‘ತಾಲ್ಲೂಕಿನಲ್ಲಿ ಸತತ ಆರೇಳು ವರ್ಷಗಳಿಂದ ಬರಗಾಲ ತಾಂಡವವಾಡುತ್ತಿದೆ. ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಅಡಿಕೆ, ತೆಂಗಿನ ತೋಟಗಳು ಒಣಗುತ್ತಿವೆ. ಬಡತನದಿಂದಾಗಿ ಮಾರ್ಚ್ 8ರಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರ್ಕಾರಿ ಉದ್ಯೋಗ ಪಡೆಯುವುದು ಸಾಹಸದ ಕೆಲಸ. ಹೀಗಾಗಿ ದಲಿತರು, ಬಡವರು, ನಿರ್ಗತಿಕರ ಬದುಕಿಗೆ ಆಸರೆಯಾಗಲಿ ಎಂಬ ಕಾರಣಕ್ಕೆ ಮೇಳ ಆಯೋಜಿಸಿದ್ದೇವೆ. ಕನಿಷ್ಠ 5,000 ಯುವಕ–ಯುವತಿಯರಿಗೆ ಉದ್ಯೋಗ ಕೊಡಿಸಬೇಕೆಂಬ ಪ್ರಯತ್ನ ನಮ್ಮದು. ಕಂಪನಿಗಳು ಇಚ್ಛಿಸುವ ಕೌಶಲ ಇರುವ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪತ್ರ ಕೊಡಲಾಗುತ್ತದೆ. ಕೌಶಲ ಇಲ್ಲದವರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 90 ದಿನಗಳ ಕೌಶಲ ತರಬೇತಿ ನೀಡಿ, ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದ್ದಾರೆ.