<p>ಮಂಗಳೂರು: ನಗರದ ನೆಕ್ಸಸ್ ಫಿಜಾ ಮಾಲ್ನಲ್ಲಿ ‘ನಿಟ್ಟೆ- ಎಂಆರ್ಪಿಎಲ್ ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026’ ನಡೆಯಿತು. 2026ನೇ ಸಾಲಿನ ‘ಕೋಸ್ಟಲ್ ಸ್ಟಾರ್ಟ್ಅಪ್ ಎಕ್ಸಲೆನ್ಸ್ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು.</p>.<p>ಗೌರವ ಅತಿಥಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ‘ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ ಯುವಕರಿಗೆ ತಮ್ಮ ಯೋಚನೆ ಹಾಗೂ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುವ ವೇದಿಕೆ’ ಎಂದರು.</p>.<p>ಉತ್ಸವದಲ್ಲಿ ವಿವಿಧ ಅಧಿವೇಶನಗಳು ನಡೆದವು. ನವೋದ್ಯಮಗಳಿಗೆ ತಮ್ಮ ಆಲೋಚನೆಗಳನ್ನು ಪ್ರದರ್ಶಿಸಲು, ತಜ್ಞರೊಂದಿಗೆ ಸಂವಾದ ನಡೆಸಲು ಮತ್ತು ಅವರ ಸಹಕಾರ ಪಡೆಯಲು ಈ ಉತ್ಸವ ಒಂದು ವೇದಿಕೆ ಸೃಷ್ಟಿಸಿತು.</p>.<p>ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಆಲೂರ್, ಚಿನ್ಮಯ ವಿಶ್ವ ವಿದ್ಯಾಪೀಠದ ಡೀನ್ ಎಸ್. ಗ್ಲೋರಿ ಸ್ವರೂಪ, ಸಿರಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಮತ್ತು ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಮಾರ್ಗದರ್ಶಕ ಎಸ್.ಎಸ್. ನಾಯಕ್ ಸಮಾರಂಭದಲ್ಲಿ ಭಾಗವಹಿಸಿದ್ದರು.</p>.<p>ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಯುಸಿಐ) ಕಾರ್ಯದರ್ಶಿ ವಿಜಯೇಂದ್ರ ವಸಂತ್ ಸಮಾರಂಭವನ್ನು ಆಯೋಜಿಸಿದ್ದರು.</p>.<p>ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026: ವಿಶ್ವೇಶ್ವರ ಭಟ್, ಸಿಇಒ ರಾಕಾ ಇನಿಶಿಯೇಟಿವ್ ಪ್ರೈವೇಟ್ ಲಿಮಿಟೆಡ್ ಹಾಗೂ ಅನುಷಾ ಆಚಾರ್ಯ, ಸಂಸ್ಥಾಪಕಿ ಮಾವೇದಾಸ್ ಫುಡ್ಸ್ ಆ್ಯಂಡ್ ಸೀರಿಯಲ್ಸ್ ಪ್ರೈ. ಲಿ.</p>.<p>ಉದಯೋನ್ಮುಖ ಉದ್ಯಮ ಪ್ರಶಸ್ತಿ: ಆಶಿತ್ ಪ್ರಜ್ವಲ್, ಸಂಸ್ಥಾಪಕಿ, ಸಿಂಗ್ಯುಲಾರಿಟಿ ಆಟೋಮೊಬೈಲ್ ಪ್ರೈ. ಲಿ., ಸಂಗೀತ ನಾಯಕ್, ಸಂಸ್ಥಾಪಕಿ ಡಬ್ಲ್ಯುಡಬ್ಲ್ಯುಆರ್ ಇನ್ನೋವೇಶನ್ಸ್ ಪ್ರೈ. ಲಿ.</p>.<p>ಇನ್ನೋವೇಶನ್ ಎಕ್ಸಲೆನ್ಸ್ ಪ್ರಶಸ್ತಿ: ಆಡ್ರಿಯನ್ ಮೆಲ್ರಾಯ್ ಕಾರ್ನೆಲಿಯೊ, ಸಿಇಒ, ಟಿಎಡಿ ಏರ್ಕಾನ್ ಪ್ರೈ. ಲಿ.</p>.<p>ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸಾತ್ವಿಕ್ ಕೃಷ್ಣ, ಸಿಇಒ, ಸಮೃದ್ಧ್ ಆರ್ಗಾನಿಕ್ಸ್.</p>.<p>ಕರಾವಳಿ ಕರ್ನಾಟಕ ಮಹಿಳಾ ಸಬಲೀಕರಣ ಪ್ರಶಸ್ತಿ: ಪವರ್- ಮಹಿಳಾ ಉದ್ಯಮಿಗಳಿಗೆ ವೇದಿಕೆ</p>.<p>ಸ್ಪಾರ್ಕ್ 2026 - ವಿದ್ಯಾರ್ಥಿ: ಐಡಿಯಾ ಸ್ಪರ್ಧೆ– ವರ್ಷದ ಯುವ ಉದ್ಯಮಿ: ಮೆಲೂನ್ ಆಲ್ಬರ್ಟ್ ಪಿಂಟೊ ಹಾಗೂ ಸಾಯಿ ವರ್ಧನ್ ಜಿ., ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು.</p>.<p>ಇನ್ನೋವೇಶನ್ ಟ್ರೈಲ್ಬ್ಲೇಜರ್ ಪ್ರಶಸ್ತಿ: ಹರಿ ಹಾರ್ದಿಕ್ ಮತ್ತು ಸಮೃದ್ಧ್ ಎಂ., ಎನ್ಐಟಿಕೆ ಸುರತ್ಕಲ್.</p>.<p>ಎಕ್ಸಿಕ್ಯೂಷನ್ ಎಕ್ಸಲೆನ್ಸ್ ಪ್ರಶಸ್ತಿ: ರೋಹನ್ ಸ್ಟೀವ್ ಪಿಂಟೊ, ಸಿದ್ಧಾಂತ್ ಹಾಗೂ ಎಸ್. ಅಭಿನಯ, ಎನ್ಯುಎಸ್ಸಿಇಆರ್, ಮಂಗಳೂರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-28-124590932</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಗಳೂರು: ನಗರದ ನೆಕ್ಸಸ್ ಫಿಜಾ ಮಾಲ್ನಲ್ಲಿ ‘ನಿಟ್ಟೆ- ಎಂಆರ್ಪಿಎಲ್ ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026’ ನಡೆಯಿತು. 2026ನೇ ಸಾಲಿನ ‘ಕೋಸ್ಟಲ್ ಸ್ಟಾರ್ಟ್ಅಪ್ ಎಕ್ಸಲೆನ್ಸ್ ಪ್ರಶಸ್ತಿ’ಗಳನ್ನು ಪ್ರದಾನ ಮಾಡಲಾಯಿತು.</p>.<p>ಗೌರವ ಅತಿಥಿಯಾಗಿದ್ದ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ‘ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ ಯುವಕರಿಗೆ ತಮ್ಮ ಯೋಚನೆ ಹಾಗೂ ಜ್ಞಾನವನ್ನು ಹಂಚಿಕೊಳ್ಳಲು ಮತ್ತು ಪ್ರತಿಭೆಯನ್ನು ಪ್ರದರ್ಶಿಸಲು ಸಹಾಯ ಮಾಡುವ ವೇದಿಕೆ’ ಎಂದರು.</p>.<p>ಉತ್ಸವದಲ್ಲಿ ವಿವಿಧ ಅಧಿವೇಶನಗಳು ನಡೆದವು. ನವೋದ್ಯಮಗಳಿಗೆ ತಮ್ಮ ಆಲೋಚನೆಗಳನ್ನು ಪ್ರದರ್ಶಿಸಲು, ತಜ್ಞರೊಂದಿಗೆ ಸಂವಾದ ನಡೆಸಲು ಮತ್ತು ಅವರ ಸಹಕಾರ ಪಡೆಯಲು ಈ ಉತ್ಸವ ಒಂದು ವೇದಿಕೆ ಸೃಷ್ಟಿಸಿತು.</p>.<p>ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್. ಆಲೂರ್, ಚಿನ್ಮಯ ವಿಶ್ವ ವಿದ್ಯಾಪೀಠದ ಡೀನ್ ಎಸ್. ಗ್ಲೋರಿ ಸ್ವರೂಪ, ಸಿರಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ಮತ್ತು ಎಂಎಸ್ಎಂಇ ಮತ್ತು ಸ್ಟಾರ್ಟ್ಅಪ್ ಮಾರ್ಗದರ್ಶಕ ಎಸ್.ಎಸ್. ನಾಯಕ್ ಸಮಾರಂಭದಲ್ಲಿ ಭಾಗವಹಿಸಿದ್ದರು.</p>.<p>ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ (ಯುಸಿಐ) ಕಾರ್ಯದರ್ಶಿ ವಿಜಯೇಂದ್ರ ವಸಂತ್ ಸಮಾರಂಭವನ್ನು ಆಯೋಜಿಸಿದ್ದರು.</p>.<p>ಕೋಸ್ಟಲ್ ಸ್ಟಾರ್ಟ್ಅಪ್ ಫೆಸ್ಟ್ 2026: ವಿಶ್ವೇಶ್ವರ ಭಟ್, ಸಿಇಒ ರಾಕಾ ಇನಿಶಿಯೇಟಿವ್ ಪ್ರೈವೇಟ್ ಲಿಮಿಟೆಡ್ ಹಾಗೂ ಅನುಷಾ ಆಚಾರ್ಯ, ಸಂಸ್ಥಾಪಕಿ ಮಾವೇದಾಸ್ ಫುಡ್ಸ್ ಆ್ಯಂಡ್ ಸೀರಿಯಲ್ಸ್ ಪ್ರೈ. ಲಿ.</p>.<p>ಉದಯೋನ್ಮುಖ ಉದ್ಯಮ ಪ್ರಶಸ್ತಿ: ಆಶಿತ್ ಪ್ರಜ್ವಲ್, ಸಂಸ್ಥಾಪಕಿ, ಸಿಂಗ್ಯುಲಾರಿಟಿ ಆಟೋಮೊಬೈಲ್ ಪ್ರೈ. ಲಿ., ಸಂಗೀತ ನಾಯಕ್, ಸಂಸ್ಥಾಪಕಿ ಡಬ್ಲ್ಯುಡಬ್ಲ್ಯುಆರ್ ಇನ್ನೋವೇಶನ್ಸ್ ಪ್ರೈ. ಲಿ.</p>.<p>ಇನ್ನೋವೇಶನ್ ಎಕ್ಸಲೆನ್ಸ್ ಪ್ರಶಸ್ತಿ: ಆಡ್ರಿಯನ್ ಮೆಲ್ರಾಯ್ ಕಾರ್ನೆಲಿಯೊ, ಸಿಇಒ, ಟಿಎಡಿ ಏರ್ಕಾನ್ ಪ್ರೈ. ಲಿ.</p>.<p>ಪೀಪಲ್ಸ್ ಚಾಯ್ಸ್ ಪ್ರಶಸ್ತಿ: ಸಾತ್ವಿಕ್ ಕೃಷ್ಣ, ಸಿಇಒ, ಸಮೃದ್ಧ್ ಆರ್ಗಾನಿಕ್ಸ್.</p>.<p>ಕರಾವಳಿ ಕರ್ನಾಟಕ ಮಹಿಳಾ ಸಬಲೀಕರಣ ಪ್ರಶಸ್ತಿ: ಪವರ್- ಮಹಿಳಾ ಉದ್ಯಮಿಗಳಿಗೆ ವೇದಿಕೆ</p>.<p>ಸ್ಪಾರ್ಕ್ 2026 - ವಿದ್ಯಾರ್ಥಿ: ಐಡಿಯಾ ಸ್ಪರ್ಧೆ– ವರ್ಷದ ಯುವ ಉದ್ಯಮಿ: ಮೆಲೂನ್ ಆಲ್ಬರ್ಟ್ ಪಿಂಟೊ ಹಾಗೂ ಸಾಯಿ ವರ್ಧನ್ ಜಿ., ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು.</p>.<p>ಇನ್ನೋವೇಶನ್ ಟ್ರೈಲ್ಬ್ಲೇಜರ್ ಪ್ರಶಸ್ತಿ: ಹರಿ ಹಾರ್ದಿಕ್ ಮತ್ತು ಸಮೃದ್ಧ್ ಎಂ., ಎನ್ಐಟಿಕೆ ಸುರತ್ಕಲ್.</p>.<p>ಎಕ್ಸಿಕ್ಯೂಷನ್ ಎಕ್ಸಲೆನ್ಸ್ ಪ್ರಶಸ್ತಿ: ರೋಹನ್ ಸ್ಟೀವ್ ಪಿಂಟೊ, ಸಿದ್ಧಾಂತ್ ಹಾಗೂ ಎಸ್. ಅಭಿನಯ, ಎನ್ಯುಎಸ್ಸಿಇಆರ್, ಮಂಗಳೂರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-28-124590932</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>