ನೆಲಮಂಗಲ: ‘ಕಂದಾಯ ಇಲಾಖೆಯಲ್ಲಿ ರೈತರಿಗೆ ತಮ್ಮ ಜಮೀನುಗಳ ದಾಖಲೆಗಳನ್ನು ಮಾಡಿಕೊಡದೆ ಅಧಿಕಾರಿಗಳು ನಿತ್ಯವೂ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಮತ್ತು ಸಂಬಂಧಿಸಿದ ಕಚೇರಿಗಳನ್ನು ಅಲೆಯುವಂತೆ ಮಾಡಿ ಅಲೆಯುವ ಭಾಗ್ಯ ಕಲ್ಪಿಸಿದ್ದಾರೆ’ ಎಂದು ಕಿಸಾನ್ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಭೀಮಯ್ಯ ಆಕ್ರೋಶ ವ್ಯಕ್ತಪಡಿಸಿದರು.