ಸಿಟ್ಟು, ಸೆಡವು ಏನೇ ಇದ್ದರೂ, ಅವರವರ ಪಕ್ಷದ ಕಚೇರಿ, ಅಧ್ಯಕ್ಷರು, ಹೈಕಮಾಂಡ್ಗೆ ಸೀಮಿತಗೊಳಿಸಿಕೊಳ್ಳಲಿ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಖಂಡನೀಯ. ಇದಕ್ಕೆಲ್ಲ ಕುಮ್ಮಕ್ಕು ಕೊಡುತ್ತಿರುವ ಟಿಕೆಟ್ ಆಕಾಂಕ್ಷಿ ಹಾಗೂ ಅವರ ಹಿಂಬಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಆಗಿರುವ ನಷ್ಟವನ್ನು ಅವರೇ ಭರಿಸುವಂತೆ ಮಾಡಬೇಕು.