<p>‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಆದಿಕವಿ ಪಂಪ. ಆದರೆ, ನಮ್ಮ ಆಧುನಿಕ ಮಾನವ ‘ಜಾತಿಯೇ ಮನುಷ್ಯನಿಗೆ ಬಲಂ’ ಎಂದು ಅನುಸರಿಸುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳಂತೂ ‘ಜಾತಿ ಬಲ ಹೌದು, ಆದರೆ ಕುಟುಂಬದ ಬಲ ಅದಕ್ಕಿಂತ ದೊಡ್ಡ ಬಲ’ ಎಂದು ಭಾವಿಸಿದ್ದಾರೆ. ಮೊದ ಮೊದಲು ಕಾಂಗ್ರೆಸ್ ಪಕ್ಷವನ್ನು ವಂಶಾಡಳಿತದ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಬರಬರುತ್ತಾ ಎಲ್ಲ ರಾಜಕೀಯ ಪಕ್ಷಗಳೂ ವಂಶಾಡಳಿತದ ಪಕ್ಷಗಳೇ ಆಗಿವೆ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ‘ಅಪ್ಪ ಮಕ್ಕಳ ಪಕ್ಷ’ ಎಂದು ಕರೆಯುತ್ತಿದ್ದರು. ಈಗ ಎಲ್ಲರ ಮನೆಯ ದೋಸೆಯೂ ತೂತಾಗಿದೆ. ವಂಶಾಡಳಿತ ಇಲ್ಲದ ಪಕ್ಷವೇ ಇಲ್ಲದಂತಾಗಿದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಪುತ್ರಪ್ರೇಮವನ್ನು ಕಡಿಮೆ ಮಾಡಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ತಮ್ಮ ಇಬ್ಬರು ಗಂಡುಮಕ್ಕಳಿಗೂ ಸಿಂಹಾಸನ ಸಿದ್ಧ ಮಾಡಿದ್ದಾರೆ. ಆ ಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಒಮ್ಮತ ಇದೆ.</p>.<p>ಹಾಲಿ ಶಾಸಕರು ನಿಧನರಾಗಿ ಉಪ ಚುನಾವಣೆ ನಡೆದರೆ ಅಲ್ಲಿ ಮೃತ ವ್ಯಕ್ತಿಯ ಹೆಂಡತಿ ಅಥವಾ ಮಕ್ಕಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವುದು ಈಗ ಮಾಮೂಲು ಎನ್ನುವಂತಾಗಿದೆ. ಅದು ಕೆ.ಎನ್. ನಾಗೇಗೌಡರಾಗಲಿ, ಬಂಡಿಸಿದ್ದೇಗೌಡರಾಗಲಿ, ರೇವೂರ ಆಗಲಿ, ಯಾರೇ ಆಗಲಿ, ಅವರ ವಂಶದವರಿಗೇ ಟಿಕೆಟ್ ನೀಡುವುದು ಸಂಪ್ರದಾಯವೇ ಆಗಿದೆ. ಈಗ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿಯೂ ಇದು ಮುಂದುವರಿದಿದೆ. ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದರಿಂದ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ. ಅಪ್ಪ ಮಲ್ಲಿಕಾರ್ಜುನ್ ಸಚಿವ. ಅಮ್ಮ ಲೋಕಸಭಾ ಸದಸ್ಯೆ. ಈಗ ಮಗ ಶಾಸಕನಾಗುವ ಹಾದಿಯಲ್ಲಿದ್ದಾನೆ. ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಎನ್ನುವುದೇ ಅವರ ಅರ್ಹತೆ. ‘ಇದು ಕುಟುಂಬ ರಾಜಕಾರಣ ಅಲ್ಲ. ಗೆಲ್ಲುವ ಸಾಧ್ಯತೆಯನ್ನಷ್ಟೇ ಪರಿಗಣಿಸಿ ಟಿಕೆಟ್ ನೀಡಲಾಗಿದೆ’ ಎಂಬ ಸಮರ್ಥನೆ ನಮ್ಮ ಮುಖ್ಯಮಂತ್ರಿಗಳಿಂದ ಬಂದಿದೆ. ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಟಿಕೆಟ್ ನೀಡಿ ಗೆಲ್ಲಿಸಿದರೆ ಅಭಿನವ ದೇವರಾಜ ಅರಸು ಆಗುವುದಿಲ್ಲ. ನೇರ ಚುನಾವಣೆಗೆ ನಿಂತು ಗೆಲ್ಲುವ ಸಾಧ್ಯತೆಯೇ ಇಲ್ಲದವರನ್ನು ಆರಿಸಿ, ಹುಡುಕಿ ತೆಗೆದು ಗೆಲ್ಲಿಸಿಕೊಂಡು ಬರುವವರೇ ನಿಜವಾದ ನಾಯಕರಾಗುತ್ತಾರೆ ಎಂದು ಅರ್ಥ ಮಾಡಿಸುವುದು ಹೇಗೆ? ಮತ್ತು ಯಾರು?</p>.<p>ಇದೇ ಮಾನದಂಡವನ್ನು ಬಳಸಿ ಬಾಗಲಕೋಟೆಯಲ್ಲಿಯೂ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೇ ಟಿಕೆಟ್ ನೀಡಲಾಗಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದಲ್ಲಿಯೇ ಟಿಕೆಟ್ಗೆ ಪೈಪೋಟಿ ಇತ್ತು. ಕುಟುಂಬದ ಸಮಸ್ಯೆ ಕ್ಷೇತ್ರದ ಸಮಸ್ಯೆಯಂತೆಯೂ, ಪಕ್ಷದ ಸಮಸ್ಯೆಯಂತೆಯೂ ಬಿಂಬಿತವಾಗಿತ್ತು. ದಾವಣಗೆರೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಟಿಕೆಟ್ಗೆ ಪಟ್ಟು ಹಿಡಿದಿದ್ದರು. ಎಲ್ಲವನ್ನೂ ಬದಿಗೊತ್ತಿ ಗೆಲ್ಲುವ ಕುದುರೆ ಎಂದು ಸಂಪ್ರದಾಯ, ಪದ್ಧತಿಗೆ ಮಣೆ ಹಾಕಲಾಗಿದೆ. ‘ಮುಸ್ಲಿಮರಿಗೆ ಪರ್ಯಾಯ ಸೌಲಭ್ಯ ಒದಗಿಸುತ್ತೇವೆ. ವಿಧಾನ ಪರಿಷತ್ ಸದಸ್ಯತ್ವ, ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜಕೀಯವಾಗಿ ಪ್ರತಿಷ್ಠಿತರಾದ ಕುಟುಂಬದ ಸದಸ್ಯರಿಗೆ ಮೃಷ್ಟಾನ್ನ, ಕಾರ್ಯಕರ್ತರಿಗೆ ಗಂಜಿ ಕೇಂದ್ರ ಎಂಬ ನೀತಿ ಇದು.</p>.<p>ಕರ್ನಾಟಕದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬನ್ನಿ. ಬೆಳಗಾವಿಯಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಕುಟುಂಬದ ಹಿಡಿತ ಇದೆ. ಇದು ಆ ಪಕ್ಷ ಈ ಪಕ್ಷ ಅಂತಲ್ಲ. ಎಲ್ಲ ಪಕ್ಷಗಳ ಹಕೀಕತ್ ಹೀಗೆಯೇ ಇದೆ. ಅಪ್ಪ– ಇಲ್ಲ ಮಗ, ಇಲ್ಲ ಮೊಮ್ಮಗ, ಇಲ್ಲ ಸಹೋದರ, ಇಲ್ಲ ಮಗಳು ಹೀಗೆಯೇ ರಾಜಕಾರಣ ನಡೆಯುತ್ತಿದೆ. ಮತ್ತೊಬ್ಬರು ಬೆಳೆಯಲು ಸಾಧ್ಯವಾಗುತ್ತಲೇ ಇಲ್ಲ. ಇದನ್ನು ಯಾವುದೇ ದೃಷ್ಟಿಯಿಂದಲೂ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೇ ಇಲ್ಲ. ಇದು ನವ ಪಾಳೇಗಾರಿಕೆ. ಸ್ವಾತಂತ್ರ್ಯಪೂರ್ವದಲ್ಲಿ ಪಾಳೇಗಾರರು ಒಂದಿಷ್ಟು ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ಹಾಗೆ ಈಗಲೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಒಂದಿಷ್ಟು ಕುಟುಂಬಗಳು ಒಂದೊಂದು ಜಿಲ್ಲೆಗಳನ್ನು ಅಥವಾ ಒಂದೊಂದು ಕ್ಷೇತ್ರವನ್ನು ತಮ್ಮ ಕಬ್ಜಾ ಮಾಡಿಕೊಂಡಿವೆ. ಯಾರಾದರೂ ಒಬ್ಬರು ಒಮ್ಮೆ ಶಾಸಕರಾಗಿ ಆಯ್ಕೆಯಾದರೆ, ಅದೃಷ್ಟವಿದ್ದು ಅವರು ಸಚಿವರಾದರೆ, ಲಾಟರಿ ಹೊಡೆದು ಅವರು ಮುಖ್ಯಮಂತ್ರಿಯೇ ಆಗಿಬಿಟ್ಟರೆ, ತಮ್ಮ ಕುಟುಂಬದ ಸದಸ್ಯರನ್ನು ಹೇಗೆ ಗೆಲ್ಲಿಸಬಹುದು; ಅದಕ್ಕೆ ಬೇಕಾಗುವ ವ್ಯವಸ್ಥೆ ಏನು, ಯಾವ ಪಟ್ಟು ಹಾಕಬೇಕು ಎಂದು ಚಿಂತಿಸುತ್ತಾರೆಯೇ ವಿನಾ ಸ್ವಾತಂತ್ರ್ಯಾನಂತರ ಮತ ಹಾಕುವುದನ್ನು ಬಿಟ್ಟು ಉಳಿದಂತೆ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗಿಯೇ ಆಗದ, ಅಧಿಕಾರದ ರುಚಿಯನ್ನೇ ನೋಡದ ಸಮುದಾಯಗಳಿಂದ ಬಂದವರನ್ನು ಗುರ್ತಿಸುವ ಕೆಲಸವೇ ನಡೆಯುತ್ತಿಲ್ಲ. ಆದರ್ಶ, ಸಮಾನತೆ, ಸಾಮಾಜಿಕ ನ್ಯಾಯ ಎನ್ನುವುದೆಲ್ಲ ಪುಸ್ತಕದ ಬದನೆಕಾಯಿ ಅಷ್ಟೆ.</p>.<p>ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ನಮ್ಮ ದೇಶದ ಸಂಸದರು ಮತ್ತು ಶಾಸಕರ ಪೈಕಿ ಶೇ 21ರಷ್ಟು ಮಂದಿ ವಂಶಪಾರಂಪರ್ಯ ಹಿನ್ನೆಲೆಯನ್ನು ಹೊಂದಿದ್ದಾರೆ. ಇದು ಲೋಕಸಭೆಯಲ್ಲಿ ಹೆಚ್ಚಾಗಿದೆ ಎನ್ನುತ್ತದೆ ಈ ವರದಿ. ಲೋಕಸಭೆಯಲ್ಲಿ ಶೇ 31ರಷ್ಟು ಸದಸ್ಯರು ಕುಟುಂಬದ ಕುಡಿಗಳೇ ಆಗಿದ್ದಾರೆ. ರಾಜ್ಯಸಭೆಯಲ್ಲಿ ಇದರ ಪ್ರಮಾಣ ಶೇ 21. ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ಗಳಲ್ಲಿ ವಂಶಪಾರಂಪರ್ಯ ಸದಸ್ಯರ ಸಂಖ್ಯೆ ಶೇ 22ರಷ್ಟಿದೆ. ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದ ಮಹಿಳಾ ಸದಸ್ಯರ ಸಂಖ್ಯೆ ಶೇ 47 ಇದ್ದರೆ, ಪುರುಷರ ಸಂಖ್ಯೆ ಶೇ 18 ಇದೆ. ಕುಟುಂಬ ರಾಜಕಾರಣದ ಪ್ರಮಾಣ ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಡಿಮೆ ಇದೆ.</p>.<p>ಕುಟುಂಬ ರಾಜಕಾರಣದಲ್ಲಿ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 224 ಶಾಸಕರ ಪೈಕಿ 94 ಸದಸ್ಯರಿಗೆ ಇಂತಹ ರಾಜಕಾರಣದ ಹಿನ್ನೆಲೆ ಇದೆ. ಉತ್ತರ ಪ್ರದೇಶದಲ್ಲಿ 141, ಮಹಾರಾಷ್ಟ್ರದಲ್ಲಿ 129, ಬಿಹಾರದಲ್ಲಿ 96 ಶಾಸಕರಿಗೆ ವಂಶಾಡಳಿತದ ಹಿನ್ನೆಲೆ ಇದೆ. ಅಸ್ಸಾಂ ರಾಜ್ಯದಲ್ಲಿ ಅತ್ಯಂತ ಕನಿಷ್ಠ ಎಂದರೆ 9 ಶಾಸಕರಿಗೆ ಕೌಟುಂಬಿಕ ರಾಜಕಾರಣದ ನಂಟಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಮಹಾರಾಷ್ಟ್ರದ ಶರದ್ ಪವಾರ್ ಅವರ ಎನ್ಸಿಪಿಯಲ್ಲಿ ಅತಿ ಹೆಚ್ಚಿನ ಕುಟುಂಬ ರಾಜಕಾರಣ ಇದೆ. ಈ ಪಕ್ಷದಲ್ಲಿ ಶೇ 42ರಷ್ಟು ಮಂದಿ ಕುಟುಂಬ ರಾಜಕಾರಣದ ಕುಡಿಗಳು ನೆಲೆ ಕಂಡುಕೊಂಡಿದ್ದಾರೆ. ವೈಎಸ್ಆರ್–ಸಿಪಿ ಶೇ 38, ಟಿಡಿಪಿ ಶೇ 36, ಟಿಎಂಸಿ ಶೇ 10 ಹಾಗೂ ಎಐಎಡಿಎಂಕೆಯಲ್ಲಿ ಶೇ 10ರಷ್ಟು ಮಂದಿ ಕುಟುಂಬ ರಾಜಕಾರಣದಿಂದ ನೆಲೆ ಕಂಡುಕೊಂಡಿದ್ದಾರೆ. ಇನ್ನು ಡಿಎಂಕೆ, ಜೆಡಿಎಸ್ ಮುಂತಾದ ಪಕ್ಷಗಳಲ್ಲಿ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿ ಇದೆ.</p>.<p>ರಾಷ್ಟ್ರೀಯ ಪಕ್ಷಗಳಲ್ಲಿ ಅತಿಹೆಚ್ಚು ಕುಟುಂಬ ರಾಜಕಾರಣ ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ಈ ಪಕ್ಷದಲ್ಲಿ ಶೇ 32ರಷ್ಟು ಕುಟುಂಬ ರಾಜಕಾರಣ ಇದ್ದರೆ, ಭಾರತೀಯ ಜನತಾ ಪಕ್ಷದಲ್ಲಿ ಇದರ ಪ್ರಮಾಣ ಶೇ 18. ಕಾರ್ಯಕರ್ತರ ಪಕ್ಷ ಎಂದೇ ಗುರುತಿಸಲಾಗುವ ಸಿಪಿಐಎಂನಲ್ಲಿ ಕೂಡ ಕುಟುಂಬ ರಾಜಕಾರಣದ ಪ್ರಮಾಣ ಶೇ 8ರಷ್ಟಿದೆ ಎಂದು ಎಡಿಆರ್ ವರದಿ ಹೇಳುತ್ತದೆ. ಜಾತಿ, ಧರ್ಮ, ಹಣ, ತೋಳ್ಬಲ ಮುಂತಾದ ಕಾರಣಗಳಿಗೆ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ. ಕೇಡರ್ ಆಧಾರಿತ ಪಕ್ಷಗಳು ಎನ್ನುವ ಕಲ್ಪನೆಯೇ ಮಾಯವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನವ ಮಾಂಡಲೀಕರು, ಪಾಳೇಗಾರರು ಹುಟ್ಟಿಕೊಂಡು ಪ್ರಜಾಪ್ರಭುತ್ವದ ಬೇರು ಸಂಪೂರ್ಣ ನಾಶವಾಗಿ ಮತ್ತೆ ರಾಜಪ್ರಭುತ್ವ ಬರುತ್ತದೆ. ಈಗ ಇರುವುದೂ ರಾಜಪ್ರಭುತ್ವವೇ ಆಗಿದೆ. ಹೆಸರು ಪ್ರಜಾಪ್ರಭುತ್ವ. ಆಡಳಿತ ಪಾಳೇಗಾರರದ್ದು. ಮತದಾರ ಎಚ್ಚರವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಪಕ್ಷಗಳ ಕಾರ್ಯಕರ್ತರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ವಾತಾವರಣ ಸೃಷ್ಟಿಯಾಗಿದೆ.</p>.<p>ಕುಟುಂಬ ರಾಜಕಾರಣಕ್ಕೆ ತಿರಸ್ಕಾರ ಹಾಕಿದ ಉದಾಹರಣೆ ದಾವಣಗೆರೆ ಜಿಲ್ಲೆಯಲ್ಲಿಯೇ ಇದೆ. ಒಮ್ಮೆ ಜೆ.ಎಚ್. ಪಟೇಲರ ಪುತ್ರರೊಬ್ಬರು ತಂದೆಯ ಬಳಿಗೆ ಬಂದು ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಪಕ್ಷದ ಟಿಕೆಟ್ ಕೇಳಿದರಂತೆ. ಆಗ ಪಟೇಲರು ‘ಮೊದಲು ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿ ಗೆಲ್ಲು. ಅಲ್ಲಿ ಅನುಭವ ಗಳಿಸಿದ ನಂತರ ವಿಧಾನ ಪರಿಷತ್ಗೆ ಟಿಕೆಟ್ ಕೇಳು. ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡಿದ್ದೇನೆ ಎಂದರೆ ಆ ಸದಸ್ಯರೂ ನಿನಗೆ ಮತ ನೀಡಿಯಾರು’ ಎಂದು ಹೇಳಿ ಕಳಿಸಿದರಂತೆ. ಅಧಿಕಾರದಲ್ಲಿ ಇದ್ದಾಗ ಮಕ್ಕಳು ಮತ್ತು ಕುಟುಂಬಸ್ಥರನ್ನು ಹತ್ತಿರ ಬಿಟ್ಟುಕೊಳ್ಳದ, ಮಕ್ಕಳಿಗೆ ಟಿಕೆಟ್ ಕೇಳದ ರಾಜಕಾರಣಿಗಳ ಉದಾಹರಣೆ ನಮ್ಮ ರಾಜ್ಯದಲ್ಲಿ ಸಾಕಷ್ಟಿದೆ. ಅಂಥವರ ಸಂತತಿ ಸಾಸಿರವಾಗಲಿ. ಅದಕ್ಕೆ ಮತದಾರರು ಮನಸ್ಸು ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಆದಿಕವಿ ಪಂಪ. ಆದರೆ, ನಮ್ಮ ಆಧುನಿಕ ಮಾನವ ‘ಜಾತಿಯೇ ಮನುಷ್ಯನಿಗೆ ಬಲಂ’ ಎಂದು ಅನುಸರಿಸುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳಂತೂ ‘ಜಾತಿ ಬಲ ಹೌದು, ಆದರೆ ಕುಟುಂಬದ ಬಲ ಅದಕ್ಕಿಂತ ದೊಡ್ಡ ಬಲ’ ಎಂದು ಭಾವಿಸಿದ್ದಾರೆ. ಮೊದ ಮೊದಲು ಕಾಂಗ್ರೆಸ್ ಪಕ್ಷವನ್ನು ವಂಶಾಡಳಿತದ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಬರಬರುತ್ತಾ ಎಲ್ಲ ರಾಜಕೀಯ ಪಕ್ಷಗಳೂ ವಂಶಾಡಳಿತದ ಪಕ್ಷಗಳೇ ಆಗಿವೆ. ಕರ್ನಾಟಕದಲ್ಲಿ ಜಾತ್ಯತೀತ ಜನತಾದಳ ಪಕ್ಷವನ್ನು ‘ಅಪ್ಪ ಮಕ್ಕಳ ಪಕ್ಷ’ ಎಂದು ಕರೆಯುತ್ತಿದ್ದರು. ಈಗ ಎಲ್ಲರ ಮನೆಯ ದೋಸೆಯೂ ತೂತಾಗಿದೆ. ವಂಶಾಡಳಿತ ಇಲ್ಲದ ಪಕ್ಷವೇ ಇಲ್ಲದಂತಾಗಿದೆ. ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಪುತ್ರಪ್ರೇಮವನ್ನು ಕಡಿಮೆ ಮಾಡಿಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ತಮ್ಮ ಇಬ್ಬರು ಗಂಡುಮಕ್ಕಳಿಗೂ ಸಿಂಹಾಸನ ಸಿದ್ಧ ಮಾಡಿದ್ದಾರೆ. ಆ ಮಟ್ಟಿಗೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಒಮ್ಮತ ಇದೆ.</p>.<p>ಹಾಲಿ ಶಾಸಕರು ನಿಧನರಾಗಿ ಉಪ ಚುನಾವಣೆ ನಡೆದರೆ ಅಲ್ಲಿ ಮೃತ ವ್ಯಕ್ತಿಯ ಹೆಂಡತಿ ಅಥವಾ ಮಕ್ಕಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವುದು ಈಗ ಮಾಮೂಲು ಎನ್ನುವಂತಾಗಿದೆ. ಅದು ಕೆ.ಎನ್. ನಾಗೇಗೌಡರಾಗಲಿ, ಬಂಡಿಸಿದ್ದೇಗೌಡರಾಗಲಿ, ರೇವೂರ ಆಗಲಿ, ಯಾರೇ ಆಗಲಿ, ಅವರ ವಂಶದವರಿಗೇ ಟಿಕೆಟ್ ನೀಡುವುದು ಸಂಪ್ರದಾಯವೇ ಆಗಿದೆ. ಈಗ ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿಯೂ ಇದು ಮುಂದುವರಿದಿದೆ. ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದರಿಂದ ನಡೆಯುತ್ತಿರುವ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷ ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದೆ. ಅಪ್ಪ ಮಲ್ಲಿಕಾರ್ಜುನ್ ಸಚಿವ. ಅಮ್ಮ ಲೋಕಸಭಾ ಸದಸ್ಯೆ. ಈಗ ಮಗ ಶಾಸಕನಾಗುವ ಹಾದಿಯಲ್ಲಿದ್ದಾನೆ. ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಎನ್ನುವುದೇ ಅವರ ಅರ್ಹತೆ. ‘ಇದು ಕುಟುಂಬ ರಾಜಕಾರಣ ಅಲ್ಲ. ಗೆಲ್ಲುವ ಸಾಧ್ಯತೆಯನ್ನಷ್ಟೇ ಪರಿಗಣಿಸಿ ಟಿಕೆಟ್ ನೀಡಲಾಗಿದೆ’ ಎಂಬ ಸಮರ್ಥನೆ ನಮ್ಮ ಮುಖ್ಯಮಂತ್ರಿಗಳಿಂದ ಬಂದಿದೆ. ಗೆಲ್ಲುವ ಸಾಮರ್ಥ್ಯ ಇದ್ದವರಿಗೆ ಟಿಕೆಟ್ ನೀಡಿ ಗೆಲ್ಲಿಸಿದರೆ ಅಭಿನವ ದೇವರಾಜ ಅರಸು ಆಗುವುದಿಲ್ಲ. ನೇರ ಚುನಾವಣೆಗೆ ನಿಂತು ಗೆಲ್ಲುವ ಸಾಧ್ಯತೆಯೇ ಇಲ್ಲದವರನ್ನು ಆರಿಸಿ, ಹುಡುಕಿ ತೆಗೆದು ಗೆಲ್ಲಿಸಿಕೊಂಡು ಬರುವವರೇ ನಿಜವಾದ ನಾಯಕರಾಗುತ್ತಾರೆ ಎಂದು ಅರ್ಥ ಮಾಡಿಸುವುದು ಹೇಗೆ? ಮತ್ತು ಯಾರು?</p>.<p>ಇದೇ ಮಾನದಂಡವನ್ನು ಬಳಸಿ ಬಾಗಲಕೋಟೆಯಲ್ಲಿಯೂ ಎಚ್.ವೈ. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೇ ಟಿಕೆಟ್ ನೀಡಲಾಗಿದೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದಲ್ಲಿಯೇ ಟಿಕೆಟ್ಗೆ ಪೈಪೋಟಿ ಇತ್ತು. ಕುಟುಂಬದ ಸಮಸ್ಯೆ ಕ್ಷೇತ್ರದ ಸಮಸ್ಯೆಯಂತೆಯೂ, ಪಕ್ಷದ ಸಮಸ್ಯೆಯಂತೆಯೂ ಬಿಂಬಿತವಾಗಿತ್ತು. ದಾವಣಗೆರೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರು ಟಿಕೆಟ್ಗೆ ಪಟ್ಟು ಹಿಡಿದಿದ್ದರು. ಎಲ್ಲವನ್ನೂ ಬದಿಗೊತ್ತಿ ಗೆಲ್ಲುವ ಕುದುರೆ ಎಂದು ಸಂಪ್ರದಾಯ, ಪದ್ಧತಿಗೆ ಮಣೆ ಹಾಕಲಾಗಿದೆ. ‘ಮುಸ್ಲಿಮರಿಗೆ ಪರ್ಯಾಯ ಸೌಲಭ್ಯ ಒದಗಿಸುತ್ತೇವೆ. ವಿಧಾನ ಪರಿಷತ್ ಸದಸ್ಯತ್ವ, ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರಾಜಕೀಯವಾಗಿ ಪ್ರತಿಷ್ಠಿತರಾದ ಕುಟುಂಬದ ಸದಸ್ಯರಿಗೆ ಮೃಷ್ಟಾನ್ನ, ಕಾರ್ಯಕರ್ತರಿಗೆ ಗಂಜಿ ಕೇಂದ್ರ ಎಂಬ ನೀತಿ ಇದು.</p>.<p>ಕರ್ನಾಟಕದ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬನ್ನಿ. ಬೆಳಗಾವಿಯಿಂದ ಹಿಡಿದು ಚಾಮರಾಜನಗರದವರೆಗೆ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಕುಟುಂಬದ ಹಿಡಿತ ಇದೆ. ಇದು ಆ ಪಕ್ಷ ಈ ಪಕ್ಷ ಅಂತಲ್ಲ. ಎಲ್ಲ ಪಕ್ಷಗಳ ಹಕೀಕತ್ ಹೀಗೆಯೇ ಇದೆ. ಅಪ್ಪ– ಇಲ್ಲ ಮಗ, ಇಲ್ಲ ಮೊಮ್ಮಗ, ಇಲ್ಲ ಸಹೋದರ, ಇಲ್ಲ ಮಗಳು ಹೀಗೆಯೇ ರಾಜಕಾರಣ ನಡೆಯುತ್ತಿದೆ. ಮತ್ತೊಬ್ಬರು ಬೆಳೆಯಲು ಸಾಧ್ಯವಾಗುತ್ತಲೇ ಇಲ್ಲ. ಇದನ್ನು ಯಾವುದೇ ದೃಷ್ಟಿಯಿಂದಲೂ ಪ್ರಜಾಪ್ರಭುತ್ವ ಎನ್ನಲು ಸಾಧ್ಯವೇ ಇಲ್ಲ. ಇದು ನವ ಪಾಳೇಗಾರಿಕೆ. ಸ್ವಾತಂತ್ರ್ಯಪೂರ್ವದಲ್ಲಿ ಪಾಳೇಗಾರರು ಒಂದಿಷ್ಟು ಪ್ರದೇಶಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡ ಹಾಗೆ ಈಗಲೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ಒಂದಿಷ್ಟು ಕುಟುಂಬಗಳು ಒಂದೊಂದು ಜಿಲ್ಲೆಗಳನ್ನು ಅಥವಾ ಒಂದೊಂದು ಕ್ಷೇತ್ರವನ್ನು ತಮ್ಮ ಕಬ್ಜಾ ಮಾಡಿಕೊಂಡಿವೆ. ಯಾರಾದರೂ ಒಬ್ಬರು ಒಮ್ಮೆ ಶಾಸಕರಾಗಿ ಆಯ್ಕೆಯಾದರೆ, ಅದೃಷ್ಟವಿದ್ದು ಅವರು ಸಚಿವರಾದರೆ, ಲಾಟರಿ ಹೊಡೆದು ಅವರು ಮುಖ್ಯಮಂತ್ರಿಯೇ ಆಗಿಬಿಟ್ಟರೆ, ತಮ್ಮ ಕುಟುಂಬದ ಸದಸ್ಯರನ್ನು ಹೇಗೆ ಗೆಲ್ಲಿಸಬಹುದು; ಅದಕ್ಕೆ ಬೇಕಾಗುವ ವ್ಯವಸ್ಥೆ ಏನು, ಯಾವ ಪಟ್ಟು ಹಾಕಬೇಕು ಎಂದು ಚಿಂತಿಸುತ್ತಾರೆಯೇ ವಿನಾ ಸ್ವಾತಂತ್ರ್ಯಾನಂತರ ಮತ ಹಾಕುವುದನ್ನು ಬಿಟ್ಟು ಉಳಿದಂತೆ ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾಗಿಯೇ ಆಗದ, ಅಧಿಕಾರದ ರುಚಿಯನ್ನೇ ನೋಡದ ಸಮುದಾಯಗಳಿಂದ ಬಂದವರನ್ನು ಗುರ್ತಿಸುವ ಕೆಲಸವೇ ನಡೆಯುತ್ತಿಲ್ಲ. ಆದರ್ಶ, ಸಮಾನತೆ, ಸಾಮಾಜಿಕ ನ್ಯಾಯ ಎನ್ನುವುದೆಲ್ಲ ಪುಸ್ತಕದ ಬದನೆಕಾಯಿ ಅಷ್ಟೆ.</p>.<p>ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ನಮ್ಮ ದೇಶದ ಸಂಸದರು ಮತ್ತು ಶಾಸಕರ ಪೈಕಿ ಶೇ 21ರಷ್ಟು ಮಂದಿ ವಂಶಪಾರಂಪರ್ಯ ಹಿನ್ನೆಲೆಯನ್ನು ಹೊಂದಿದ್ದಾರೆ. ಇದು ಲೋಕಸಭೆಯಲ್ಲಿ ಹೆಚ್ಚಾಗಿದೆ ಎನ್ನುತ್ತದೆ ಈ ವರದಿ. ಲೋಕಸಭೆಯಲ್ಲಿ ಶೇ 31ರಷ್ಟು ಸದಸ್ಯರು ಕುಟುಂಬದ ಕುಡಿಗಳೇ ಆಗಿದ್ದಾರೆ. ರಾಜ್ಯಸಭೆಯಲ್ಲಿ ಇದರ ಪ್ರಮಾಣ ಶೇ 21. ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ಗಳಲ್ಲಿ ವಂಶಪಾರಂಪರ್ಯ ಸದಸ್ಯರ ಸಂಖ್ಯೆ ಶೇ 22ರಷ್ಟಿದೆ. ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದ ಮಹಿಳಾ ಸದಸ್ಯರ ಸಂಖ್ಯೆ ಶೇ 47 ಇದ್ದರೆ, ಪುರುಷರ ಸಂಖ್ಯೆ ಶೇ 18 ಇದೆ. ಕುಟುಂಬ ರಾಜಕಾರಣದ ಪ್ರಮಾಣ ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಕಡಿಮೆ ಇದೆ.</p>.<p>ಕುಟುಂಬ ರಾಜಕಾರಣದಲ್ಲಿ ಕರ್ನಾಟಕ ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 224 ಶಾಸಕರ ಪೈಕಿ 94 ಸದಸ್ಯರಿಗೆ ಇಂತಹ ರಾಜಕಾರಣದ ಹಿನ್ನೆಲೆ ಇದೆ. ಉತ್ತರ ಪ್ರದೇಶದಲ್ಲಿ 141, ಮಹಾರಾಷ್ಟ್ರದಲ್ಲಿ 129, ಬಿಹಾರದಲ್ಲಿ 96 ಶಾಸಕರಿಗೆ ವಂಶಾಡಳಿತದ ಹಿನ್ನೆಲೆ ಇದೆ. ಅಸ್ಸಾಂ ರಾಜ್ಯದಲ್ಲಿ ಅತ್ಯಂತ ಕನಿಷ್ಠ ಎಂದರೆ 9 ಶಾಸಕರಿಗೆ ಕೌಟುಂಬಿಕ ರಾಜಕಾರಣದ ನಂಟಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಮಹಾರಾಷ್ಟ್ರದ ಶರದ್ ಪವಾರ್ ಅವರ ಎನ್ಸಿಪಿಯಲ್ಲಿ ಅತಿ ಹೆಚ್ಚಿನ ಕುಟುಂಬ ರಾಜಕಾರಣ ಇದೆ. ಈ ಪಕ್ಷದಲ್ಲಿ ಶೇ 42ರಷ್ಟು ಮಂದಿ ಕುಟುಂಬ ರಾಜಕಾರಣದ ಕುಡಿಗಳು ನೆಲೆ ಕಂಡುಕೊಂಡಿದ್ದಾರೆ. ವೈಎಸ್ಆರ್–ಸಿಪಿ ಶೇ 38, ಟಿಡಿಪಿ ಶೇ 36, ಟಿಎಂಸಿ ಶೇ 10 ಹಾಗೂ ಎಐಎಡಿಎಂಕೆಯಲ್ಲಿ ಶೇ 10ರಷ್ಟು ಮಂದಿ ಕುಟುಂಬ ರಾಜಕಾರಣದಿಂದ ನೆಲೆ ಕಂಡುಕೊಂಡಿದ್ದಾರೆ. ಇನ್ನು ಡಿಎಂಕೆ, ಜೆಡಿಎಸ್ ಮುಂತಾದ ಪಕ್ಷಗಳಲ್ಲಿ ಅಧಿಕಾರ ಒಂದೇ ಕುಟುಂಬದ ಕೈಯಲ್ಲಿ ಇದೆ.</p>.<p>ರಾಷ್ಟ್ರೀಯ ಪಕ್ಷಗಳಲ್ಲಿ ಅತಿಹೆಚ್ಚು ಕುಟುಂಬ ರಾಜಕಾರಣ ಇರುವುದು ಕಾಂಗ್ರೆಸ್ ಪಕ್ಷದಲ್ಲಿ. ಈ ಪಕ್ಷದಲ್ಲಿ ಶೇ 32ರಷ್ಟು ಕುಟುಂಬ ರಾಜಕಾರಣ ಇದ್ದರೆ, ಭಾರತೀಯ ಜನತಾ ಪಕ್ಷದಲ್ಲಿ ಇದರ ಪ್ರಮಾಣ ಶೇ 18. ಕಾರ್ಯಕರ್ತರ ಪಕ್ಷ ಎಂದೇ ಗುರುತಿಸಲಾಗುವ ಸಿಪಿಐಎಂನಲ್ಲಿ ಕೂಡ ಕುಟುಂಬ ರಾಜಕಾರಣದ ಪ್ರಮಾಣ ಶೇ 8ರಷ್ಟಿದೆ ಎಂದು ಎಡಿಆರ್ ವರದಿ ಹೇಳುತ್ತದೆ. ಜಾತಿ, ಧರ್ಮ, ಹಣ, ತೋಳ್ಬಲ ಮುಂತಾದ ಕಾರಣಗಳಿಗೆ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಲಾಗುತ್ತಿದೆ. ಕೇಡರ್ ಆಧಾರಿತ ಪಕ್ಷಗಳು ಎನ್ನುವ ಕಲ್ಪನೆಯೇ ಮಾಯವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನವ ಮಾಂಡಲೀಕರು, ಪಾಳೇಗಾರರು ಹುಟ್ಟಿಕೊಂಡು ಪ್ರಜಾಪ್ರಭುತ್ವದ ಬೇರು ಸಂಪೂರ್ಣ ನಾಶವಾಗಿ ಮತ್ತೆ ರಾಜಪ್ರಭುತ್ವ ಬರುತ್ತದೆ. ಈಗ ಇರುವುದೂ ರಾಜಪ್ರಭುತ್ವವೇ ಆಗಿದೆ. ಹೆಸರು ಪ್ರಜಾಪ್ರಭುತ್ವ. ಆಡಳಿತ ಪಾಳೇಗಾರರದ್ದು. ಮತದಾರ ಎಚ್ಚರವಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಪಕ್ಷಗಳ ಕಾರ್ಯಕರ್ತರೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಾದ ವಾತಾವರಣ ಸೃಷ್ಟಿಯಾಗಿದೆ.</p>.<p>ಕುಟುಂಬ ರಾಜಕಾರಣಕ್ಕೆ ತಿರಸ್ಕಾರ ಹಾಕಿದ ಉದಾಹರಣೆ ದಾವಣಗೆರೆ ಜಿಲ್ಲೆಯಲ್ಲಿಯೇ ಇದೆ. ಒಮ್ಮೆ ಜೆ.ಎಚ್. ಪಟೇಲರ ಪುತ್ರರೊಬ್ಬರು ತಂದೆಯ ಬಳಿಗೆ ಬಂದು ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಪಕ್ಷದ ಟಿಕೆಟ್ ಕೇಳಿದರಂತೆ. ಆಗ ಪಟೇಲರು ‘ಮೊದಲು ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿ ಗೆಲ್ಲು. ಅಲ್ಲಿ ಅನುಭವ ಗಳಿಸಿದ ನಂತರ ವಿಧಾನ ಪರಿಷತ್ಗೆ ಟಿಕೆಟ್ ಕೇಳು. ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ಮಾಡಿದ್ದೇನೆ ಎಂದರೆ ಆ ಸದಸ್ಯರೂ ನಿನಗೆ ಮತ ನೀಡಿಯಾರು’ ಎಂದು ಹೇಳಿ ಕಳಿಸಿದರಂತೆ. ಅಧಿಕಾರದಲ್ಲಿ ಇದ್ದಾಗ ಮಕ್ಕಳು ಮತ್ತು ಕುಟುಂಬಸ್ಥರನ್ನು ಹತ್ತಿರ ಬಿಟ್ಟುಕೊಳ್ಳದ, ಮಕ್ಕಳಿಗೆ ಟಿಕೆಟ್ ಕೇಳದ ರಾಜಕಾರಣಿಗಳ ಉದಾಹರಣೆ ನಮ್ಮ ರಾಜ್ಯದಲ್ಲಿ ಸಾಕಷ್ಟಿದೆ. ಅಂಥವರ ಸಂತತಿ ಸಾಸಿರವಾಗಲಿ. ಅದಕ್ಕೆ ಮತದಾರರು ಮನಸ್ಸು ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>