<p><em>ಮಲ್ಲಿಕಾರ್ಜುನ ನಾಲವಾರ</em></p>.<p>ಯಾದಗಿರಿ: ಸ್ಥಿರಾಸ್ತಿಗಳ ನೋಂದಣಿಯ ಮುದ್ರಾಂಕ ಶುಲ್ಕ ಏರಿಕೆಯ ನಡುವೆಯೂ 2025–26ರ ಆರ್ಥಿಕ ವರ್ಷದಲ್ಲಿ ಜಿಲ್ಲಾ ಉಪನೋಂದಣಿ ಕಚೇರಿಯ ಆದಾಯ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಏರಿಕೆಯಾಗಿದ್ದರೂ ನಿಗದಿಪಡಿಸಿದ ಗುರಿ ಮುಟ್ಟಿಲು ಆಗಿಲ್ಲ.</p>.<p>ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರವು ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಕೆ ಮಾಡಿತ್ತು. ಆದರೂ ಸ್ಥಿರಾಸ್ತಿ ನೋಂದಣಿಯ ಆದಾಯದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಆಗಿಲ್ಲ ಎನ್ನುತ್ತವೆ ಉಪನೋಂದಣಿ ಕಚೇರಿಯ ಅಂಕಿಅಂಶಗಳು.</p>.<p>2024–25ನೇ ಆರ್ಥಿಕ ವರ್ಷಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಜಿಲ್ಲಾ ಉಪನೋಂದಣಿ ಕಚೇರಿಗೆ ₹ 76 ಕೋಟಿ ರಾಜಸ್ವ ಗುರಿಯನ್ನು ನೀಡಿತ್ತು. ಅದರಲ್ಲಿ ₹68 ಕೋಟಿ ಸಂಗ್ರಹ ಮಾಡಿ, ಶೇ89.5ರಷ್ಟು ಸಾಧನೆ ಮಾಡಿತ್ತು.</p>.<p>ಈ ವರ್ಷದ 2025–26ನೇ ಸಾಲಿಗೆ ₹87 ಕೋಟಿ ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ 2026ರ ಮಾರ್ಚ್ 23ರ ವರೆಗೆ ₹76.3 ಕೋಟಿ ಸಂಗ್ರಹಿಸಿ ಶೇ87.7ರಷ್ಟು ಸಾಧನೆ ಮಾಡಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಒಂದು ವಾರ ಬಾಕಿ ಇರುವಂತೆ ಕಳೆದ ವರ್ಷಕ್ಕಿಂತ ₹8.3 ಕೋಟಿ ಹೆಚ್ಚುವರಿ ಆದಾಯ ಬಂದಿದ್ದರೂ ನಿಗದಿತ ಗುರಿ ಮುಟ್ಟಲು ಆಗಿಲ್ಲ. </p>.<p>ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಯಾದಗಿರಿ ತಾಲ್ಲೂಕು, ಶಹಾಪುರ, ಸುರಪುರ ಮತ್ತ ಹುಣಸಗಿ ತಾಲ್ಲೂಕುಗಳ ಉಪನೋಂದಣಿ ಕಚೇರಿಗಳ ಮೂಲಕ ರಾಜಸ್ವ ಹರಿದುಬರುತ್ತದೆ. ಜಿಲ್ಲಾ ಕೇಂದ್ರವಾದ ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ ₹32.68 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಸಂಗ್ರಹದಲ್ಲಿ ಶೇ 42.83ರಷ್ಟು ಆದಾಯ ಯಾದಗಿರಿ ತಾಲ್ಲೂಕು ಉಪನೋಂದಣಿ ಕಚೇರಿದ್ದು ಇದೆ.</p>.<p>ಉಳಿದಂತೆ ಶಹಾಪುರ ತಾಲ್ಲೂಕು ಉಪನೋಂದಣಿ ಕಚೇರಿಯಿಂದ ₹23.18 ಕೋಟಿ, ಸುರಪುರ ಮತ್ತು ಹುಣಸಗಿ ತಾಲ್ಲೂಕು ಉಪನೋಂದಣಿ ಕಚೇರಿಗಳಿಂದ ಕ್ರಮವಾಗಿ ₹12.87 ಕೋಟಿ ಹಾಗೂ ₹ 7.55 ಕೋಟೆ ಆದಾಯ ಹರಿದುಬಂದಿದೆ. </p>.<p>ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್, ಫ್ಲ್ಯಾಟ್ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರದ ಅನ್ವಯ ನೋಂದಣಿ ಶುಲ್ಕ ವಿಧಿಸಲಾಗುತ್ತದೆ.</p>.<p>‘ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಫಾರ್ಮ್ ನಂಬರ್ 9, 11 ಖಾತೆಗಳ ವಿತರಣೆ ಸರಿಯಾಗಿ ಆಗಿಲ್ಲ. ನಗರ ಸಭೆಯ ಮಟ್ಟದಲ್ಲಿ ಫಾರ್ಮ್ ನಂಬರ್ 3 ವಿತರಣೆಯೂ ಕಡಿಮೆಯಾಗಿದೆ. ಕೆಲವು ವಾರಗಳ ಮಟ್ಟಿಗೆ ಸರ್ವರ್ ಸಮಸ್ಯೆಯಾಗಿತ್ತು. ಇದರಿಂದಾಗಿ ರಾಜಸ್ವ ಸಂಗ್ರಹದಲ್ಲಿ ಕಡಿಮೆ ಆಗಿರಬಹುದು’ ಎನ್ನುತ್ತಾರೆ ಕಚೇರಿಯ ಅಧಿಕಾರಿಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-30-1294588828</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em>ಮಲ್ಲಿಕಾರ್ಜುನ ನಾಲವಾರ</em></p>.<p>ಯಾದಗಿರಿ: ಸ್ಥಿರಾಸ್ತಿಗಳ ನೋಂದಣಿಯ ಮುದ್ರಾಂಕ ಶುಲ್ಕ ಏರಿಕೆಯ ನಡುವೆಯೂ 2025–26ರ ಆರ್ಥಿಕ ವರ್ಷದಲ್ಲಿ ಜಿಲ್ಲಾ ಉಪನೋಂದಣಿ ಕಚೇರಿಯ ಆದಾಯ ಸಂಗ್ರಹದಲ್ಲಿ ಕಳೆದ ವರ್ಷಕ್ಕಿಂತ ಏರಿಕೆಯಾಗಿದ್ದರೂ ನಿಗದಿಪಡಿಸಿದ ಗುರಿ ಮುಟ್ಟಿಲು ಆಗಿಲ್ಲ.</p>.<p>ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ರಾಜ್ಯ ಸರ್ಕಾರವು ಸ್ಥಿರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಕೆ ಮಾಡಿತ್ತು. ಆದರೂ ಸ್ಥಿರಾಸ್ತಿ ನೋಂದಣಿಯ ಆದಾಯದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಆಗಿಲ್ಲ ಎನ್ನುತ್ತವೆ ಉಪನೋಂದಣಿ ಕಚೇರಿಯ ಅಂಕಿಅಂಶಗಳು.</p>.<p>2024–25ನೇ ಆರ್ಥಿಕ ವರ್ಷಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಜಿಲ್ಲಾ ಉಪನೋಂದಣಿ ಕಚೇರಿಗೆ ₹ 76 ಕೋಟಿ ರಾಜಸ್ವ ಗುರಿಯನ್ನು ನೀಡಿತ್ತು. ಅದರಲ್ಲಿ ₹68 ಕೋಟಿ ಸಂಗ್ರಹ ಮಾಡಿ, ಶೇ89.5ರಷ್ಟು ಸಾಧನೆ ಮಾಡಿತ್ತು.</p>.<p>ಈ ವರ್ಷದ 2025–26ನೇ ಸಾಲಿಗೆ ₹87 ಕೋಟಿ ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ 2026ರ ಮಾರ್ಚ್ 23ರ ವರೆಗೆ ₹76.3 ಕೋಟಿ ಸಂಗ್ರಹಿಸಿ ಶೇ87.7ರಷ್ಟು ಸಾಧನೆ ಮಾಡಿದೆ. ಆರ್ಥಿಕ ವರ್ಷ ಮುಗಿಯಲು ಇನ್ನೂ ಒಂದು ವಾರ ಬಾಕಿ ಇರುವಂತೆ ಕಳೆದ ವರ್ಷಕ್ಕಿಂತ ₹8.3 ಕೋಟಿ ಹೆಚ್ಚುವರಿ ಆದಾಯ ಬಂದಿದ್ದರೂ ನಿಗದಿತ ಗುರಿ ಮುಟ್ಟಲು ಆಗಿಲ್ಲ. </p>.<p>ಜಿಲ್ಲಾ ಉಪನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ಯಾದಗಿರಿ ತಾಲ್ಲೂಕು, ಶಹಾಪುರ, ಸುರಪುರ ಮತ್ತ ಹುಣಸಗಿ ತಾಲ್ಲೂಕುಗಳ ಉಪನೋಂದಣಿ ಕಚೇರಿಗಳ ಮೂಲಕ ರಾಜಸ್ವ ಹರಿದುಬರುತ್ತದೆ. ಜಿಲ್ಲಾ ಕೇಂದ್ರವಾದ ಯಾದಗಿರಿ ತಾಲ್ಲೂಕಿನಲ್ಲಿ ಅತ್ಯಧಿಕ ₹32.68 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಸಂಗ್ರಹದಲ್ಲಿ ಶೇ 42.83ರಷ್ಟು ಆದಾಯ ಯಾದಗಿರಿ ತಾಲ್ಲೂಕು ಉಪನೋಂದಣಿ ಕಚೇರಿದ್ದು ಇದೆ.</p>.<p>ಉಳಿದಂತೆ ಶಹಾಪುರ ತಾಲ್ಲೂಕು ಉಪನೋಂದಣಿ ಕಚೇರಿಯಿಂದ ₹23.18 ಕೋಟಿ, ಸುರಪುರ ಮತ್ತು ಹುಣಸಗಿ ತಾಲ್ಲೂಕು ಉಪನೋಂದಣಿ ಕಚೇರಿಗಳಿಂದ ಕ್ರಮವಾಗಿ ₹12.87 ಕೋಟಿ ಹಾಗೂ ₹ 7.55 ಕೋಟೆ ಆದಾಯ ಹರಿದುಬಂದಿದೆ. </p>.<p>ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್ಮೆಂಟ್, ಫ್ಲ್ಯಾಟ್ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರದ ಅನ್ವಯ ನೋಂದಣಿ ಶುಲ್ಕ ವಿಧಿಸಲಾಗುತ್ತದೆ.</p>.<p>‘ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಫಾರ್ಮ್ ನಂಬರ್ 9, 11 ಖಾತೆಗಳ ವಿತರಣೆ ಸರಿಯಾಗಿ ಆಗಿಲ್ಲ. ನಗರ ಸಭೆಯ ಮಟ್ಟದಲ್ಲಿ ಫಾರ್ಮ್ ನಂಬರ್ 3 ವಿತರಣೆಯೂ ಕಡಿಮೆಯಾಗಿದೆ. ಕೆಲವು ವಾರಗಳ ಮಟ್ಟಿಗೆ ಸರ್ವರ್ ಸಮಸ್ಯೆಯಾಗಿತ್ತು. ಇದರಿಂದಾಗಿ ರಾಜಸ್ವ ಸಂಗ್ರಹದಲ್ಲಿ ಕಡಿಮೆ ಆಗಿರಬಹುದು’ ಎನ್ನುತ್ತಾರೆ ಕಚೇರಿಯ ಅಧಿಕಾರಿಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260328-30-1294588828</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>