<p>ನಿಮ್ಮೊಂದಿಗೆ ನೀವು ಯಾವಾಗಲಾದರೂ ಮಾತನಾಡಿಕೊಳ್ಳುತ್ತೀರಾ? ‘ಅಯ್ಯೋ ಸುಮ್ನಿರಿ, ಹೀಗೆ ನಾವ ಒಬ್ಬರೇ ಮಾತಾಡಿಕೊಂಡರೆ ಜನ ಹುಚ್ಚ ಅಂತಾರೆ. ಯಾರೂ ಇಲ್ಲದೇ ಒಬ್ಬೊಬ್ಬರೇ ಮಾತಾಡ್ಕೊಳ್ಳೋದು ಹುಚ್ಚುತನ ಅಲ್ವಾ?’ ಹಾಗಂತ ನೀವು ಹೇಳಬಹುದು ಅನ್ನೋದು ಗೊತ್ತು. ನಾನಿಲ್ಲಿ ಹೇಳುತ್ತಿರುವುದು ಅದನ್ನಲ್ಲ. ಎಲ್ಲರೊಳಗೂ ಎರಡು ಮನಸುಗಳಿರುತ್ತವೆ. ಅದು ಎಲ್ಲ ಸಂದರ್ಭದಲ್ಲೂ ಜಾಗೃತವಾಗಿರುವುದಿಲ್ಲ. ಕೆಲವೊಂದು ನರ್ಧಾರದ ಸಂದರ್ಭದಲ್ಲಿ, ಯಾವುದೋ ಪ್ರಮುಖ ಸಂಗತಿಗಳ ವಿಚಾರದಲ್ಲಿ, ನಮ್ಮಿಂದ ಆಗಿ ಹೋದ ಕೃತ್ಯಗಳ ಬಗೆಗೆ ನಮ್ಮಲ್ಲಿನ ಎರಡು ಮನಸುಗಳ ಪರಸ್ಪರ ತೊಯ್ದಾಟಕ್ಕೆ ಇಳಿದಿರುತ್ತವೆ. ಅದು ನಿಮ್ಮ ಅನುಭವಕ್ಕೂ ಬಂದಿರಲೇಬೇಕು.</p><p>ಹಾಗೆ ನಿಮ್ಮ ಇನ್ನೊಂದು ಮನಸಿನ ಜತೆ ನೀವು ಮಾತಾಡಿಕೊಂಡಿದ್ದೀರಾ ಅಥವಾ ಹೊರಗಿನ ಪ್ರಪಂಚದ ಗದ್ದಲದಲ್ಲಿ ಕರಗಿ ಹೋಗಿದೀರಾ? </p><p>ಹೌದು, ಬದುಕಿನಲ್ಲಿ ಬರೀ ಗದ್ದಲವೇ ತುಂಬಿ ಹೋದರೆ, ನೀವು ಮಾನಸಿಕವಾಗಿ ಒಂಟಿಯಾಗುತ್ತ, ದುರ್ಬಲರಾಗುತ್ತ ಸಾಗಿದ್ದೀರಿ ಎಂದರ್ಥ. ಕೆಲವೊಮ್ಮೆ ಹಾಗಾಗುತ್ತದೆ. ಏನು ಮಾಡಲೂ ಬೇಸರ. ಯಾವ ಕೆಲಸದಲ್ಲೂ ಆಸಕ್ತಿಯೇ ಬರುವುದಿಲ್ಲ. ಕಚೇರಿಯಂತೂ ಬೋರೆದ್ದು ಹೋಗುತ್ತದೆ. ಮನೆಗೆ ಬಂದರೂ ಅದೇ ಭಾವ. ಎಲ್ಲೂ ನೆಮ್ಮದಿಯೇ ಇಲ್ಲ. ಆಗ ಉಕ್ಕುತ್ತದೆ ನೋಡಿ, ಒಂದು ರೀತಿಯ ರೋಷ. ಅದಕ್ಕೆ ಬುದ್ಧಿಯನ್ನು ಕೊಟ್ಟರೆ ಸಂಸಾರದ ನೆಮ್ಮದಿಯನ್ನೇ ನಾಶ ಮಾಡುವ ತಾಕತ್ತು ಇರುತ್ತದೆ. </p><p>ಅದರ ಬದಲು ಹೀಗೆ ಮಾಡೋಣವೇ? ಸುಮ್ಮನೆ ಒಂದೆಡೆ ಕುಳಿತುಕೊಳ್ಳಿ. ಮನೆ ಬೇಡ. ಏಕೆಂದರೆ, ನಿಮ್ಮದೇ ಮನದೊಳಗೆ ಇಳಿಯಲು ಅವಕಾಶ ನೀಡದಂತೆ ಆಗುವ ಸನ್ನಿವೇಶವೇ ಅಲ್ಲಿ ಹೆಚ್ಚು. ಹೀಗಾಗಿ ಯಾವುದಾದರೂ ಶಾಂತ ಪರಿಸರದಲ್ಲಿ ಕುಳಿತುಕೊಂಡು ‘ಯಾಕೆ ಬದುಕು ನಿಂತ ನೀರಂತೆ ಭಾಸವಾಗ್ತಿದೆ?’ ಎಂದು ಪ್ರಶ್ನಿಸಿಕೊಳ್ಳಿ. ಅಂತರಾಳಕ್ಕೆ ಇಳಿಯಿರಿ. ಅಲ್ಲೂ ‘ಅದು ಮಾಡಬೇಕು’, ‘ಇದು ಮಾಡಬೇಕು’ ಎಂಬಂತಹ ಕೆಲಸಗಳನ್ನು ಅಥವಾ ನಿಮ್ಮ ಮಹತ್ವಾಕಾಂಕ್ಷೆಗಳನ್ನು ನೆನಪಿಸಿಕೊಳ್ಳಬೇಡಿ. ಸುಮ್ಮನೆ ತಾಳ್ಮೆಯಿಂದ ಮನವನ್ನು ನಿಯಂತ್ರಿಸಿ, ಪ್ರಶ್ನಿಸಿಕೊಳ್ಳಿ. </p><p>ಉತ್ತರ ದೊರೆಯಿತಾ? ಖುಷಿ ಪಡಿ. ಬೇಸರಕ್ಕೆ ಏನಾದರೂ ಕಾರಣ ಅಂತ ಸಿಕ್ಕರೆ ನೆಮ್ಮದಿಯೇ. ಏಕೆಂದರೆ, ಅದನ್ನು ಬಗೆಹರಿಸಲು ಯತ್ನಿಸಬಹುದು. ಆದರೆ, ಕಾರಣವೇ ಇಲ್ಲದೇ ಅಂತಹ ಭಾವನೆ ಬರ್ತಾ ಇದ್ದರೆ, ಅದಕ್ಕೆ ಕಾರಣ ನೀವೇ. </p><p>ಹೌದು. ಆಗಾಗ ಮನಸ್ಸಿಗೆ ಆಗುವ ಬೇಸರವನ್ನು ಪರಿಹರಿಸಿ ರಿಫ್ರೆಶ್ ಮಾಡದೇ ಬಿಟ್ಟು ಬಿಟ್ಟು ಅದು ಇಷ್ಟು ಪಾತಾಳಕ್ಕೆ ಕುಸಿಯಲು ಮೂಲ ಕಾರಣ ನೀವೇ ಆಗಿದ್ದೀರಿ. ಬರಿಯ ಪ್ರಾಪಂಚಿಕ ಗದ್ದಲದಲ್ಲಿ ಇದ್ದು ಇದ್ದು ನಮ್ಮನ್ನು ನಾವು ಮಾತನಾಡಿಸಿಕೊಳ್ಳದೇ ಇದ್ದರೆ ಕೆಲಕಾಲದ ಬಳಿಕ ಮನಸ್ಸು ಭಾರವಾಗಿ ಬಿಡುತ್ತದೆ. ಆಗಾಗ ಅದನ್ನು ಮಾತನಾಡಿಸಿ, ‘ಕುಶಲವೇ? ಕ್ಷೇಮವೇ’ ಅಂತ ಕೇಳ್ತಾ ಇರೋದೇ ಅದಕ್ಕೆ ಪರಿಹಾರ. ಮತ್ತೇನಿಲ್ಲ. ಹಾಗೆ ಮಾಡಿ ನೋಡಿ, ಎಷ್ಟು ರಿಲ್ಯಾಕ್ಸ್ ಆಗ್ತೀರಿ ಅಂತ. ಅಷ್ಟಕ್ಕೂ ಅಭ್ಯಾಸ ಮಾಡಿಕೊಂಡರೆ ಸಂತೆಯಲ್ಲೂ ಇಂತಹ ಧ್ಯಾನಸ್ಥ ಮನಸ್ಥಿತಿಯನ್ನು ಅನುಭವಿಸಬಹುದು. ಅದಕ್ಕೆ ಸ್ವಲ್ಪ ಸಿದ್ಧತೆ ಬೇಕು ಅಷ್ಟೇ. ಹಾಗೆ ಮಾಡಿಕೊಂಡರೆ, ಮನಸ್ಸು ಯಾವಾಗಲೂ ಹಗುರವಾಗಿ ಹಾರಾಡುತ್ತಿರುತ್ತದೆ. ಆಗ ಯಾವ ಕೆಲಸವನ್ನೂ ಖುಷಿಯಿಂದ ಮಾಡಲು ಸಾಧ್ಯ.</p>.ಪಿವಿ ವೈಬ್ಸ್: ಹೌದು, ಮೀಸೆ ಮಣ್ಣಾಗಿದೆ; ಅದನ್ನು ಒಪ್ಪಿಕೊಳ್ಳಬೇಕು.ಪಿವಿ ವೈಬ್ಸ್: ಅಷ್ಟೆಲ್ಲ ಮಾಡಿ ನೀವು ಗಳಿಸಿದ್ದು ನಿಜಕ್ಕೂ ಗೆಲುವಾ? ಯೋಚಿಸಿ!.ಪಿವಿ ವೈಬ್ಸ್: ಸೋಲದು ಸೋಲಲ್ಲವೇ ಅಲ್ಲ, ಸೋಲಿಗ್ಯಾಕೆ ಹೆದರೋದು?.ಪಿವಿ ವೈಬ್ಸ್: ಒಂದೇ ಒಂದು ಕಾಗದದ ಚೂರು ಸಾಕು, ಬದುಕು ಬದಲಾಗಲು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಿಮ್ಮೊಂದಿಗೆ ನೀವು ಯಾವಾಗಲಾದರೂ ಮಾತನಾಡಿಕೊಳ್ಳುತ್ತೀರಾ? ‘ಅಯ್ಯೋ ಸುಮ್ನಿರಿ, ಹೀಗೆ ನಾವ ಒಬ್ಬರೇ ಮಾತಾಡಿಕೊಂಡರೆ ಜನ ಹುಚ್ಚ ಅಂತಾರೆ. ಯಾರೂ ಇಲ್ಲದೇ ಒಬ್ಬೊಬ್ಬರೇ ಮಾತಾಡ್ಕೊಳ್ಳೋದು ಹುಚ್ಚುತನ ಅಲ್ವಾ?’ ಹಾಗಂತ ನೀವು ಹೇಳಬಹುದು ಅನ್ನೋದು ಗೊತ್ತು. ನಾನಿಲ್ಲಿ ಹೇಳುತ್ತಿರುವುದು ಅದನ್ನಲ್ಲ. ಎಲ್ಲರೊಳಗೂ ಎರಡು ಮನಸುಗಳಿರುತ್ತವೆ. ಅದು ಎಲ್ಲ ಸಂದರ್ಭದಲ್ಲೂ ಜಾಗೃತವಾಗಿರುವುದಿಲ್ಲ. ಕೆಲವೊಂದು ನರ್ಧಾರದ ಸಂದರ್ಭದಲ್ಲಿ, ಯಾವುದೋ ಪ್ರಮುಖ ಸಂಗತಿಗಳ ವಿಚಾರದಲ್ಲಿ, ನಮ್ಮಿಂದ ಆಗಿ ಹೋದ ಕೃತ್ಯಗಳ ಬಗೆಗೆ ನಮ್ಮಲ್ಲಿನ ಎರಡು ಮನಸುಗಳ ಪರಸ್ಪರ ತೊಯ್ದಾಟಕ್ಕೆ ಇಳಿದಿರುತ್ತವೆ. ಅದು ನಿಮ್ಮ ಅನುಭವಕ್ಕೂ ಬಂದಿರಲೇಬೇಕು.</p><p>ಹಾಗೆ ನಿಮ್ಮ ಇನ್ನೊಂದು ಮನಸಿನ ಜತೆ ನೀವು ಮಾತಾಡಿಕೊಂಡಿದ್ದೀರಾ ಅಥವಾ ಹೊರಗಿನ ಪ್ರಪಂಚದ ಗದ್ದಲದಲ್ಲಿ ಕರಗಿ ಹೋಗಿದೀರಾ? </p><p>ಹೌದು, ಬದುಕಿನಲ್ಲಿ ಬರೀ ಗದ್ದಲವೇ ತುಂಬಿ ಹೋದರೆ, ನೀವು ಮಾನಸಿಕವಾಗಿ ಒಂಟಿಯಾಗುತ್ತ, ದುರ್ಬಲರಾಗುತ್ತ ಸಾಗಿದ್ದೀರಿ ಎಂದರ್ಥ. ಕೆಲವೊಮ್ಮೆ ಹಾಗಾಗುತ್ತದೆ. ಏನು ಮಾಡಲೂ ಬೇಸರ. ಯಾವ ಕೆಲಸದಲ್ಲೂ ಆಸಕ್ತಿಯೇ ಬರುವುದಿಲ್ಲ. ಕಚೇರಿಯಂತೂ ಬೋರೆದ್ದು ಹೋಗುತ್ತದೆ. ಮನೆಗೆ ಬಂದರೂ ಅದೇ ಭಾವ. ಎಲ್ಲೂ ನೆಮ್ಮದಿಯೇ ಇಲ್ಲ. ಆಗ ಉಕ್ಕುತ್ತದೆ ನೋಡಿ, ಒಂದು ರೀತಿಯ ರೋಷ. ಅದಕ್ಕೆ ಬುದ್ಧಿಯನ್ನು ಕೊಟ್ಟರೆ ಸಂಸಾರದ ನೆಮ್ಮದಿಯನ್ನೇ ನಾಶ ಮಾಡುವ ತಾಕತ್ತು ಇರುತ್ತದೆ. </p><p>ಅದರ ಬದಲು ಹೀಗೆ ಮಾಡೋಣವೇ? ಸುಮ್ಮನೆ ಒಂದೆಡೆ ಕುಳಿತುಕೊಳ್ಳಿ. ಮನೆ ಬೇಡ. ಏಕೆಂದರೆ, ನಿಮ್ಮದೇ ಮನದೊಳಗೆ ಇಳಿಯಲು ಅವಕಾಶ ನೀಡದಂತೆ ಆಗುವ ಸನ್ನಿವೇಶವೇ ಅಲ್ಲಿ ಹೆಚ್ಚು. ಹೀಗಾಗಿ ಯಾವುದಾದರೂ ಶಾಂತ ಪರಿಸರದಲ್ಲಿ ಕುಳಿತುಕೊಂಡು ‘ಯಾಕೆ ಬದುಕು ನಿಂತ ನೀರಂತೆ ಭಾಸವಾಗ್ತಿದೆ?’ ಎಂದು ಪ್ರಶ್ನಿಸಿಕೊಳ್ಳಿ. ಅಂತರಾಳಕ್ಕೆ ಇಳಿಯಿರಿ. ಅಲ್ಲೂ ‘ಅದು ಮಾಡಬೇಕು’, ‘ಇದು ಮಾಡಬೇಕು’ ಎಂಬಂತಹ ಕೆಲಸಗಳನ್ನು ಅಥವಾ ನಿಮ್ಮ ಮಹತ್ವಾಕಾಂಕ್ಷೆಗಳನ್ನು ನೆನಪಿಸಿಕೊಳ್ಳಬೇಡಿ. ಸುಮ್ಮನೆ ತಾಳ್ಮೆಯಿಂದ ಮನವನ್ನು ನಿಯಂತ್ರಿಸಿ, ಪ್ರಶ್ನಿಸಿಕೊಳ್ಳಿ. </p><p>ಉತ್ತರ ದೊರೆಯಿತಾ? ಖುಷಿ ಪಡಿ. ಬೇಸರಕ್ಕೆ ಏನಾದರೂ ಕಾರಣ ಅಂತ ಸಿಕ್ಕರೆ ನೆಮ್ಮದಿಯೇ. ಏಕೆಂದರೆ, ಅದನ್ನು ಬಗೆಹರಿಸಲು ಯತ್ನಿಸಬಹುದು. ಆದರೆ, ಕಾರಣವೇ ಇಲ್ಲದೇ ಅಂತಹ ಭಾವನೆ ಬರ್ತಾ ಇದ್ದರೆ, ಅದಕ್ಕೆ ಕಾರಣ ನೀವೇ. </p><p>ಹೌದು. ಆಗಾಗ ಮನಸ್ಸಿಗೆ ಆಗುವ ಬೇಸರವನ್ನು ಪರಿಹರಿಸಿ ರಿಫ್ರೆಶ್ ಮಾಡದೇ ಬಿಟ್ಟು ಬಿಟ್ಟು ಅದು ಇಷ್ಟು ಪಾತಾಳಕ್ಕೆ ಕುಸಿಯಲು ಮೂಲ ಕಾರಣ ನೀವೇ ಆಗಿದ್ದೀರಿ. ಬರಿಯ ಪ್ರಾಪಂಚಿಕ ಗದ್ದಲದಲ್ಲಿ ಇದ್ದು ಇದ್ದು ನಮ್ಮನ್ನು ನಾವು ಮಾತನಾಡಿಸಿಕೊಳ್ಳದೇ ಇದ್ದರೆ ಕೆಲಕಾಲದ ಬಳಿಕ ಮನಸ್ಸು ಭಾರವಾಗಿ ಬಿಡುತ್ತದೆ. ಆಗಾಗ ಅದನ್ನು ಮಾತನಾಡಿಸಿ, ‘ಕುಶಲವೇ? ಕ್ಷೇಮವೇ’ ಅಂತ ಕೇಳ್ತಾ ಇರೋದೇ ಅದಕ್ಕೆ ಪರಿಹಾರ. ಮತ್ತೇನಿಲ್ಲ. ಹಾಗೆ ಮಾಡಿ ನೋಡಿ, ಎಷ್ಟು ರಿಲ್ಯಾಕ್ಸ್ ಆಗ್ತೀರಿ ಅಂತ. ಅಷ್ಟಕ್ಕೂ ಅಭ್ಯಾಸ ಮಾಡಿಕೊಂಡರೆ ಸಂತೆಯಲ್ಲೂ ಇಂತಹ ಧ್ಯಾನಸ್ಥ ಮನಸ್ಥಿತಿಯನ್ನು ಅನುಭವಿಸಬಹುದು. ಅದಕ್ಕೆ ಸ್ವಲ್ಪ ಸಿದ್ಧತೆ ಬೇಕು ಅಷ್ಟೇ. ಹಾಗೆ ಮಾಡಿಕೊಂಡರೆ, ಮನಸ್ಸು ಯಾವಾಗಲೂ ಹಗುರವಾಗಿ ಹಾರಾಡುತ್ತಿರುತ್ತದೆ. ಆಗ ಯಾವ ಕೆಲಸವನ್ನೂ ಖುಷಿಯಿಂದ ಮಾಡಲು ಸಾಧ್ಯ.</p>.ಪಿವಿ ವೈಬ್ಸ್: ಹೌದು, ಮೀಸೆ ಮಣ್ಣಾಗಿದೆ; ಅದನ್ನು ಒಪ್ಪಿಕೊಳ್ಳಬೇಕು.ಪಿವಿ ವೈಬ್ಸ್: ಅಷ್ಟೆಲ್ಲ ಮಾಡಿ ನೀವು ಗಳಿಸಿದ್ದು ನಿಜಕ್ಕೂ ಗೆಲುವಾ? ಯೋಚಿಸಿ!.ಪಿವಿ ವೈಬ್ಸ್: ಸೋಲದು ಸೋಲಲ್ಲವೇ ಅಲ್ಲ, ಸೋಲಿಗ್ಯಾಕೆ ಹೆದರೋದು?.ಪಿವಿ ವೈಬ್ಸ್: ಒಂದೇ ಒಂದು ಕಾಗದದ ಚೂರು ಸಾಕು, ಬದುಕು ಬದಲಾಗಲು!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>