ಅಮಾವಾಸ್ಯೆ, ಹಬ್ಬದ ದಿನಗಳಲ್ಲಿ ದೊರಕುವ ಧಾರಣೆಯೇ ನಮಗೆ ಲಾಭ. ಉಳಿದಂತೆ ನಿತ್ಯ ಬೆಲೆ ಅಷ್ಟಕ್ಕಷ್ಟೇ ಇರುತ್ತದೆ. ಇದು ಹೂವಿನ ಗಿಡಗಳ ನಿರ್ವಹಣೆಗೆ, ಔಷಧಿ ಸಿಂಪಡಣೆ ಖರ್ಚಿಗೆ ಸರಿಯಾಗಲಿದೆ. ಈ ಬಾರಿ ದಸರಾದಲ್ಲೂ ಹೇಳಿಕೊಳ್ಳುವಂಥ ಬೆಲೆ ಸಿಕ್ಕಿರಲಿಲ್ಲ. ದೀಪಾವಳಿ ಅಮಾವಾಸ್ಯೆ ಚಲೋ; ಆದರೆ, ಬಲಿಪಾಡ್ಯಮಿ ಬಂಪರ್ ಬೆಲೆ ಕೊಡಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.