ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳಬೇಕಾದ್ದು ಮೊದಲನೆಯ ಕರ್ತವ್ಯ. ಬಳಿಕ ಸರಿಯಾದ ದಾರಿಯಲ್ಲಿ ನಡೆಯಲು ಬೇಕಾದ ಸಲಕರಣೆಗಳನ್ನು ಸಂಪಾದಿಸುವುದು ಎರಡನೆಯ ಕೆಲಸ. ಹೀಗೆ ಧರ್ಮಬದ್ಧವಾಗಿ ಸಂಪಾದಿಸಿದ ಸಂಪತ್ತಿನಿಂದ ಸುಖವನ್ನು ಪಡೆಯವುದು ನಮ್ಮ ಜೀವನದ ಗುರಿಯಾಗಬೇಕು. ಈ ಮೂರು ಸಾಧನಗಳನ್ನೇ ತ್ರಿವರ್ಗ ಎಂದು ಶಾಸ್ತ್ರಗಳು ಘೋಷಿಸಿರುವುದು.