ಕುಡಿಯುವ ನೀರು, ಆಹಾರದ ಕೊರತೆಯಿಂದ ಬಳಲುತ್ತಿದ್ದ ಇಸ್ರೇಲ್ ದೇಶದಲ್ಲಿ ಸರ್ಕಾರಿ ನೌಕರಿಯಲ್ಲಿದ್ದ ಎಸ್ರಾಡೇನಿಸ್ ಎಂಬ ಯುವಕ ತನ್ನ ದೇಶದ ಜನರ ಸಂಕಟ ದೂರ ಮಾಡಲು ದೇಶದ ತುಂಬ ಹನಿ ನೀರಾವರಿ ಹಾಗೂ ವೈಜ್ಞಾನಿಕ ಬೇಸಾಯಕ್ಕೆ ಜನರನ್ನು ಹುರಿದುಂಬಿಸಿ ದೊಡ್ಡ ಕ್ರಾಂತಿ ಮಾಡಿದ. ಈಗ ಇಸ್ರೇಲ್, ಜಗತ್ತಿಗೆ ಮಾದರಿಯಾಗಿದೆ. ಕರ್ನಾಟಕದಷ್ಟಿರುವ ಈ ಪುಟ್ಟ ದೇಶ ಹಸಿರಿನಿಂದ ನಳನಳಿಸುತ್ತಿದೆ.