‘ಮತದಾನ ಮಾಡಿದವರಿಗೆ ರಿಯಾಯಿತಿ ನೀಡುವ ಯೋಜನೆ ಕುರಿತು ಚರ್ಚಿಸಲು ಹೋಟೆಲ್, ಮಾಲ್, ಮಲ್ಟಿಪ್ಲೆಕ್ಸ್ಗಳು ಹಾಗೂ ಇತರ ವಾಣಿಜ್ಯ ಮಳಿಗೆಗಳ ಮಾಲೀಕರ ಜೊತೆ ಶೀಘ್ರವೇ ಸಭೆ ನಡೆಸಲಿದ್ದೇವೆ. ಮಾಲೀಕರು ಒಪ್ಪಿದರೆ ಮಾತ್ರ ಈ ಯೋಜನೆಯನ್ನು ಪ್ರಕಟಿಸಲಿದ್ದೇವೆ. ಮತದಾನದ ಪ್ರಮಾಣ ಹೆಚ್ಚಿಸಲು ಇದು ನೆರವಾಗಲಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.