<p>ಷೇರುಪೇಟೆ ಹೂಡಿಕೆ ಉತ್ಪನ್ನಕ್ಕಿಂತಲೂ, ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳತ್ತ ನಗರ ಮತ್ತು ಗ್ರಾಮೀಣ ಭಾಗದ ಕುಟುಂಬಗಳಿಗೆ ಹೆಚ್ಚಿನ ಒಲವಿದೆ.</p><p>ಷೇರುಪೇಟೆಯ ಒಂದಾದರೂ ಹೂಡಿಕೆ ಉತ್ಪನ್ನದ ಬಗ್ಗೆ ದೇಶದಲ್ಲಿನ ಶೇ 63ರಷ್ಟು ಕುಟುಂಬಗಳಿಗೆ ಅರಿವು ಇದೆ. ಈ ಪೈಕಿ ನಗರ ಪ್ರದೇಶದಲ್ಲಿನ ಶೇ 74ರಷ್ಟು ಕುಟುಂಬಗಳಿಗೆ ಅರಿವು ಇದ್ದರೆ, ಗ್ರಾಮೀಣ ಭಾಗದಲ್ಲಿನ ಶೇ 56ರಷ್ಟು ಕುಟುಂಬಗಳಿಗೆ ಮಾತ್ರ ಮಾಹಿತಿ ಇದೆ.</p><p>ಆದರೆ, ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ನಿಶ್ಚಿತ ಠೇವಣಿ, ಆರ್.ಡಿ ಬಗ್ಗೆ ಒಟ್ಟಾರೆ ಶೇ 98ರಷ್ಟು ಕುಟುಂಬಗಳಿಗೆ ತಿಳಿದಿದೆ. ಈ ಪೈಕಿ ನಗರ ಪ್ರದೇಶದಲ್ಲಿನ ಕುಟುಂಬಗಳಿಗೆ ಶೇ 99ರಷ್ಟು ಮತ್ತು ಗ್ರಾಮೀಣ ಭಾಗದ ಶೇ 98ರಷ್ಟು ಕುಟುಂಬಗಳಿಗೆ ಅರಿವು ಇದೆ.</p><p>ನಗರ ಪ್ರದೇಶದಲ್ಲಿನ ಕುಟುಂಬಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ ಅಂಚೆ ಕಚೇರಿಯ ಉಳಿತಾಯ ಖಾತೆ, ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಬಗ್ಗೆ ಹೆಚ್ಚಿನ ಒಲವಿದೆ.</p><p>ಕರ್ನಾಟಕಕ್ಕೆ ಎರಡನೇ ಸ್ಥಾನ: ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿನ ಶೇ 72ರಷ್ಟು ಕುಟುಂಬಗಳಿಗೆ ಷೇರುಪೇಟೆಯ ಉತ್ಪನ್ನದ ಬಗ್ಗೆ ಅರಿವಿದ್ದು, ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಶೇ 76ರಷ್ಟಿದೆ. ಕೇರಳದಲ್ಲಿ ಶೇ 69, ತೆಲಂಗಾಣ ಶೇ 68 ಮತ್ತು ಆಂಧ್ರ ಪ್ರದೇಶದಲ್ಲಿ ಶೇ 50ರಷ್ಟಿದೆ. </p><p>ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢದಲ್ಲಿನ ಶೇ 100ರಷ್ಟು ಕುಟುಂಬಗಳಿಗೆ ಅರಿವು ಇದೆ. ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಶೇ 78ರಷ್ಟು ಇದ್ದು, ಅಗ್ರಸ್ಥಾನದಲ್ಲಿದೆ. ನಾಗಲ್ಯಾಂಡ್ನಲ್ಲಿ ಅತಿ ಕಡಿಮೆ ಶೇ 35ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಷೇರುಪೇಟೆ ಹೂಡಿಕೆ ಉತ್ಪನ್ನಕ್ಕಿಂತಲೂ, ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳತ್ತ ನಗರ ಮತ್ತು ಗ್ರಾಮೀಣ ಭಾಗದ ಕುಟುಂಬಗಳಿಗೆ ಹೆಚ್ಚಿನ ಒಲವಿದೆ.</p><p>ಷೇರುಪೇಟೆಯ ಒಂದಾದರೂ ಹೂಡಿಕೆ ಉತ್ಪನ್ನದ ಬಗ್ಗೆ ದೇಶದಲ್ಲಿನ ಶೇ 63ರಷ್ಟು ಕುಟುಂಬಗಳಿಗೆ ಅರಿವು ಇದೆ. ಈ ಪೈಕಿ ನಗರ ಪ್ರದೇಶದಲ್ಲಿನ ಶೇ 74ರಷ್ಟು ಕುಟುಂಬಗಳಿಗೆ ಅರಿವು ಇದ್ದರೆ, ಗ್ರಾಮೀಣ ಭಾಗದಲ್ಲಿನ ಶೇ 56ರಷ್ಟು ಕುಟುಂಬಗಳಿಗೆ ಮಾತ್ರ ಮಾಹಿತಿ ಇದೆ.</p><p>ಆದರೆ, ಬ್ಯಾಂಕ್ ಅಥವಾ ಅಂಚೆ ಕಚೇರಿಗಳ ನಿಶ್ಚಿತ ಠೇವಣಿ, ಆರ್.ಡಿ ಬಗ್ಗೆ ಒಟ್ಟಾರೆ ಶೇ 98ರಷ್ಟು ಕುಟುಂಬಗಳಿಗೆ ತಿಳಿದಿದೆ. ಈ ಪೈಕಿ ನಗರ ಪ್ರದೇಶದಲ್ಲಿನ ಕುಟುಂಬಗಳಿಗೆ ಶೇ 99ರಷ್ಟು ಮತ್ತು ಗ್ರಾಮೀಣ ಭಾಗದ ಶೇ 98ರಷ್ಟು ಕುಟುಂಬಗಳಿಗೆ ಅರಿವು ಇದೆ.</p><p>ನಗರ ಪ್ರದೇಶದಲ್ಲಿನ ಕುಟುಂಬಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಕುಟುಂಬಗಳಿಗೆ ಅಂಚೆ ಕಚೇರಿಯ ಉಳಿತಾಯ ಖಾತೆ, ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಬಗ್ಗೆ ಹೆಚ್ಚಿನ ಒಲವಿದೆ.</p><p>ಕರ್ನಾಟಕಕ್ಕೆ ಎರಡನೇ ಸ್ಥಾನ: ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿನ ಶೇ 72ರಷ್ಟು ಕುಟುಂಬಗಳಿಗೆ ಷೇರುಪೇಟೆಯ ಉತ್ಪನ್ನದ ಬಗ್ಗೆ ಅರಿವಿದ್ದು, ಎರಡನೇ ಸ್ಥಾನದಲ್ಲಿದೆ. ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ಶೇ 76ರಷ್ಟಿದೆ. ಕೇರಳದಲ್ಲಿ ಶೇ 69, ತೆಲಂಗಾಣ ಶೇ 68 ಮತ್ತು ಆಂಧ್ರ ಪ್ರದೇಶದಲ್ಲಿ ಶೇ 50ರಷ್ಟಿದೆ. </p><p>ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಢದಲ್ಲಿನ ಶೇ 100ರಷ್ಟು ಕುಟುಂಬಗಳಿಗೆ ಅರಿವು ಇದೆ. ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದಲ್ಲಿ ಶೇ 78ರಷ್ಟು ಇದ್ದು, ಅಗ್ರಸ್ಥಾನದಲ್ಲಿದೆ. ನಾಗಲ್ಯಾಂಡ್ನಲ್ಲಿ ಅತಿ ಕಡಿಮೆ ಶೇ 35ರಷ್ಟಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>