<blockquote>ಎಸ್ಎಸ್ಎಲ್ಸಿ ಫಲಿತಾಂಶದ ನೆಪದಲ್ಲಿ ಕಲಬುರಗಿ ಸೀಮೆಯ ಬಗ್ಗೆ ಲಘುವಾಗಿ ಮಾತನಾಡುವವರು, ಅಲ್ಲಿನ ವಿವೇಕ ಪರಂಪರೆಯನ್ನು ಗಮನಿಸಬೇಕು. ಪರಧರ್ಮ, ಪರ ವಿಚಾರಗಳನ್ನು ಸೈರಣೆ ಯಿಂದ ನೋಡಬೇಕೆನ್ನುವ ಕನ್ನಡ ವಿವೇಕ ಪರಂಪರೆಯ ಅತ್ಯುತ್ತಮ ಪ್ರತಿನಿಧಿ ಕಲಬುರಗಿ.</blockquote>.<p>ಭಾರತ ನರಕದಂತಹ ಪ್ರದೇಶ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೂ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನಿಷ್ಠ ಫಲಿತಾಂಶವನ್ನು ಪಡೆದಿರುವ ಜಿಲ್ಲೆಗಳಲ್ಲೊಂದಾದ ಕಲಬುರಗಿಯನ್ನು ಪ್ರಿಯಾಂಕ್ ಖರ್ಗೆ ಅವರ ನೆಪದಲ್ಲಿ ಎಗತಾಳೆ ಮಾಡುತ್ತಿರುವವರಿಗೂ ಅಧಿಕಾರ ಸ್ಥಾನ ಹೊರತುಪಡಿಸಿದಂತೆ ಹೆಚ್ಚಿನ ವ್ಯತ್ಯಾಸ ಇದ್ದಂತಿಲ್ಲ. ಕೊಂಚ ಕಟುವಾಗಿ ಹೇಳುವುದಾದರೆ, ಎರಡೂ ಸಂದರ್ಭಗಳಲ್ಲಿ ಕೆಲಸ ಮಾಡುತ್ತಿರುವ ಮಾನಸಿಕಸ್ಥಿತಿ ಒಂದೇ– ಜನಾಂಗೀಯ ನಿಂದನೆಯದು. ಟ್ರಂಪ್ ಅವರ ಮಾತುಗಳಲ್ಲಿ ಈ ನಿಂದನೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ಪ್ರಿಯಾಂಕ್–ಕಲಬುರಗಿ ಸಂದರ್ಭದಲ್ಲಿನ ಟ್ರೋಲ್ಗಳಲ್ಲಿ ಅದು ತೆಳುವಾಗಿ ಕಾಣಿಸುತ್ತಿದೆ.</p>.<p>ಇತ್ತೀಚಿನ ವರ್ಷಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯು ಫಲಿತಾಂಶ ಪ್ರಕಟವಾದಾಗಲೆಲ್ಲ ಕಲಬುರಗಿಯ ಫಲಿತಾಂಶವನ್ನು ನೆಪವಾಗಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಲಾಗುತ್ತಿದೆ. ಈ ಬಾರಿ ಆ ಟೀಕೆ ಅತಿರೇಕಕ್ಕೆ ಮುಟ್ಟಿದೆ. ಕನಿಷ್ಠ ಫಲಿತಾಂಶ ದಾಖಲೆಯ ಸಾಧನೆಗೆ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪುತ್ರ ಪ್ರಿಯಾಂಕ್ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸುತ್ತಿರುವ ಎಐ ರೂಪಿತ ವಿಡಿಯೊವನ್ನು ಜಾತ್ಯತೀತ ಜನತಾದಳ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ; ‘ಕಲಬುರಗಿ ಜಿಲ್ಲೆ ಹಿಂದುಳಿಯಲು ಖರ್ಗೆ ಕುಟುಂಬ ಕಾರಣ!’ ಎಂದು ನೇರವಾಗಿ ಟೀಕಿಸಿದೆ. ‘ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ, ಟ್ವೀಟ್ ಎಲ್ಲಿ ಮಹಾಜ್ಞಾನಿ?’ ಎಂದು ಬಿಜೆಪಿ ಕುಟುಕಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು, ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿದ ಮಧು ಬಂಗಾರಪ್ಪನವರ ಮೇಲೆ ಪ್ರಿಯಾಂಕ್ ಅವರಿಗೆ ಕೋಪ ಉಕ್ಕಿರಬಹುದು ಎಂದು ಊಹಿಸಿದ್ದಾರೆ. ಮಾಜಿ ಶಿಕ್ಷಣ ಸಚಿವರ ಸೃಜನಶೀಲ ಕಲ್ಪನೆ ಅಮೋಘವಾದುದು.</p>.<p>ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಿಯಾಂಕ್ ಖರ್ಗೆ ಅವರ ಮೇಲೆ ಕೋಪ ಮಾಡಿಕೊಳ್ಳಲು ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ಆರ್ಎಸ್ಎಸ್ಗೆ ಮರ್ಮಾಘಾತದ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಪ್ರಿಯಾಂಕ್ ಮುಂಚೂಣಿಯಲ್ಲಿದ್ದಾರೆ; ನೋಂದಣಿಗೆ ಒಳಪಡದಿರುವ ಸಂಘದ ಚಟುವಟಿಕೆಗಳನ್ನು ಪ್ರಶ್ನಿಸುವುದರ ಜೊತೆಗೆ, ಆರ್ಎಸ್ಎಸ್ ತೆರಿಗೆ ವಂಚಿಸುತ್ತಿದೆ ಎನ್ನುವ ಆರೋಪಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಎಸ್ಎಸ್ ಅನ್ನು ಹಾವಿಗೆ ಹೋಲಿಸಿದ್ದಾರೆ. ಕುಂಬಳಕಾಯಿ ಕಳ್ಳ ಎಂದು ಯಾರಾದರೂ ಹೇಳಿದಾಗಲೆಲ್ಲ, ಆರ್ಎಸ್ಎಸ್ ಬದಲು ಬಿಜೆಪಿ ಹೆಗಲು ಮುಟ್ಟಿಕೊಳ್ಳುವುದು ಹೊಸತೇನಲ್ಲ. ಈಗ, ಆ ಅನಿವಾರ್ಯತೆ ಬಿಜೆಪಿ<br>ಯೊಂದಿಗೆ ಮೈತ್ರಿಯಲ್ಲಿರುವ ಜೆಡಿಎಸ್ಗೂ ಬಂದಂತಿದೆ. ಖರ್ಗೆ ಕುಟುಂಬವನ್ನು, ವಿಶೇಷವಾಗಿ ಪ್ರಿಯಾಂಕ್ ಅವರನ್ನು ಹಣಿಯುವ ಅವಕಾಶವಾಗಿ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶಗಳು ಬಿಜೆಪಿ–ಜೆಡಿಎಸ್ಗೆ ದೊರಕಿವೆ. ಖರ್ಗೆ ಕುಟುಂಬವನ್ನು ಅವಮಾನಿಸುತ್ತಿರುವುದು ವ್ಯಕ್ತಿಗತ ನಿಂದೆಯಷ್ಟೇ ಅಲ್ಲ. ಅದು ಪರೋಕ್ಷವಾಗಿ ಒಂದು ಸಮಯದಾಯದ ಕುರಿತ ಅಸಹನೆಯೂ ಹೌದು. ಈ ಹಿಂದೆ, ಖರ್ಗೆಯವರ ಮೈಬಣ್ಣ ಆಡಿಕೊಂಡವರೇ ಈಗ ಅವರು ಪ್ರತಿನಿಧಿಸುವ ಪರಿಸರದ ಬಗ್ಗೆಯೂ ಕುಹಕವಾಡುತ್ತಿದ್ದಾರೆ.</p>.<p>ಆರ್ಎಸ್ಎಸ್ ವಿರುದ್ಧದ ಖರ್ಗೆದ್ವಯರ ಮಾತುಗಳೆಲ್ಲವನ್ನೂ ಸರಿಯೆಂದು ಒಪ್ಪಿಕೊಳ್ಳ<br>ಲಾಗದು. ಖರ್ಗೆಯವರು ಹೇಳುವಂತೆ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಹಾವೆಂದು ತರ್ಕಕ್ಕೆ ಒಪ್ಪಿ<br>ಕೊಂಡರೂ, ಅದನ್ನು ಕೊಲ್ಲಬೇಕೆಂದು ಹೇಳುವುದನ್ನು ತರ್ಕವಾಗಿಯೂ ಒಪ್ಪಿಕೊಳ್ಳಲಾಗದು. ಖರ್ಗೆಯವರು ನಂಬುವ ಬುದ್ಧಮಾರ್ಗ ಸರ್ಪದ ಬಗ್ಗೆಯೂ ಕರುಣೆ ತೋರಿಸುವಂತಹದ್ದು. ಬುದ್ಧಮಾರ್ಗದಲ್ಲಿ ಹಾವಿನ ವಿಷ ತಿಳಿಯಾಗಬಹುದೇ ಹೊರತು, ನಾಶಕ್ಕೆ ಅವಕಾಶವಿಲ್ಲ. ಖರ್ಗೆ ಹಾಗೂ ಪ್ರಿಯಾಂಕ್ ಅವರ ಮಾತುಗಳಿಗೆ ಅಸಮ್ಮತಿ ಸೂಚಿಸುತ್ತಲೇ, ಅವರ ಟೀಕೆಗಳು ರಾಜಕಾರಣದಲ್ಲಿ ಸಹಜ ಎನ್ನುವುದನ್ನು ಗುರ್ತಿಸಬೇಕು. ಆರ್ಎಸ್ಎಸ್ ಒಪ್ಪಿಕೊಳ್ಳದೆ ಹೋದರೂ, ಅದೊಂದು ರಾಜಕೀಯ ಸಂಘಟನೆಯಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಹಾಗೂ ದೇಶದ ಆಗುಹೋಗುಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ನೇರವಾಗಿಯೇ ಪ್ರಭಾವಿಸುತ್ತಿದೆ. ಹಾಗಾಗಿ, ಅದು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರದಾಯಿಯಾಗಿದೆ. ಈ ಉತ್ತರದಾಯಿತ್ವವನ್ನು ಬಿಜೆಪಿ ಹಾಗೂ ಜೆಡಿಎಸ್ ತೆಗೆದುಕೊಂಡಿವೆ, ಅದು ಅಸಹಜವೂ ಅಲ್ಲ. ಆದರೆ, ಪ್ರಿಯಾಂಕ್ರನ್ನು ಅಣಕಮಾಡಲು ಕಲಬುರಗಿ ಸೀಮೆಯನ್ನು, ಅಲ್ಲಿನ ಮಕ್ಕಳನ್ನು ಬಳಸಿಕೊಂಡಿರುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ಈ ಟೀಕೆಗಳು ರಾಜಕಾರಣವನ್ನು ಮೀರಿ ವ್ಯಕ್ತಿಯನ್ನೂ ಸಮುದಾಯವನ್ನೂ ಪ್ರದೇಶವನ್ನೂ ಗಾಸಿಗೊಳಿಸುವಂತಿವೆ. ಭಾರತದ ಕುರಿತ ಟ್ರಂಪ್ರ ಮಾತುಗಳಲ್ಲಿನ ಕೀಳು ಅಭಿರುಚಿ ಇಲ್ಲಿಯೂ ಇದೆ.</p>.<p>ಕಲಬುರಗಿ ಜಿಲ್ಲೆಯ ಬಗೆಗಿನ ಟೀಕೆಗಳು ಎಸ್ಎಸ್ಎಲ್ಸಿ, ಪಿಯು ಫಲಿತಾಂಶಗಳಿಗೆ ಸೀಮಿತ<br>ವಾದುವಲ್ಲ. ಅಲ್ಲಿನ ಬಿಸಿಲನ್ನು, ಬೆವರ ಬದುಕು ಹಾಗೂ ಬಡತನವನ್ನು ಕುರಿತು ಅಸೂಕ್ಷ್ಮ ಮಾತು<br>ಗಳು ಆಗಾಗ ಕೇಳಿಬರುತ್ತಿರುತ್ತವೆ. ಹೀಗೆ ಮಾತನಾಡುವವರು ಕಲಬುರಗಿ ಸೀಮೆಯ ವಿವೇಕವನ್ನು ಲಘುವಾಗಿ ಕಾಣುತ್ತಿರುತ್ತಾರೆ ಹಾಗೂ ಕನ್ನಡನಾಡಿನ ಚರಿತ್ರೆಯ ಬಗ್ಗೆ ಪೂರ್ವಗ್ರಹ ಹೊಂದಿ<br>ರುತ್ತಾರೆ. ಅಭಿವೃದ್ಧಿಯ ಮಾನದಂಡಗಳಲ್ಲಿ ಕಲಬುರಗಿ ಸೀಮೆಗೆ ಕಡಿಮೆ ಅಂಕಗಳು ಬರಬಹುದು. ಆದರೆ, ಕನ್ನಡ ವಿವೇಕ ಪರಂಪರೆಯನ್ನು ಪ್ರತಿನಿಧಿಸುವುದರಲ್ಲಿ ಬೀದರ್ ಹೊರತುಪಡಿಸಿದರೆ, ಕಲಬುರಗಿ ಸೀಮೆಗೆ ಕನ್ನಡನಾಡಿನ ಬೇರೆ ಯಾವ ಪ್ರದೇಶವೂ ಸಾಟಿಯಲ್ಲ. ನಾಡಗೀತೆಯ ಹೃದಯವಾದ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಬಹುತ್ವದ ಪರಿಕಲ್ಪನೆ ಸಾಕಾರಗೊಂಡಿರುವ ನೆಲ ಕಲಬುರಗಿ.</p>.<p>ಹಲವು ಭಾಷೆ, ಸಂಸ್ಕೃತಿ, ನಂಬಿಕೆಗಳ ಸೃಜನಶೀಲ ಸಮೀಕರಣವಾದ ಕಲಬುರಗಿಯ ಪರಿಸರ, ಬಿಸಿಲನ್ನು ಬಟ್ಟಿಯಿಳಿಸಿ ಬೆಳುದಿಂಗಳನ್ನಾಗಿಸಿಕೊಂಡಿರುವ ಸೀಮೆ. ಬಹಮನಿ ಸುಲ್ತಾನರ ಮೂಲಕ ಪ್ರವರ್ಧಮಾನಕ್ಕೆ ಬಂದ ಗುಲ್ಬರ್ಗ, ಅಲಾವುದ್ದೀನ್ ಹಸನ್ ಗಂಗೂ ಬಹಮನ್ ಶಹಾ, ಫಿರೋಜ್ ಶಹಾ, ಮಲಿಕ್ ಸೈಫುದ್ದೀನ್ ಘೋರಿ, ಖ್ವಾಜಾ ಬಂದೇ ನವಾಜ್, ಮುಂತಾದವರ ಮೂಲಕ ಸಾಂಸ್ಕೃತಿಕವಾಗಿಯೂ ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಿತು. ಪ್ರಧಾನಿಯಾಗಿದ್ದ ಮಲಿಕ್ ಸೈಫುದ್ದೀನ್ ಘೋರಿಯು ವಿದೇಶಾಂಗ ನೀತಿಯನ್ನು ರೂಪಿಸಿದ್ದ. ಬಹಮನಿ ಸಾಮ್ರಾಜ್ಯದ ಪ್ರಸಿದ್ಧ ಅರಸ ಫಿರೋಜ್ ಶಹಾ ರೂಪಿಸಿದ ‘ಸೌಹಾರ್ದ ನೀತಿ’ಯು ದೆಹಲಿಯ ಮೊಗಲರಿಗೂ ಆದರ್ಶಪ್ರಾಯವಾಗಿತ್ತು. ಗಣಿತ, ಖಗೋಳ, ಸಸ್ಯಶಾಸ್ತ್ರ, ಭಾಷಾಶಾಸ್ತ್ರದಲ್ಲಿ ಫಿರೋಜ್ ಕುತೂಹಲಿಯಾಗಿದ್ದ; ಕವಿಯೂ ಆಗಿದ್ದ. ವಿಜಯನಗರದ ದೊರೆ ದೇವರಾಯನ ಮಗಳನ್ನು ಮದುವೆಯಾಗಿದ್ದ. ಫಿರೋಜ್ ಅವಧಿಯಲ್ಲಿಯೇ, ಖ್ವಾಜಾ ಬಂದೇ ನವಾಜ್ರು ಗುಲ್ಬರ್ಗಕ್ಕೆ ಬಂದು ನೆಲೆಗೊಂಡರು; ನಗರಕ್ಕೆ ಸಾಂಸ್ಕೃತಿಕ, ಆಧ್ಯಾತ್ಮಿಕ ವರ್ಚಸ್ಸು ತಂದುಕೊಟ್ಟರು. ಸೂಫಿ ತಾತ್ತ್ವಿಕತೆಗೆ ಖಚಿತ ನೆಲೆಗಟ್ಟು ಒದಗಿಸಿಕೊಟ್ಟರು. ಉರ್ದುವಿನ ಮೊದಲ ಗದ್ಯ ಲೇಖಕ ಎಂದು ಗುರ್ತಿಸಲಾಗುವ ಬಂದೇ ನವಾಜರ ಸ್ಮರಣೆಯ ರೂಪದಲ್ಲಿ ಕಲಬುರಗಿಯಲ್ಲಿರುವ ದರ್ಗಾ, ಪರಧರ್ಮ ಪರವಿಚಾರಗಳಿಗೆ ಸಂಬಂಧಿಸಿದ ಸೈರಣೆಯು ಎಲ್ಲ ಕಾಲಕ್ಕೂ ಅಗತ್ಯ ಎನ್ನುವ ಸತ್ಯವನ್ನು ಉಸುರುತ್ತಿರುವಂತಿದೆ. 19ನೇ ಶತಮಾನದಲ್ಲಿ ಶರಣಬಸವೇಶ್ವರರು ನಡೆಸಿದ ದಾಸೋಹ ಪ್ರಯೋಗಕ್ಕೆ ಗುಲ್ಬರ್ಗವೇ ಕೇಂದ್ರವಾಗಿತ್ತು. </p>.<p>ವಾಣಿಜ್ಯ, ಆಡಳಿತಾತ್ಮಕ, ಧಾರ್ಮಿಕ, ಸಾಹಿತ್ಯ–ಕಲೆಗಳಿಗೆ ಸಂಬಂಧಿಸಿದಂತೆ ಗುಲ್ಬರ್ಗ ಹಾಗೂ ಪರ್ಷಿಯಾಗಳ ನಂಟಿಗೆ ದೊಡ್ಡ ಚರಿತ್ರೆಯಿದೆ. ಪರ್ಷಿಯಾದೊಂದಿಗಿನ ಒಡನಾಟದಲ್ಲಿ ಅಲ್ಲಿನ ಸಾಹಿತ್ಯ, ಸಂಸ್ಕೃತಿ, ಕಲೆಗಳಿಂದ ಗುಲ್ಬರ್ಗ ಪ್ರಭಾವಿತವಾಯಿತು. ಪ್ರಭುತ್ವವಿರೋಧಿ ಹೋರಾಟ ಚರಿತ್ರೆ<br>ಯಲ್ಲಿಯೂ ಕಲಬುರಗಿಗೆ ವಿಶೇಷ ಸ್ಥಾನವಿದೆ. ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಈ ಸೀಮೆ ಮುಂಚೂಣಿಯಲ್ಲಿತ್ತು.</p>.<p>ಚರಿತ್ರೆ ಮಾತ್ರವಲ್ಲ, ವರ್ತಮಾನದಲ್ಲೂ ಕಲಬುರಗಿ ಸಾಮರಸ್ಯವನ್ನು ಜೀವಿಸುತ್ತಿರುವ ನಗರ. ‘ದೇಶದ ತೊಗರಿ ಕಣಜ’ ಎನ್ನುವ ಅಗ್ಗಳಿಕೆಯ ನಗರದ ವರ್ಚಸ್ಸು ಇಪ್ಪತ್ತನೇ ಶತಮಾನದಲ್ಲಿ ಕೊಂಚ ಮಸುಕಾಗಿದ್ದರೂ, ಅದರ ಸಾಂಸ್ಕೃತಿಕ ಸಿರಿ ಹಾಗೂ ಸೌಹಾರ್ದದ ಒರತೆ ಈಗಲೂ ನಿಗಿನಿಗಿ ಎನ್ನುತ್ತಿದೆ. ಈ ಪರಂಪರೆಯನ್ನು ಮರೆತು, ಖರ್ಗೆ ಕುಟುಂಬದ ಕಾರಣಕ್ಕಾಗಿ ಕಲಬುರಗಿಯ ವಿದ್ಯಾರ್ಥಿಗಳ ತಿಳಿವಳಿಕೆಯ ಬಗ್ಗೆ ಲಘುವಾಗಿ ಮಾತನಾಡುವವರು ತಮ್ಮ ತಿಳಿವಳಿಕೆಯ ಮಿತಿಯನ್ನು ಬಯಲು ಮಾಡಿಕೊಳ್ಳುತ್ತಾರಷ್ಟೇ. </p>.<p>ಶಿಕ್ಷಣದ ನೈಜ ಯಶಸ್ಸು ಇರುವುದು ಪರೀಕ್ಷೆಯ ಫಲಿತಾಂಶದಲ್ಲಿ ಅಲ್ಲ, ಜನ ಗಣ ಮನದಲ್ಲಿ ಹಾಗೂ ಜೀವನವಿಧಾನದಲ್ಲಿ ಎನ್ನುವುದು ಭಾರತೀಯ ಶಿಕ್ಷಣ ಪರಂಪರೆಯ ನಂಬಿಕೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಜನರು ನಾಡಿನಲ್ಲೇ ಹೆಚ್ಚು ಸುಶಿಕ್ಷಿತರು. ಕಲಬುರಗಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಸಿರಿವಂತಿಕೆಯನ್ನು ಗುರ್ತಿಸುತ್ತಲೇ, ಸ್ಪರ್ಧಾತ್ಮಕ ಶಿಕ್ಷಣದಲ್ಲಿ ಕಲಬುರಗಿಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಹಿನ್ನಡೆಗೆ ಹಾಗೂ ಆರ್ಥಿಕ ಅಭಿವೃದ್ಧಿಯ ಕುಂಟುವಿಕೆಗೆ ಕಾರಣಗಳೇನು ಎನ್ನುವುದರ ಗಂಭೀರ ಅಧ್ಯಯನ ನಡೆಯಬೇಕಾಗಿದೆ. ಆ ಅಧ್ಯಯನ ಪ್ರಾಂಜಲವಾಗಿ ನಡೆಯಬೇಕೇ ಹೊರತು, ಸಾಮಾಜಿಕ ಜಾಲತಾಣಗಳಲ್ಲಿ ಕೊಳಕನ್ನು ಕಾರಿಕೊಳ್ಳುವ ಮೂಲಕ ಅಲ್ಲ. ಹಾಗೆಯೇ, ಹಿಂದೊಮ್ಮೆ ಸಾಮರಸ್ಯದ ನೆಲೆಗಳಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿಯಂಥ ಜಿಲ್ಲೆಗಳು ಈಗ ‘ಕನ್ನಡ ವಿವೇಕ ಪರಂಪರೆ’ಗೆ ವಿಮುಖವಾಗಿರುವುದೇಕೆ ಎನ್ನುವ ಅಧ್ಯಯನವೂ ನಡೆಯಬೇಕಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುವ ಪರಿಸರದಲ್ಲೇ ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಕಾಲೇಜಿನ ಆವರಣಕ್ಕೆ ಬಿಟ್ಟುಕೊಳ್ಳದ ಪರಿಸ್ಥಿತಿ ಉಂಟಾದುದೇಕೆ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<blockquote>ಎಸ್ಎಸ್ಎಲ್ಸಿ ಫಲಿತಾಂಶದ ನೆಪದಲ್ಲಿ ಕಲಬುರಗಿ ಸೀಮೆಯ ಬಗ್ಗೆ ಲಘುವಾಗಿ ಮಾತನಾಡುವವರು, ಅಲ್ಲಿನ ವಿವೇಕ ಪರಂಪರೆಯನ್ನು ಗಮನಿಸಬೇಕು. ಪರಧರ್ಮ, ಪರ ವಿಚಾರಗಳನ್ನು ಸೈರಣೆ ಯಿಂದ ನೋಡಬೇಕೆನ್ನುವ ಕನ್ನಡ ವಿವೇಕ ಪರಂಪರೆಯ ಅತ್ಯುತ್ತಮ ಪ್ರತಿನಿಧಿ ಕಲಬುರಗಿ.</blockquote>.<p>ಭಾರತ ನರಕದಂತಹ ಪ್ರದೇಶ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತಿಗೂ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನಿಷ್ಠ ಫಲಿತಾಂಶವನ್ನು ಪಡೆದಿರುವ ಜಿಲ್ಲೆಗಳಲ್ಲೊಂದಾದ ಕಲಬುರಗಿಯನ್ನು ಪ್ರಿಯಾಂಕ್ ಖರ್ಗೆ ಅವರ ನೆಪದಲ್ಲಿ ಎಗತಾಳೆ ಮಾಡುತ್ತಿರುವವರಿಗೂ ಅಧಿಕಾರ ಸ್ಥಾನ ಹೊರತುಪಡಿಸಿದಂತೆ ಹೆಚ್ಚಿನ ವ್ಯತ್ಯಾಸ ಇದ್ದಂತಿಲ್ಲ. ಕೊಂಚ ಕಟುವಾಗಿ ಹೇಳುವುದಾದರೆ, ಎರಡೂ ಸಂದರ್ಭಗಳಲ್ಲಿ ಕೆಲಸ ಮಾಡುತ್ತಿರುವ ಮಾನಸಿಕಸ್ಥಿತಿ ಒಂದೇ– ಜನಾಂಗೀಯ ನಿಂದನೆಯದು. ಟ್ರಂಪ್ ಅವರ ಮಾತುಗಳಲ್ಲಿ ಈ ನಿಂದನೆ ಸ್ಪಷ್ಟವಾಗಿ ಕಾಣಿಸುತ್ತಿದ್ದರೆ, ಪ್ರಿಯಾಂಕ್–ಕಲಬುರಗಿ ಸಂದರ್ಭದಲ್ಲಿನ ಟ್ರೋಲ್ಗಳಲ್ಲಿ ಅದು ತೆಳುವಾಗಿ ಕಾಣಿಸುತ್ತಿದೆ.</p>.<p>ಇತ್ತೀಚಿನ ವರ್ಷಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯು ಫಲಿತಾಂಶ ಪ್ರಕಟವಾದಾಗಲೆಲ್ಲ ಕಲಬುರಗಿಯ ಫಲಿತಾಂಶವನ್ನು ನೆಪವಾಗಿಟ್ಟುಕೊಂಡು ಪ್ರಿಯಾಂಕ್ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಲಾಗುತ್ತಿದೆ. ಈ ಬಾರಿ ಆ ಟೀಕೆ ಅತಿರೇಕಕ್ಕೆ ಮುಟ್ಟಿದೆ. ಕನಿಷ್ಠ ಫಲಿತಾಂಶ ದಾಖಲೆಯ ಸಾಧನೆಗೆ ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪುತ್ರ ಪ್ರಿಯಾಂಕ್ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸುತ್ತಿರುವ ಎಐ ರೂಪಿತ ವಿಡಿಯೊವನ್ನು ಜಾತ್ಯತೀತ ಜನತಾದಳ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ; ‘ಕಲಬುರಗಿ ಜಿಲ್ಲೆ ಹಿಂದುಳಿಯಲು ಖರ್ಗೆ ಕುಟುಂಬ ಕಾರಣ!’ ಎಂದು ನೇರವಾಗಿ ಟೀಕಿಸಿದೆ. ‘ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ, ಟ್ವೀಟ್ ಎಲ್ಲಿ ಮಹಾಜ್ಞಾನಿ?’ ಎಂದು ಬಿಜೆಪಿ ಕುಟುಕಿದೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು, ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿದ ಮಧು ಬಂಗಾರಪ್ಪನವರ ಮೇಲೆ ಪ್ರಿಯಾಂಕ್ ಅವರಿಗೆ ಕೋಪ ಉಕ್ಕಿರಬಹುದು ಎಂದು ಊಹಿಸಿದ್ದಾರೆ. ಮಾಜಿ ಶಿಕ್ಷಣ ಸಚಿವರ ಸೃಜನಶೀಲ ಕಲ್ಪನೆ ಅಮೋಘವಾದುದು.</p>.<p>ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಿಯಾಂಕ್ ಖರ್ಗೆ ಅವರ ಮೇಲೆ ಕೋಪ ಮಾಡಿಕೊಳ್ಳಲು ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ಆರ್ಎಸ್ಎಸ್ಗೆ ಮರ್ಮಾಘಾತದ ಪ್ರಶ್ನೆಗಳನ್ನು ಕೇಳುತ್ತಿರುವವರಲ್ಲಿ ಪ್ರಿಯಾಂಕ್ ಮುಂಚೂಣಿಯಲ್ಲಿದ್ದಾರೆ; ನೋಂದಣಿಗೆ ಒಳಪಡದಿರುವ ಸಂಘದ ಚಟುವಟಿಕೆಗಳನ್ನು ಪ್ರಶ್ನಿಸುವುದರ ಜೊತೆಗೆ, ಆರ್ಎಸ್ಎಸ್ ತೆರಿಗೆ ವಂಚಿಸುತ್ತಿದೆ ಎನ್ನುವ ಆರೋಪಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಪ್ರಿಯಾಂಕ್ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಆರ್ಎಸ್ಎಸ್ ಅನ್ನು ಹಾವಿಗೆ ಹೋಲಿಸಿದ್ದಾರೆ. ಕುಂಬಳಕಾಯಿ ಕಳ್ಳ ಎಂದು ಯಾರಾದರೂ ಹೇಳಿದಾಗಲೆಲ್ಲ, ಆರ್ಎಸ್ಎಸ್ ಬದಲು ಬಿಜೆಪಿ ಹೆಗಲು ಮುಟ್ಟಿಕೊಳ್ಳುವುದು ಹೊಸತೇನಲ್ಲ. ಈಗ, ಆ ಅನಿವಾರ್ಯತೆ ಬಿಜೆಪಿ<br>ಯೊಂದಿಗೆ ಮೈತ್ರಿಯಲ್ಲಿರುವ ಜೆಡಿಎಸ್ಗೂ ಬಂದಂತಿದೆ. ಖರ್ಗೆ ಕುಟುಂಬವನ್ನು, ವಿಶೇಷವಾಗಿ ಪ್ರಿಯಾಂಕ್ ಅವರನ್ನು ಹಣಿಯುವ ಅವಕಾಶವಾಗಿ ಎಸ್ಎಸ್ಎಲ್ಸಿ, ಪಿಯುಸಿ ಫಲಿತಾಂಶಗಳು ಬಿಜೆಪಿ–ಜೆಡಿಎಸ್ಗೆ ದೊರಕಿವೆ. ಖರ್ಗೆ ಕುಟುಂಬವನ್ನು ಅವಮಾನಿಸುತ್ತಿರುವುದು ವ್ಯಕ್ತಿಗತ ನಿಂದೆಯಷ್ಟೇ ಅಲ್ಲ. ಅದು ಪರೋಕ್ಷವಾಗಿ ಒಂದು ಸಮಯದಾಯದ ಕುರಿತ ಅಸಹನೆಯೂ ಹೌದು. ಈ ಹಿಂದೆ, ಖರ್ಗೆಯವರ ಮೈಬಣ್ಣ ಆಡಿಕೊಂಡವರೇ ಈಗ ಅವರು ಪ್ರತಿನಿಧಿಸುವ ಪರಿಸರದ ಬಗ್ಗೆಯೂ ಕುಹಕವಾಡುತ್ತಿದ್ದಾರೆ.</p>.<p>ಆರ್ಎಸ್ಎಸ್ ವಿರುದ್ಧದ ಖರ್ಗೆದ್ವಯರ ಮಾತುಗಳೆಲ್ಲವನ್ನೂ ಸರಿಯೆಂದು ಒಪ್ಪಿಕೊಳ್ಳ<br>ಲಾಗದು. ಖರ್ಗೆಯವರು ಹೇಳುವಂತೆ ಆರ್ಎಸ್ಎಸ್ ಹಾಗೂ ಬಿಜೆಪಿಯನ್ನು ಹಾವೆಂದು ತರ್ಕಕ್ಕೆ ಒಪ್ಪಿ<br>ಕೊಂಡರೂ, ಅದನ್ನು ಕೊಲ್ಲಬೇಕೆಂದು ಹೇಳುವುದನ್ನು ತರ್ಕವಾಗಿಯೂ ಒಪ್ಪಿಕೊಳ್ಳಲಾಗದು. ಖರ್ಗೆಯವರು ನಂಬುವ ಬುದ್ಧಮಾರ್ಗ ಸರ್ಪದ ಬಗ್ಗೆಯೂ ಕರುಣೆ ತೋರಿಸುವಂತಹದ್ದು. ಬುದ್ಧಮಾರ್ಗದಲ್ಲಿ ಹಾವಿನ ವಿಷ ತಿಳಿಯಾಗಬಹುದೇ ಹೊರತು, ನಾಶಕ್ಕೆ ಅವಕಾಶವಿಲ್ಲ. ಖರ್ಗೆ ಹಾಗೂ ಪ್ರಿಯಾಂಕ್ ಅವರ ಮಾತುಗಳಿಗೆ ಅಸಮ್ಮತಿ ಸೂಚಿಸುತ್ತಲೇ, ಅವರ ಟೀಕೆಗಳು ರಾಜಕಾರಣದಲ್ಲಿ ಸಹಜ ಎನ್ನುವುದನ್ನು ಗುರ್ತಿಸಬೇಕು. ಆರ್ಎಸ್ಎಸ್ ಒಪ್ಪಿಕೊಳ್ಳದೆ ಹೋದರೂ, ಅದೊಂದು ರಾಜಕೀಯ ಸಂಘಟನೆಯಾಗಿಯೇ ಕಾರ್ಯ ನಿರ್ವಹಿಸುತ್ತಿದೆ ಹಾಗೂ ದೇಶದ ಆಗುಹೋಗುಗಳನ್ನು ಬಹಳಷ್ಟು ಸಂದರ್ಭಗಳಲ್ಲಿ ನೇರವಾಗಿಯೇ ಪ್ರಭಾವಿಸುತ್ತಿದೆ. ಹಾಗಾಗಿ, ಅದು ಸಾರ್ವಜನಿಕ ಪ್ರಶ್ನೆಗಳಿಗೆ ಉತ್ತರದಾಯಿಯಾಗಿದೆ. ಈ ಉತ್ತರದಾಯಿತ್ವವನ್ನು ಬಿಜೆಪಿ ಹಾಗೂ ಜೆಡಿಎಸ್ ತೆಗೆದುಕೊಂಡಿವೆ, ಅದು ಅಸಹಜವೂ ಅಲ್ಲ. ಆದರೆ, ಪ್ರಿಯಾಂಕ್ರನ್ನು ಅಣಕಮಾಡಲು ಕಲಬುರಗಿ ಸೀಮೆಯನ್ನು, ಅಲ್ಲಿನ ಮಕ್ಕಳನ್ನು ಬಳಸಿಕೊಂಡಿರುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ಈ ಟೀಕೆಗಳು ರಾಜಕಾರಣವನ್ನು ಮೀರಿ ವ್ಯಕ್ತಿಯನ್ನೂ ಸಮುದಾಯವನ್ನೂ ಪ್ರದೇಶವನ್ನೂ ಗಾಸಿಗೊಳಿಸುವಂತಿವೆ. ಭಾರತದ ಕುರಿತ ಟ್ರಂಪ್ರ ಮಾತುಗಳಲ್ಲಿನ ಕೀಳು ಅಭಿರುಚಿ ಇಲ್ಲಿಯೂ ಇದೆ.</p>.<p>ಕಲಬುರಗಿ ಜಿಲ್ಲೆಯ ಬಗೆಗಿನ ಟೀಕೆಗಳು ಎಸ್ಎಸ್ಎಲ್ಸಿ, ಪಿಯು ಫಲಿತಾಂಶಗಳಿಗೆ ಸೀಮಿತ<br>ವಾದುವಲ್ಲ. ಅಲ್ಲಿನ ಬಿಸಿಲನ್ನು, ಬೆವರ ಬದುಕು ಹಾಗೂ ಬಡತನವನ್ನು ಕುರಿತು ಅಸೂಕ್ಷ್ಮ ಮಾತು<br>ಗಳು ಆಗಾಗ ಕೇಳಿಬರುತ್ತಿರುತ್ತವೆ. ಹೀಗೆ ಮಾತನಾಡುವವರು ಕಲಬುರಗಿ ಸೀಮೆಯ ವಿವೇಕವನ್ನು ಲಘುವಾಗಿ ಕಾಣುತ್ತಿರುತ್ತಾರೆ ಹಾಗೂ ಕನ್ನಡನಾಡಿನ ಚರಿತ್ರೆಯ ಬಗ್ಗೆ ಪೂರ್ವಗ್ರಹ ಹೊಂದಿ<br>ರುತ್ತಾರೆ. ಅಭಿವೃದ್ಧಿಯ ಮಾನದಂಡಗಳಲ್ಲಿ ಕಲಬುರಗಿ ಸೀಮೆಗೆ ಕಡಿಮೆ ಅಂಕಗಳು ಬರಬಹುದು. ಆದರೆ, ಕನ್ನಡ ವಿವೇಕ ಪರಂಪರೆಯನ್ನು ಪ್ರತಿನಿಧಿಸುವುದರಲ್ಲಿ ಬೀದರ್ ಹೊರತುಪಡಿಸಿದರೆ, ಕಲಬುರಗಿ ಸೀಮೆಗೆ ಕನ್ನಡನಾಡಿನ ಬೇರೆ ಯಾವ ಪ್ರದೇಶವೂ ಸಾಟಿಯಲ್ಲ. ನಾಡಗೀತೆಯ ಹೃದಯವಾದ ‘ಸರ್ವ ಜನಾಂಗದ ಶಾಂತಿಯ ತೋಟ’ ಎನ್ನುವ ಬಹುತ್ವದ ಪರಿಕಲ್ಪನೆ ಸಾಕಾರಗೊಂಡಿರುವ ನೆಲ ಕಲಬುರಗಿ.</p>.<p>ಹಲವು ಭಾಷೆ, ಸಂಸ್ಕೃತಿ, ನಂಬಿಕೆಗಳ ಸೃಜನಶೀಲ ಸಮೀಕರಣವಾದ ಕಲಬುರಗಿಯ ಪರಿಸರ, ಬಿಸಿಲನ್ನು ಬಟ್ಟಿಯಿಳಿಸಿ ಬೆಳುದಿಂಗಳನ್ನಾಗಿಸಿಕೊಂಡಿರುವ ಸೀಮೆ. ಬಹಮನಿ ಸುಲ್ತಾನರ ಮೂಲಕ ಪ್ರವರ್ಧಮಾನಕ್ಕೆ ಬಂದ ಗುಲ್ಬರ್ಗ, ಅಲಾವುದ್ದೀನ್ ಹಸನ್ ಗಂಗೂ ಬಹಮನ್ ಶಹಾ, ಫಿರೋಜ್ ಶಹಾ, ಮಲಿಕ್ ಸೈಫುದ್ದೀನ್ ಘೋರಿ, ಖ್ವಾಜಾ ಬಂದೇ ನವಾಜ್, ಮುಂತಾದವರ ಮೂಲಕ ಸಾಂಸ್ಕೃತಿಕವಾಗಿಯೂ ಆರ್ಥಿಕವಾಗಿಯೂ ಬೆಳವಣಿಗೆ ಸಾಧಿಸಿತು. ಪ್ರಧಾನಿಯಾಗಿದ್ದ ಮಲಿಕ್ ಸೈಫುದ್ದೀನ್ ಘೋರಿಯು ವಿದೇಶಾಂಗ ನೀತಿಯನ್ನು ರೂಪಿಸಿದ್ದ. ಬಹಮನಿ ಸಾಮ್ರಾಜ್ಯದ ಪ್ರಸಿದ್ಧ ಅರಸ ಫಿರೋಜ್ ಶಹಾ ರೂಪಿಸಿದ ‘ಸೌಹಾರ್ದ ನೀತಿ’ಯು ದೆಹಲಿಯ ಮೊಗಲರಿಗೂ ಆದರ್ಶಪ್ರಾಯವಾಗಿತ್ತು. ಗಣಿತ, ಖಗೋಳ, ಸಸ್ಯಶಾಸ್ತ್ರ, ಭಾಷಾಶಾಸ್ತ್ರದಲ್ಲಿ ಫಿರೋಜ್ ಕುತೂಹಲಿಯಾಗಿದ್ದ; ಕವಿಯೂ ಆಗಿದ್ದ. ವಿಜಯನಗರದ ದೊರೆ ದೇವರಾಯನ ಮಗಳನ್ನು ಮದುವೆಯಾಗಿದ್ದ. ಫಿರೋಜ್ ಅವಧಿಯಲ್ಲಿಯೇ, ಖ್ವಾಜಾ ಬಂದೇ ನವಾಜ್ರು ಗುಲ್ಬರ್ಗಕ್ಕೆ ಬಂದು ನೆಲೆಗೊಂಡರು; ನಗರಕ್ಕೆ ಸಾಂಸ್ಕೃತಿಕ, ಆಧ್ಯಾತ್ಮಿಕ ವರ್ಚಸ್ಸು ತಂದುಕೊಟ್ಟರು. ಸೂಫಿ ತಾತ್ತ್ವಿಕತೆಗೆ ಖಚಿತ ನೆಲೆಗಟ್ಟು ಒದಗಿಸಿಕೊಟ್ಟರು. ಉರ್ದುವಿನ ಮೊದಲ ಗದ್ಯ ಲೇಖಕ ಎಂದು ಗುರ್ತಿಸಲಾಗುವ ಬಂದೇ ನವಾಜರ ಸ್ಮರಣೆಯ ರೂಪದಲ್ಲಿ ಕಲಬುರಗಿಯಲ್ಲಿರುವ ದರ್ಗಾ, ಪರಧರ್ಮ ಪರವಿಚಾರಗಳಿಗೆ ಸಂಬಂಧಿಸಿದ ಸೈರಣೆಯು ಎಲ್ಲ ಕಾಲಕ್ಕೂ ಅಗತ್ಯ ಎನ್ನುವ ಸತ್ಯವನ್ನು ಉಸುರುತ್ತಿರುವಂತಿದೆ. 19ನೇ ಶತಮಾನದಲ್ಲಿ ಶರಣಬಸವೇಶ್ವರರು ನಡೆಸಿದ ದಾಸೋಹ ಪ್ರಯೋಗಕ್ಕೆ ಗುಲ್ಬರ್ಗವೇ ಕೇಂದ್ರವಾಗಿತ್ತು. </p>.<p>ವಾಣಿಜ್ಯ, ಆಡಳಿತಾತ್ಮಕ, ಧಾರ್ಮಿಕ, ಸಾಹಿತ್ಯ–ಕಲೆಗಳಿಗೆ ಸಂಬಂಧಿಸಿದಂತೆ ಗುಲ್ಬರ್ಗ ಹಾಗೂ ಪರ್ಷಿಯಾಗಳ ನಂಟಿಗೆ ದೊಡ್ಡ ಚರಿತ್ರೆಯಿದೆ. ಪರ್ಷಿಯಾದೊಂದಿಗಿನ ಒಡನಾಟದಲ್ಲಿ ಅಲ್ಲಿನ ಸಾಹಿತ್ಯ, ಸಂಸ್ಕೃತಿ, ಕಲೆಗಳಿಂದ ಗುಲ್ಬರ್ಗ ಪ್ರಭಾವಿತವಾಯಿತು. ಪ್ರಭುತ್ವವಿರೋಧಿ ಹೋರಾಟ ಚರಿತ್ರೆ<br>ಯಲ್ಲಿಯೂ ಕಲಬುರಗಿಗೆ ವಿಶೇಷ ಸ್ಥಾನವಿದೆ. ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಈ ಸೀಮೆ ಮುಂಚೂಣಿಯಲ್ಲಿತ್ತು.</p>.<p>ಚರಿತ್ರೆ ಮಾತ್ರವಲ್ಲ, ವರ್ತಮಾನದಲ್ಲೂ ಕಲಬುರಗಿ ಸಾಮರಸ್ಯವನ್ನು ಜೀವಿಸುತ್ತಿರುವ ನಗರ. ‘ದೇಶದ ತೊಗರಿ ಕಣಜ’ ಎನ್ನುವ ಅಗ್ಗಳಿಕೆಯ ನಗರದ ವರ್ಚಸ್ಸು ಇಪ್ಪತ್ತನೇ ಶತಮಾನದಲ್ಲಿ ಕೊಂಚ ಮಸುಕಾಗಿದ್ದರೂ, ಅದರ ಸಾಂಸ್ಕೃತಿಕ ಸಿರಿ ಹಾಗೂ ಸೌಹಾರ್ದದ ಒರತೆ ಈಗಲೂ ನಿಗಿನಿಗಿ ಎನ್ನುತ್ತಿದೆ. ಈ ಪರಂಪರೆಯನ್ನು ಮರೆತು, ಖರ್ಗೆ ಕುಟುಂಬದ ಕಾರಣಕ್ಕಾಗಿ ಕಲಬುರಗಿಯ ವಿದ್ಯಾರ್ಥಿಗಳ ತಿಳಿವಳಿಕೆಯ ಬಗ್ಗೆ ಲಘುವಾಗಿ ಮಾತನಾಡುವವರು ತಮ್ಮ ತಿಳಿವಳಿಕೆಯ ಮಿತಿಯನ್ನು ಬಯಲು ಮಾಡಿಕೊಳ್ಳುತ್ತಾರಷ್ಟೇ. </p>.<p>ಶಿಕ್ಷಣದ ನೈಜ ಯಶಸ್ಸು ಇರುವುದು ಪರೀಕ್ಷೆಯ ಫಲಿತಾಂಶದಲ್ಲಿ ಅಲ್ಲ, ಜನ ಗಣ ಮನದಲ್ಲಿ ಹಾಗೂ ಜೀವನವಿಧಾನದಲ್ಲಿ ಎನ್ನುವುದು ಭಾರತೀಯ ಶಿಕ್ಷಣ ಪರಂಪರೆಯ ನಂಬಿಕೆ. ಈ ಹಿನ್ನೆಲೆಯಲ್ಲಿ ಕಲಬುರಗಿಯ ಜನರು ನಾಡಿನಲ್ಲೇ ಹೆಚ್ಚು ಸುಶಿಕ್ಷಿತರು. ಕಲಬುರಗಿಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಸಿರಿವಂತಿಕೆಯನ್ನು ಗುರ್ತಿಸುತ್ತಲೇ, ಸ್ಪರ್ಧಾತ್ಮಕ ಶಿಕ್ಷಣದಲ್ಲಿ ಕಲಬುರಗಿಯೂ ಸೇರಿದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಹಿನ್ನಡೆಗೆ ಹಾಗೂ ಆರ್ಥಿಕ ಅಭಿವೃದ್ಧಿಯ ಕುಂಟುವಿಕೆಗೆ ಕಾರಣಗಳೇನು ಎನ್ನುವುದರ ಗಂಭೀರ ಅಧ್ಯಯನ ನಡೆಯಬೇಕಾಗಿದೆ. ಆ ಅಧ್ಯಯನ ಪ್ರಾಂಜಲವಾಗಿ ನಡೆಯಬೇಕೇ ಹೊರತು, ಸಾಮಾಜಿಕ ಜಾಲತಾಣಗಳಲ್ಲಿ ಕೊಳಕನ್ನು ಕಾರಿಕೊಳ್ಳುವ ಮೂಲಕ ಅಲ್ಲ. ಹಾಗೆಯೇ, ಹಿಂದೊಮ್ಮೆ ಸಾಮರಸ್ಯದ ನೆಲೆಗಳಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿಯಂಥ ಜಿಲ್ಲೆಗಳು ಈಗ ‘ಕನ್ನಡ ವಿವೇಕ ಪರಂಪರೆ’ಗೆ ವಿಮುಖವಾಗಿರುವುದೇಕೆ ಎನ್ನುವ ಅಧ್ಯಯನವೂ ನಡೆಯಬೇಕಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಮುಂಚೂಣಿಯಲ್ಲಿರುವ ಪರಿಸರದಲ್ಲೇ ಹಿಜಾಬ್ ಧರಿಸಿದ ಹೆಣ್ಣುಮಕ್ಕಳನ್ನು ಕಾಲೇಜಿನ ಆವರಣಕ್ಕೆ ಬಿಟ್ಟುಕೊಳ್ಳದ ಪರಿಸ್ಥಿತಿ ಉಂಟಾದುದೇಕೆ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>