ಬ್ಯಾಂಕಿನ ಅಧಿಕಾರಿಗಳು ಗ್ರಾಹಕರ ಮನೆಬಾಗಿಲಿಗೆ ಹೋಗಿ ಖಾತೆಗೆ ಸಂಬಂಧಪಟ್ಟ ವಿಷಯಗಳನ್ನು ಟ್ಯಾಬ್ನಲ್ಲಿ ಸಂಗ್ರಹಿಸಿ ತಕ್ಷಣವೇ ಎಕ್ಸ್ಪ್ರೆಸ್ ಉಳಿತಾಯ ಖಾತೆ ತೆರೆಯಲಿದ್ದು, ಸಕ್ರಿಯವಾಗಿರುವ ಡೆಬಿಟ್ ಕಾರ್ಡ್ ನೀಡುವರು. ಅಲ್ಲದೇ ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನೂ ಒದಗಿಸಲಿದ್ದಾರೆ. ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಎಸ್. ಮಹಾಬಲೇಶ್ವರ ಅವರು ಬೆಂಗಳೂರಿನಲ್ಲಿ ಈ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.