ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನ ಸ್ಥಿತಿಗೂ ಈಗಿನ ಸ್ಥಿತಿಗೂ ಅಜ–ಗಜಾಂತರ ಇದೆ. ರಾಜಕೀಯ–ಶೈಕ್ಷಣಿಕ–ಸಾಮಾಜಿಕ ಬದಲಾವಣೆ ದೇಶದ ನಾಗರಿಕರನ್ನು ಸ್ವತಂತ್ರವಾಗಿ ಚಿಂತಿಸುವಂತೆ, ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ರಾಜಕೀಯ ಫಲಿತಾಂಶಗಳು ಬೇರೆ ಬೇರೆ ನೆಲೆಯಲ್ಲಿ ತೀರ್ಮಾನವಾಗುತ್ತಿವೆ. ಲೋಕಸಭೆ, ವಿಧಾನಸಭೆ ಫಲಿತಾಂಶ ಅತಂತ್ರವಾದಾಗ, ಬಹುಮತ ಏರುಪೇರಾದಾಗ ಮಧ್ಯಂತರ ಚುನಾವಣೆ ಎದುರಾಗುತ್ತದೆ. ಅದೇ ಪ್ರಜಾಪ್ರಭುತ್ವದ ಸೌಂದರ್ಯ.