‘ಭಾರತ ಸದ್ಯಕ್ಕೆ ‘ಬಿಎಎ’ ಮಾನದಂಡ ಹೊಂದಿರುವ ದೇಶವಾಗಿದೆ. ಕೆಲವೊಮ್ಮೆ ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ವಹಿವಾಟು ನಡೆಸಬೇಕಾಗುತ್ತದೆ. 2013ರಲ್ಲಿ ಕರೆನ್ಸಿ ಅದಲು ಬದಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂತಹ ಸಂದರ್ಭ ಮತ್ತೆ ಉದ್ಭವವಾದರೆ ಗರಿಷ್ಠ ಮಟ್ಟದ ಮಾನದಂಡ ಇರಬೇಕಾಗುತ್ತದೆ. ಆರ್ಬಿಐನ ಬ್ಯಾಲನ್ಸ್ಶೀಟ್, ಆಕ್ಷೇಪಗಳಿಂದಲೂ ಮುಕ್ತವಾಗಿರಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.