‘ನಗರೀಕರಣದ ಪ್ರಕ್ರಿಯೆ, ಮೂಲಸೌಕರ್ಯ ಬೆಳವಣಿಗೆ, ತಂತ್ರಜ್ಞಾನ ಬಳಕೆಯು ಈಗಷ್ಟೇ ಆರಂಭವಾಗಿದೆ. ಈಗ ಜಾರಿಗೊಳಿಸಿರುವ ಸುಧಾರಣಾ ಕ್ರಮಗಳಿಂದಾಗಿ ಮುಂದಿನ ಮೂರು ದಶಕಗಳಲ್ಲಿ ಭಾರಿ ಪ್ರಮಾಣದಲ್ಲಿ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ.ಭಾರತದ ಆರ್ಥಿಕತೆಯ ಬಗ್ಗೆ ಹಲವು ಸಕಾರಾತ್ಮಕ ಅಂಶಗಳಿವೆ. ಮೂಲಭೂತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ’ ಎಂದು ಅಮಿತಾಬ್ ತಿಳಿಸಿದ್ದಾರೆ.