ಕಿಕ್ಕಿರಿದು ಸೇರಿದ್ದ ಜನರು ಕಂಬ ಎಳೆಯುವ ಸ್ಪರ್ಧೆಗೆ ಪ್ರೋತ್ಸಾಹಿಸಿದರು. ದೇವಸ್ಥಾನದ ಸಮಿತಿ ಈ ಸ್ಪರ್ಧೆಯನ್ನು ಏರ್ಪಡಿಸಿತ್ತು. ರಾಷ್ಟ್ರೀಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕೆ.ಟಿ. ಕುಮಾರಸ್ವಾಮಿ, ತಾಲ್ಲೂಕು ಪಂಚಾಯ್ತಿ ಶಿವಮ್ಮ ಕರಿಯಣ್ಣ ಸಂಚಾರ ಪೊಲೀಸ್ ಠಾಣೆ ಪಿ.ಎಸ್.ಐ ಬಸವರಾಜ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯ್ತಿ ಭೀಮಕ್ಕ, ದೇವಸ್ಥಾನದ ಸಮಿತಿಯ ಉಪಾಧ್ಯಕ್ಷ ಓಬಳೇಶಪ್ಪ ಕಾರ್ಯದರ್ಶಿ ಬೊಮ್ಮಯ್ಯ ಸಹ ಕಾರ್ಯದರ್ಶಿ ರವಿಕುಮಾರ್, ಉಮಾಮಹೇಶ್ವರಪ್ಪ, ರವಿಚಂದ್ರ, ಬಸವಕಿರಣ ಸ್ವಾಮೀಜಿ ಇದ್ದರು.