ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, 'ಇಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್ ಕೇವಲ ಹೊಸ ಭರವಸೆಗಳೊಂದಿಗೆ ಸಾರ್ವಜನಿಕರನ್ನು ಓಲೈಸಲು ಘೋಷಿಸಲಾಗಿದೆ. ಆದರೆ, ಹಿಂದೆ ನೀಡಿದ್ದ ಭರವಸೆಗಳು ಮತ್ತು ಹಳೆಯ ಘೋಷಣೆಗಳ ಅನುಷ್ಠಾನವನ್ನು ಮರೆಯಲಾಗಿದೆ. ಇದು ಎಷ್ಟು ಸೂಕ್ತ? ಬಡತನ, ನಿರುದ್ಯೋಗ, ಹಣದುಬ್ಬರ ಮತ್ತು ರೈತರ ಆತ್ಮಹತ್ಯೆಗಳ ಚಿಂತೆಯಿಂದ ಕೇಂದ್ರ ಏಕೆ ಮುಕ್ತವಾಗಿದೆ' ಎಂದು ಪ್ರಶ್ನಿಸಿದ್ದಾರೆ.