ಕನ್ನಡಪರ ಹೋರಾಟಗಾರರಿಗೂ ಮುಖ್ಯಮಂತ್ರಿ ಇದೇ ಭಾಗ್ಯ ಕರುಣಿಸಿದ್ದಾರೆ. ಕನ್ನಡದ ಹೆಸರಲ್ಲಿ ಬೆಂಕಿ ಹಚ್ಚಿ, ಹಫ್ತಾ ವಸೂಲಿ ಮಾಡುವ ಪುಂಡು ಪೋಕರಿಗಳಿಗೆ ಇದರಿಂದ ಉತ್ತೇಜನ ಸಿಕ್ಕಿದಂತಾಗಿದೆ. ಒಂದು ವೇಳೆ ಬಿಜೆಪಿ ಸರ್ಕಾರ, ಹಿಂದೂ ಸಂಘಟನೆಗಳ ಕಿಡಿಗೇಡಿಗಳಿಗೆ ಬಿಡುಗಡೆ ಭಾಗ್ಯ ನೀಡಿದ್ದರೆ ಬುದ್ಧಿಜೀವಿಗಳು ಬೀದಿಗಿಳಿದು ಕೂಗಾಡುತ್ತಿದ್ದರು. ಈಗ ಬಾಯಿಗೆ ಬೀಗ ಹಾಕಿಕೊಂಡು ಕುಳಿತ್ತಿದ್ದಾರೆ. ಇದು ಅಲ್ಪಸಂಖ್ಯಾತರಿಗೆ ಅಭಯ ಅಲ್ಲ, ಅವರ ಓಲೈಕೆ ಎಂಬುದು ಪ್ರಾಥಮಿಕ ಶಾಲೆಯ ಮಕ್ಕಳಿಗೂ ಗೊತ್ತಾಗುತ್ತದೆ.