9 ಮಂದಿ ಪ್ರಮಾಣವಚನ: ‘ಬುಧವಾರ ಜೆಡಿಎಸ್ನಿಂದ 9 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಇದರಲ್ಲಿ ನನ್ನ ಹೆಸರು ಇಲ್ಲ. ಬಿಜೆಪಿಯ ಆರೋಪಗಳಿಗೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿರುವ ಕಾರಣ, ಕೇಂದ್ರದಲ್ಲಿ ಖಾತೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆ ಸುಲಭವಲ್ಲ. ಸರ್ಕಾರದ ಉಳಿವಿಗಾಗಿ ಎಲ್ಲರೂ ತಾಳ್ಮೆಯಿಂದ ವರ್ತಿಸಬೇಕು. ನಮ್ಮದು ಪ್ರಜಾಪ್ರಭುತ್ವ ಪಕ್ಷವಾಗಿದ್ದು ಎಲ್ಲರ ಸಹಕಾರ ಅವಶ್ಯ’ ಎಂದು ಹೇಳಿದರು.