‘ಈ ದೇಶದ ಜಿರಲೆಗಳು’ ಎಂದು ತಮ್ಮನ್ನು ಕರೆದುಕೊಂಡಿರುವ ಕೋಟ್ಯಂತರ ಜನರನ್ನು ಯುವಜನರ ಹತಾಶೆ, ಅಸಹನೆ, ಭಾವೋತ್ಕರ್ಷದ ರೂಪದಲ್ಲಿ ನೋಡಲಾಗುತ್ತಿದೆ. ಆದರೆ, ಈ ಜಿರಲೆಗಳು ದೇಶದ ವರ್ತಮಾನ ಕೊಳೆತು ನಾರುತ್ತಿರುವುದನ್ನು ಬಹಿರಂಗಗೊಳಿಸಿವೆ. ರಾಜಕಾರಣದಲ್ಲಿನ ನೈತಿಕ ಅಧಃಪತನಕ್ಕೂ, ಸಮಾಜದ ‘ರಾಜಿ’ ಮನೋಭಾವಕ್ಕೂ ಕನ್ನಡಿ ಹಿಡಿದಿವೆ.