತು’ ಎಂದು ಲಿವ್ಲಾಂಗ್ ವೆಲ್ತ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ. ಹೇಳಿದ್ದಾರೆ.</p>.<p>ಕೇಂದ್ರ ಸಚಿವ ಸಂಪುಟವು ಸಾಲ ಖಾತರಿ ಯೋಜನೆಯನ್ನು ಘೋಷಣೆ ಮಾಡಿರುವುದು ಬ್ಯಾಂಕಿಂಗ್ ವಲಯದ ಷೇರುಗಳಿಗೆ ನೆರವಾಯಿತು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.</p>.<p>ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 8ರಷ್ಟು ಇಳಿಕೆ ಆಗಿ ಬ್ಯಾರಲ್ಗೆ 101.1 ಡಾಲರ್ಗೆ ತಲುಪಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಶಮನಗೊಳ್ಳುವ ಆಶಾಭಾವ ಮೂಡಿದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆ ಕಂಡಿತು. ಇದರ ಪರಿಣಾಮವಾಗಿ ದೇಶದ ಷೇರುಪೇಟೆಗಳಲ್ಲಿ ಬುಧವಾರ ತೇಜಿ ವಹಿವಾಟು ನಡೆಯಿತು.</p>.<p>ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 940 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 298 ಅಂಶ ಏರಿಕೆ ಕಂಡವು. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಉತ್ತಮ ವಹಿವಾಟು ಕೂಡ ದೇಶಿ ಮಾರುಕಟ್ಟೆಗಳಿಗೆ ಹುರುಪು ತುಂಬಿದವು.</p>.<p>ಸಾಲ ಖಾತರಿ ಯೋಜನೆಯ ಘೋಷಣೆ ಹಾಗೂ ಕಚ್ಚಾ ತೈಲದ ಬೆಲೆ ಇಳಿಕೆಯ ಪರಿಣಾಮವಾಗಿ ಇಂಟರ್ಗ್ಲೋಬ್ ಏವಿಯೇಷನ್ ಕಂಪನಿಯ ಷೇರುಮೌಲ್ಯವು ಶೇ 6.6ರಷ್ಟು ಹೆಚ್ಚಳ ಕಂಡಿತು.</p>.<p>‘ಮಾರುಕಟ್ಟೆ ಜಿಗಿತಕ್ಕೆ ಜಾಗತಿಕ ಸಂಗತಿಗಳೇ ಮುಖ್ಯವಾಗಿದ್ದವು. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದವೊಂದು ಸಾಧ್ಯವಾಗುತ್ತದೆ ಎಂಬ ಆಶಾವಾದವು ಕಚ್ಚಾ ತೈಲದ ಬೆಲೆಯು ತೀವ್ರವಾಗಿ ಇಳಿಕೆ ಕಾಣಲು ಕಾರಣವಾಯಿತು’ ಎಂದು ಲಿವ್ಲಾಂಗ್ ವೆಲ್ತ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಹರಿಪ್ರಸಾದ್ ಕೆ. ಹೇಳಿದ್ದಾರೆ.</p>.<p>ಕೇಂದ್ರ ಸಚಿವ ಸಂಪುಟವು ಸಾಲ ಖಾತರಿ ಯೋಜನೆಯನ್ನು ಘೋಷಣೆ ಮಾಡಿರುವುದು ಬ್ಯಾಂಕಿಂಗ್ ವಲಯದ ಷೇರುಗಳಿಗೆ ನೆರವಾಯಿತು ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ಹಿರಿಯ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದ್ದಾರೆ.</p>.<p>ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ 8ರಷ್ಟು ಇಳಿಕೆ ಆಗಿ ಬ್ಯಾರಲ್ಗೆ 101.1 ಡಾಲರ್ಗೆ ತಲುಪಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>