`ಸುತ್ತಿಗೆ ಹಿಡಿದ ವ್ಯಕ್ತಿಗೆ ಸುತ್ತಮುತ್ತಲೆಲ್ಲ ಬರೀ ಮೊಳೆಗಳೇ ಕಾಣುತ್ತವಂತೆ' ಎಂಬ ಪ್ರಸಿದ್ಧ ಉಕ್ತಿಯೊಂದಿದೆ. ಅದೇ ರೀತಿ, ಅಭಿವೃದ್ಧಿಯನ್ನು ಜಾರಿಗೆ ತರುವಾಗ ನಾವು ಹಲವಾರು ಬಾರಿ ಸಮಸ್ಯೆಗಳನ್ನು ನಮ್ಮ ನೈಪುಣ್ಯ ಮತ್ತು ಸಾಮರ್ಥ್ಯವನ್ನು ಆಧರಿಸಿದ ಸಂಕುಚಿತ ದೃಷ್ಟಿಕೋನದಿಂದಷ್ಟೇ ನೋಡುತ್ತೇವೆ. ನಮಗೆ ಅಭಿವೃದ್ಧಿ ಎಂದರೆ ಏನಿದ್ದರೂ ಶಿಕ್ಷಣ, ಆರೋಗ್ಯ, ಜೀವನೋಪಾಯ, ನೀರು, ನೈರ್ಮಲ್ಯ ಇತ್ಯಾದಿ ಒದಗಿಸುವುದಷ್ಟೇ ಆಗಿರುತ್ತದೆ. ಕೇವಲ ಜನರ ದೈಹಿಕ ಅಗತ್ಯಗಳನ್ನು ಪೂರೈಸುವಷ್ಟಕ್ಕೇ ನಮ್ಮ ಅರಿವನ್ನು ಸೀಮಿತಗೊಳಿಸಿಕೊಂಡು ಬಿಡುವ ನಾವು, ಅವರ ಅಂತರಾಳ, ಮನಸ್ಸು ಮತ್ತು ಆತ್ಮದ ಅಗತ್ಯಗಳನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ.