ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಸ್ಥರೂ ಮಾತನ್ನು ಶೋಧಿಸಿ ಹೊರ ಹಾಕುತ್ತಿಲ್ಲ. ಗಾಜಿನ ಮನೆಯೊಳಗೆ ಇದ್ದೂ ಕಲ್ಲು ಎಸೆವ ರೀತಿ ಅತ್ಯಂತ ಬೇಜವಾಬ್ದಾರಿ, ನಾಚಿಕೆಗೇಡಿನ ವಿಷಯ. ಸಾಧಾರಣೀಕೃತ ನಿಂದೆ ಮಾತ್ರ ಅಲ್ಲದೆ ವೈಯಕ್ತಿಕ ನೆಲೆಯಲ್ಲಿ ಕೆಟ್ಟ, ಅಸಭ್ಯ, ಕೀಳು ಶಬ್ದಗಳನ್ನು ಬಳಸಿ ಬೈಯುವುದೂ ವರದಿಯಾಗುತ್ತಿದೆ. ವೋಟು ಕೇಳುವ ಕ್ರಮ ಇದಲ್ಲ.