ಉದಾಹರಣೆಗೆ, ನಾವು ಓದಲು ಆರಿಸಿಕೊಳ್ಳುವ ಪುಸ್ತಕವನ್ನೇ ನೋಡಬಹುದು. ಯಾವುದೋ ಮೂರನೆಯ ದರ್ಜೆಯ ಪುಸ್ತಕವನ್ನು ಓದಿ, ಈ ಕಡೆ ಸಂತೋಷವೂ ಇಲ್ಲ, ಆ ಕಡೆ ಜ್ಞಾನಸಂಪಾದನೆಯೂ ಇಲ್ಲ ಎಂಬಂಥ ಪರಿಸ್ಥಿತಿಯನ್ನು ತಂದುಕೊಳ್ಳಬಾರದು. ರಾಮಾಯಣ–ಮಹಾಭಾರತಗಳನ್ನೋ ಕಾಳಿದಾಸ–ಕುಮಾರವ್ಯಾಸರನ್ನೋ ಶೇಕ್ಸ್ಪಿಯರ್–ಪಂಪರನ್ನೋ ಓದಲು ಆರಿಸಿಕೊಂಡರೆ ಒಂದಲ್ಲ ಒಂದು ವಿಧದಲ್ಲಿ ಆ ಓದು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ನೆರವಾಗುತ್ತದೆ.