ಕೋಮತಿರೆಡ್ಡಿ ಅವರು ನಲ್ಗೊಂಡ ಜಿಲ್ಲೆಯಲ್ಲಿ ಇತ್ತೀಚೆಗೆ ಹತ್ಯೆಯಾದ ಬೊಡ್ಡುಪಲ್ಲಿ ಶ್ರೀನಿವಾಸ ಅವರ ಆಪ್ತ. ಈ ಹತ್ಯೆ ಹಿಂದೆ ಆಡಳಿತಾರೂಢ ಟಿಆರ್ಎಸ್ ಕೈವಾಡವಿದೆ ಎಂಬುದು ಅವರ ಆರೋಪ. ಘಟನೆ ನಡೆದ ದಿನದಿಂದಲೂ ಟಿಆರ್ಎಸ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಲೇ ಇದೆ. ಆಡಳಿತಾರೂಢ ಪಕ್ಷದ ವಿರುದ್ಧ ಸೇಡು ತೀರಿಸಿಕೊಳ್ಳುವ ಎಚ್ಚರಿಕೆಯನ್ನೂ ನೀಡುತ್ತಾ ಬಂದಿದೆ.