ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತೆಗೆ ಅವಮಾನ!

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಅವರು ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಮಹದೇವಪ್ಪ ಅವರನ್ನು ಕತ್ತೆಗೆ ಹೋಲಿಸಿರುವ ಕುರಿತು ನಂಜುಂಡಸ್ವಾಮಿ ‘ಬುದ್ಧ ಮತ್ತು ಭಜನೆ’ ಎಂಬ ಪತ್ರ ಬರೆದಿದ್ದಾರೆ (ವಾ.ವಾ., ಜ.30).

ಈ ಸಂದರ್ಭದಲ್ಲಿ ಬೀಚಿ ಅವರು ತಮ್ಮ ಮಾನಸಪುತ್ರ ತಿಮ್ಮನನ್ನು ಅವನ ಅಪ್ಪ ‘ಕತ್ತೆ’ ಎಂದು ಕರೆದಿರುವ ಬಗ್ಗೆ ಬರೆದಿರುವ ಕವನ ನೆನಪಾಗುತ್ತದೆ.

ಕತ್ತೆ... ಕತ್ತೆ... ಎಂದು ಮಾನವನ ಅಂದು
ಕತ್ತೆಯ ಮಾನವಂ ಏಕೆ ಕಳೆಯುವಿರಯ್ಯಾ
ಕತ್ತೆ ಕದಿಯದು, ಕತ್ತೆ ಹುಸಿನುಡಿಯದು
ಕತ್ತೆ ಎನ್ನಾತ್ಮ ಕಾಣ, ಕತ್ತೆಯ ತಂದೆ...!
ಪಾಪ... ಮಾನವರ ತಪ್ಪುಗಳಿಗೆ ಮಾನವನನ್ನು ಕತ್ತೆ ಎಂದು ಕರೆದು ಅದರ ಮಾನವನ್ನೇಕೆ ಕಳೆಯಬೇಕು, ಅಲ್ಲವೇ?

ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT