ಈಚೆಗೆ ಕಾರ್ ಅಪಘಾತದಲ್ಲಿ ಕಾಲಿಗೆ ಜೋರಾಗಿ ಪೆಟ್ಟಾಗಿ ಅವರಿಗೆ ನಡೆಯುವುದು ಕಷ್ಟವಾಗಿದೆ. ಇದೇ ಅಪಘಾತದಲ್ಲಿ ತಮ್ಮ ಪತ್ನಿ ಪರ್ವೀನ್ ಬಾನುರನ್ನು ಕಳೆದುಕೊಂಡಿದ್ದಾರೆ. ಸ್ನೇಹಪರ, ಸೌಮ್ಯ ಸ್ವಭಾವದ ಫೈಯಾಜರಿಗೆ ಬೆಂಬಲ ಸೂಚಿಸಲು ಸಂಗೀತಗಾರರೆಲ್ಲ ಸೇರಿ ಶುಕ್ರವಾರ ರಾಜೀವ್ ತಾರಾನಾಥರ ಸರೋದ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅನನ್ಯ ಅಕಾಡೆಮಿಯಂಥ ಸಂಸ್ಥೆಗಳು ಅವರ ನೆರವಿಗೆ ನಿಂತಿವೆ. ಡಾ. ಆರ್.ವಿ.ರಾಘವೇಂದ್ರ ಅವರು ಹೇಳುವಂತೆ, `ಈ ಕಲಾವಿದರ ಜೊತೆಗೆ ನಿಲ್ಲುವುದು ಸಮುದಾಯದ ಕರ್ತವ್ಯ. ಸಂಗೀತ ಪ್ರೇಮಿಗಳು, ಫೈಯಾಜರ ಅಭಿಮಾನಿಗಳು ಹೇಗಾದರೂ ನೆರವಾಗಬಹುದೇ ಎಂದು ಕೇಳುತ್ತಿದ್ದಾರೆ. ಅಂಥವರಿಗೆ ಅನನ್ಯ ಸಂಸ್ಥೆಯ ನಂಬರ್ ಇಲ್ಲಿದೆ: 99809 99110