‘ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲ್ಗೊಳ್ಳುವಿಕೆಯು ಈಗಿನ ಜಿಗಿತಕ್ಕೆ ಕಾರಣ. ಹಣದುಬ್ಬರ ಹೆಚ್ಚಳವು ಪಶ್ಚಿಮದ ಮಾರುಕಟ್ಟೆಗಳನ್ನು ಕಾಡುತ್ತಿದ್ದರೂ, ದೇಶಿ ಅರ್ಥ ವ್ಯವಸ್ಥೆಯು ಗಟ್ಟಿತನ ತೋರಿಸಿದೆ. ಇದು ವಿದೇಶಿ ಹೂಡಿಕೆ ಮತ್ತೆ ಬರುತ್ತಿರುವುದಕ್ಕೆ ಕಾರಣ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.