ನವದೆಹಲಿ (ಪಿಟಿಐ): ವಂದೇ ಭಾರತ್ ರೈಲುಗಳ ಚಕ್ರಗಳನ್ನು ಉಕ್ರೇನ್ನಿಂದ ತರಿಸಿಕೊಳ್ಳುವ ಯೋಜನೆಗೆ ಯುದ್ಧದ ಕಾರಣದಿಂದ ಅಡ್ಡಿ ಉಂಟಾಗಿದ್ದು, ಆ ಚಕ್ರಗಳನ್ನು ಬೆಂಗಳೂರಿನಲ್ಲಿ ತಯಾರಿಸಲು ಭಾರತೀಯ ರೈಲ್ವೆ ತೀರ್ಮಾನಿಸಿದೆ.
ಒಟ್ಟು 36 ಸಾವಿರ ಚಕ್ರಗಳ ಪೈಕಿ 128 ಚಕ್ರಗಳನ್ನು ಉಕ್ರೇನ್ನಿಂದ ರಸ್ತೆ ಮಾರ್ಗವಾಗಿ ರೊಮೇನಿಯಾಕ್ಕೆ ಸಾಗಿಸಲಾಗಿದೆ. ಅಲ್ಲಿಂದ ವಿಮಾನದಲ್ಲಿ ಅವುಗಳನ್ನು ಈ ತಿಂಗಳ ಮೂರನೆಯ ವಾರದಲ್ಲಿ ತರಬೇಕಿದೆ ಎಂದು ಮೂಲಗಳು ತಿಳಿಸಿವೆ.
ಯುದ್ಧದಿಂದಾಗಿ ಉಕ್ರೇನ್ನಲ್ಲಿ ತಯಾರಿಕಾ ಚಟುವಟಿಕೆ ಸ್ಥಗಿತಗೊಂಡಿದೆ. ಹೀಗಾಗಿ, ಬೆಂಗಳೂರಿನ ಯಲಹಂಕದಲ್ಲಿರುವ ರೈಲ್ವೆ ಚಕ್ರ ಕಾರ್ಖಾನೆಯು ಈ ಚಕ್ರಗಳ ತಯಾರಿಕೆಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಿದೆ ಎಂದು ಗೊತ್ತಾಗಿದೆ. ತಯಾರಿಕೆಯು ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.