ರೈತರ ಸಾಲ ಮನ್ನಾ, ಉಚಿತ ಲ್ಯಾಪ್ಟಾಪ್ ವಿತರಣೆಯಂಥ ಯೋಜನೆಗಳ ಮೂಲಕ ಪಕ್ಷಗಳು, ಸರ್ಕಾರದ ಮುಂದೆ ಜನರು ಕೈ ಚಾಚಿ ನಿಲ್ಲುವಂತೆ ಮಾಡುತ್ತಿವೆ. ಹಸಿದವರಿಗೆ ಮೀನು ಕೊಡುವ ಕೆಲಸ ಆಗುವುದೇ ಹೊರತು ಮೀನು ಹಿಡಿಯುವುದನ್ನು ಕಲಿಸುತ್ತಿಲ್ಲ. ಅಷ್ಟೇ ಅಲ್ಲ, ನಾಯಕರು ಜನರಿಗೆ ಮೀನು ಕೊಟ್ಟು, ತಾವು ತಿಮಿಂಗಿಲವನ್ನೇ ನುಂಗುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಾದರೂ ಜನರು ರಾಜಕೀಯ ಪಕ್ಷಗಳ ಮರ್ಮವನ್ನು ಅರಿತು ಮತ ಹಾಕಬೇಕಾಗಿದೆ.