‘ಕನಕದಾಸರು ಜನಿಸಿದ್ದ ಬಾಡದ ಮನೆಯ ಸಂರಕ್ಷಣೆ ಹಾಗೂ ವಿವಿಧ ಅಭಿವೃದ್ಧಿ ಕೆಲಸಕ್ಕಾಗಿ ರಾಜ್ಯ ಸರ್ಕಾರವು ಪ್ರಸಕ್ತ ಬಜೆಟ್ನಲ್ಲಿ ₹ 5 ಕೋಟಿ ಘೋಷಣೆ ಮಾಡಿದೆ. ಈ ಹಣವನ್ನು ಬಳಸಿಕೊಂಡು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು’ ಎಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಮುಕ್ಕಣ್ಣ ಕರಿಗಾರ ಹೇಳಿದರು. ‘ಕನಕದಾಸರು, ತಿಮ್ಮಪ್ಪನಾಯಕರಾಗಿದ್ದ ಸಂದರ್ಭದಲ್ಲಿಯೇ ಮನೆಯ ಸುತ್ತಮುತ್ತಲಿನ ಸಂಗತಿಗಳ ಮೂಲಕ ಸ್ಫೂರ್ತಿಗೊಂಡು ಹಲವು ಕಾವ್ಯಗಳನ್ನು ರಚಿಸಿರುವುದಕ್ಕೆ ಪುರಾವೆಗಳು ಸಿಗುತ್ತಿವೆ. ಬಾಡದ ಉತ್ಖನನ ಬಗ್ಗೆ ಉಲ್ಲೇಖಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಒಪ್ಪಿಗೆ ಸಿಕ್ಕಿದೆ’ ಎಂದರು.
ಕನಕದಾಸರ ಬದುಕಿನ ಬಗ್ಗೆ ಕೆಲವರು ಕಪೋಲಕಲ್ಪಿತ ರೀತಿಯಲ್ಲಿ ಬಿಂಬಿಸಿ ಪುಸ್ತಕಗಳನ್ನು ರಚಿಸಿದ್ದಾರೆ. ಇದಕ್ಕೆಲ್ಲ ಪುರಾವೆಗಳ ಮೂಲಕ ಉತ್ತರ ನೀಡಲು ಉತ್ಖನನ ಪ್ರಕ್ರಿಯೆ ನಡೆದಿದೆ.
– ಮುಕ್ಕಣ್ಣ ಕರಿಗಾರ, ಆಯುಕ್ತ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ