ಬೆಂಗಳೂರು: ತಿರುಪತಿಯಲ್ಲಿ ತಾಜ್ ಹೋಟೆಲ್ ಕಾರ್ಯಾರಂಭ ಮಾಡಿದೆ. ‘ತಿರುಪತಿ ಬೆಟ್ಟದ ತಪ್ಪಲಿನಲ್ಲಿ ಇರುವ ‘ತಾಜ್ ತಿರುಪತಿ’, ಧಾರ್ಮಿಕ ಸ್ಥಳದಲ್ಲಿ ಪ್ರವಾಸಿಗರಿಗೆ ಅತ್ಯುತ್ತಮ ಆತಿಥ್ಯ ಒದಗಿಸಲಿದೆ’ ಎಂದು ಹೋಟೆಲ್ನ ಚೀಫ್ ಮ್ಯಾನೇಜರ್ ವಿ.ಕೆ.ಪ್ರಸಾದ್ ತಿಳಿಸಿದ್ದಾರೆ.
ಒನ್ಪ್ಲಸ್ ಮಾರುಕಟ್ಟೆ ವಿಸ್ತರಣೆ
ಬೆಂಗಳೂರು: ಮೊಬೈಲ್ ತಂತ್ರಜ್ಞಾನ ಸಂಸ್ಥೆ ಒನ್ಪ್ಲಸ್, ರಾಜ್ಯದಲ್ಲಿ ತನ್ನ ರಿಟೇಲ್ ಮಾರುಕಟ್ಟೆ ವಿಸ್ತರಿಸಲು ಪ್ರಮುಖ ವಿತರಣಾ ಸಂಸ್ಥೆ ಆ್ಯರೋಹೆಡ್ ಕಮ್ಯುನಿಕೇಷನ್ ಜತೆ ಒಪ್ಪಂದ ಮಾಡಿಕೊಂಡಿದೆ.
ಈ ಪಾಲುದಾರಿಕೆ ಫಲವಾಗಿ ಗ್ರಾಹಕರು ಒನ್ಪ್ಲಸ್ ಸ್ಮಾರ್ಟ್ಫೋನ್ಗಳನ್ನು ರಾಜ್ಯದಾದ್ಯಂತ ಇರುವ ಮಾರಾಟ ಮಳಿಗೆಗಳಲ್ಲಿ (ಆಫ್ಲೈನ್) ಖರೀದಿಸಬಹುದಾಗಿದೆ. ಒನ್ಪ್ಲಸ್ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯದಲ್ಲಿ ಬಳಕೆದಾರರ ಬಳಿಗೆ ಸ್ಮಾರ್ಟ್ಫೋನ್ಗಳನ್ನು ಕೊಂಡೊಯ್ಯಲು ಈ ಒಪ್ಪಂದ ನೆರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.