ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿಗೆ ಜ್ವರ, ಎಮ್ಮೆಗೆ ಬರೆ!

Last Updated 24 ಏಪ್ರಿಲ್ 2018, 16:39 IST
ಅಕ್ಷರ ಗಾತ್ರ

ಚುನಾವಣಾ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದಿರುವ ಆಕಾಂಕ್ಷಿಗಳು ಮತ್ತು ಅವರ ಹಿಂಬಾಲಕರು ರಸ್ತೆ ತಡೆ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟುಮಾಡುವುದು, ಧರಣಿ ಮುಂತಾದ ಅಸಭ್ಯ ವರ್ತನೆಗಳಿಂದ ಸಾರ್ವಜನಿಕ ಕೋಪಕ್ಕೆ, ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅವರ ಈ ವರ್ತನೆ ಅಸಹ್ಯ ಹುಟ್ಟಿಸಿದೆ.

ಸಿಟ್ಟು, ಸೆಡವು ಏನೇ ಇದ್ದರೂ, ಅವರವರ ಪಕ್ಷದ ಕಚೇರಿ, ಅಧ್ಯಕ್ಷರು, ಹೈಕಮಾಂಡ್‌ಗೆ ಸೀಮಿತಗೊಳಿಸಿಕೊಳ್ಳಲಿ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವುದು ಖಂಡನೀಯ. ಇದಕ್ಕೆಲ್ಲ ಕುಮ್ಮಕ್ಕು ಕೊಡುತ್ತಿರುವ ಟಿಕೆಟ್ ಆಕಾಂಕ್ಷಿ ಹಾಗೂ ಅವರ ಹಿಂಬಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಆಗಿರುವ ನಷ್ಟವನ್ನು ಅವರೇ ಭರಿಸುವಂತೆ ಮಾಡಬೇಕು.

ಶಿವಮೊಗ್ಗ ರಮೇಶ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT