<p>ನಂಜನಗೂಡು: ‘ಪರಸ್ಪರ ದ್ವೇಷ, ಅಸೂಯೆ, ಅಪನಂಬಿಕೆ, ಯುದ್ಧದಿಂದ ಹೊತ್ತಿ ಉರಿಯುತ್ತಿರುವ ಜಗತ್ತು ಶಾಂತಿಯಿಂದ ಬಾಳಬೇಕಾದರೆ ಗಾಂಧೀಜಿಯ ತತ್ವ, ಆದರ್ಶಗಳು ಅನಿವಾರ್ಯ’ ಎಂದು ಅರಸೀಕೆರೆ ಕಸ್ತೂರ್ಬಾ ಗಾಂಧಿ ಆಶ್ರಮದ ಕಾರ್ಯ ದರ್ಶಿ ಪ್ರೊ.ಜಿ.ಬಿ.ಶಿವರಾಜು ಹೇಳಿದರು.</p>.<p>ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಬಹುತ್ವ ಭಾರತ– ಗಾಂಧೀಜಿ ವಿಚಾರಧಾರೆ’ ವಿಚಾರ ಸಂಕಿರಣ ಸಮಾರೋಪದಲ್ಲಿ ಮಾತನಾಡಿದರು.</p>.<p>‘ಗಾಂಧಿಜೀಯ ಸತ್ಯ, ಅಹಿಂಸೆ ತತ್ವ, ಆದರ್ಶಗಳು ಉಳಿಯದಿದ್ದರೆ ಜಗತ್ತು ಉಳಿಯುವುದಾದರೂ ಹೇಗೆ ?. ಮನುಷ್ಯತ್ವ ಅಸ್ತಿತ್ವದಲ್ಲಿರುವವಗೆ ಗಾಂಧೀಜಿ ಪ್ರಸ್ತುತರಾಗಿರುತ್ತಾರೆ, ಇಂದಿನ ತಲೆಮಾರಿಗೆ ಗಾಂಧಿಯ ವಿಚಾರಧಾರೆ ತಲುಪಿಸಬೇಕು, ಇಲ್ಲದಿದ್ದರೆ ಯುವಜನತೆ ದಾರಿ ತಪ್ಪುತ್ತಾರೆ’ ಎಂದು ಹೇಳಿದರು.</p>.<p>ಪ್ರಗತಿಪರ ಚಿಂತಕ ಕೆ.ವೆಂಕಟರಾಜು ಮಾತನಾಡಿ, ‘ಅಂಬೇಡ್ಕರ್ ಅವರ ಕಾರ್ಮಿಕ ಹಾಗೂ ಮಹಿಳೆಯರ ಪರ ನಿಲುವು, ತಂದ ಸುಧಾರಣೆಗಳು ಸಂವಿಧಾನದಲ್ಲಿ ಅಡಕವಾಗಲು ಗಾಂಧಿಜೀ ನಡೆಸಿದ ಹೋರಾಟಗಳೂ ಕಾರಣ. ವಿದ್ಯಾರ್ಥಿಗಳು ಗಾಂಧೀಜೀ ಯವರ ‘ನನ್ನ ಸತ್ಯಾನ್ವೇಷಣೆ’, ‘ಹಿಂದ್ ಸ್ವರಾಜ್’ ಕೃತಿಗಳ ಓದಬೇಕು’ ಎಂದರು.</p>.<p>ಕಾರ್ಯಕ್ರಮದಲ್ಲಿ ವಿಚಾರಸಂಕಿರಣದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.</p>.<p>ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ ಎಸ್.ನರೇಂದ್ರ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಬಿ.ಎಂ.ನಾಗೇಶ್ ರಾಜ್, ಪ್ರಾಂಶುಪಾಲ ಪ್ರೊ.ಬಿ.ಕೆ.ಕೇಂಪೇಗೌಡ, ಪ್ರೊ.ಶಿವಸ್ವಾಮಿ, ಎಂ.ಡಿ.ಉಮೇಶ್, ಎನ್.ಎಸ್.ಮಹದೇವ ಪ್ರಸಾದ್, ಪ್ರೊ.ಈಶಪ್ಪ, ಪ್ರೊ.ಕೆಂಪಮ್ಮ, ಜಿ.ಆರ್.ಮಂಜುನಾಥ್, ಶಿವಪ್ರಸಾದ ಪಟ್ಟಣಗೆರೆ, ಎಂ.ಸಿ.ನರೇಂದ್ರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-38-1429111612</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಂಜನಗೂಡು: ‘ಪರಸ್ಪರ ದ್ವೇಷ, ಅಸೂಯೆ, ಅಪನಂಬಿಕೆ, ಯುದ್ಧದಿಂದ ಹೊತ್ತಿ ಉರಿಯುತ್ತಿರುವ ಜಗತ್ತು ಶಾಂತಿಯಿಂದ ಬಾಳಬೇಕಾದರೆ ಗಾಂಧೀಜಿಯ ತತ್ವ, ಆದರ್ಶಗಳು ಅನಿವಾರ್ಯ’ ಎಂದು ಅರಸೀಕೆರೆ ಕಸ್ತೂರ್ಬಾ ಗಾಂಧಿ ಆಶ್ರಮದ ಕಾರ್ಯ ದರ್ಶಿ ಪ್ರೊ.ಜಿ.ಬಿ.ಶಿವರಾಜು ಹೇಳಿದರು.</p>.<p>ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಬಹುತ್ವ ಭಾರತ– ಗಾಂಧೀಜಿ ವಿಚಾರಧಾರೆ’ ವಿಚಾರ ಸಂಕಿರಣ ಸಮಾರೋಪದಲ್ಲಿ ಮಾತನಾಡಿದರು.</p>.<p>‘ಗಾಂಧಿಜೀಯ ಸತ್ಯ, ಅಹಿಂಸೆ ತತ್ವ, ಆದರ್ಶಗಳು ಉಳಿಯದಿದ್ದರೆ ಜಗತ್ತು ಉಳಿಯುವುದಾದರೂ ಹೇಗೆ ?. ಮನುಷ್ಯತ್ವ ಅಸ್ತಿತ್ವದಲ್ಲಿರುವವಗೆ ಗಾಂಧೀಜಿ ಪ್ರಸ್ತುತರಾಗಿರುತ್ತಾರೆ, ಇಂದಿನ ತಲೆಮಾರಿಗೆ ಗಾಂಧಿಯ ವಿಚಾರಧಾರೆ ತಲುಪಿಸಬೇಕು, ಇಲ್ಲದಿದ್ದರೆ ಯುವಜನತೆ ದಾರಿ ತಪ್ಪುತ್ತಾರೆ’ ಎಂದು ಹೇಳಿದರು.</p>.<p>ಪ್ರಗತಿಪರ ಚಿಂತಕ ಕೆ.ವೆಂಕಟರಾಜು ಮಾತನಾಡಿ, ‘ಅಂಬೇಡ್ಕರ್ ಅವರ ಕಾರ್ಮಿಕ ಹಾಗೂ ಮಹಿಳೆಯರ ಪರ ನಿಲುವು, ತಂದ ಸುಧಾರಣೆಗಳು ಸಂವಿಧಾನದಲ್ಲಿ ಅಡಕವಾಗಲು ಗಾಂಧಿಜೀ ನಡೆಸಿದ ಹೋರಾಟಗಳೂ ಕಾರಣ. ವಿದ್ಯಾರ್ಥಿಗಳು ಗಾಂಧೀಜೀ ಯವರ ‘ನನ್ನ ಸತ್ಯಾನ್ವೇಷಣೆ’, ‘ಹಿಂದ್ ಸ್ವರಾಜ್’ ಕೃತಿಗಳ ಓದಬೇಕು’ ಎಂದರು.</p>.<p>ಕಾರ್ಯಕ್ರಮದಲ್ಲಿ ವಿಚಾರಸಂಕಿರಣದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.</p>.<p>ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ ಎಸ್.ನರೇಂದ್ರ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಬಿ.ಎಂ.ನಾಗೇಶ್ ರಾಜ್, ಪ್ರಾಂಶುಪಾಲ ಪ್ರೊ.ಬಿ.ಕೆ.ಕೇಂಪೇಗೌಡ, ಪ್ರೊ.ಶಿವಸ್ವಾಮಿ, ಎಂ.ಡಿ.ಉಮೇಶ್, ಎನ್.ಎಸ್.ಮಹದೇವ ಪ್ರಸಾದ್, ಪ್ರೊ.ಈಶಪ್ಪ, ಪ್ರೊ.ಕೆಂಪಮ್ಮ, ಜಿ.ಆರ್.ಮಂಜುನಾಥ್, ಶಿವಪ್ರಸಾದ ಪಟ್ಟಣಗೆರೆ, ಎಂ.ಸಿ.ನರೇಂದ್ರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260326-38-1429111612</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>