ಬನ್ನಿ, ಸತ್ಯಾಗ್ರಹ ಮಾಡೋಣ. ಸಾಯುತ್ತಿರುವ ವ್ಯವಸ್ಥೆಗೆ ಬೆನ್ನು ತಿರುಗಿಸಿ ನಿಲ್ಲೋಣ!
*
ವೃಥಾ ಮೈ ನುಗ್ಗು ಮಾಡಿಕೊಳ್ಳದಿರಿ! ಸಾಕುಬಿಡಿ ಹಕ್ಕಿನ ಹೋರಾಟ, ಸಾಕುಬಿಡಿ ಪ್ರಜಾಸತ್ತಾತ್ಮಕ ಭಿಕ್ಷಾವೃತ್ತಿ! ಸತ್ತೆ ಸಾಯುತ್ತಿದೆ. ಬರಿದೆ ಅತ್ತರೆ ಕರೆದರೆ ಏನೂ ಪ್ರಯೋಜನವಿಲ್ಲ. ಎದ್ದೇಳಿ! ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಿ. ಪ್ರಜಾಸತ್ತೆಯೆಂಬ ಘನವಾದ ಹೆಸರು ಹೊತ್ತಿದ್ದ ಈ ರೋಗಗ್ರಸ್ತ ವ್ಯವಸ್ಥೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಲಾರದು, ಬಡವ ಬಲ್ಲಿದರ ಅಂತರ ಕುಗ್ಗಿಸಲಾರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.