
ಬೇರೆ ಯಾವುದೇ ಸಂಬಂಧಗಳಿಲ್ಲ ಎಂದು ಅವರು ಸುಳ್ಳು ಹೇಳಿದರೆ!! ಎನ್ನುವ ಮಾತು ಬರುವುದು ಸಹಜ, ಆದರೆ ವಿವಾಹದ ಮುದ್ರೆ ನೀಡುವ ಅವಕಾಶಗಳನ್ನು ತಪ್ಪು ದಾರಿಯಲ್ಲಿ ಬಳಸಿಕೊಳ್ಳಲು ಬಾರದ ತಡೆಗಳಿಗೆ ಇದು ಸಹಕಾರಿಯಾಗಬಲ್ಲದು. ಅಲ್ಲದೇ, ಈಗಾಗಲೇ ವಿವಾಹವಾಗಿ ಅಥವಾ ಬೇರೊಂದು ಸಂಬಂಧದಲ್ಲಿದ್ದು, ಅದನ್ನು ಮರೆಮಾಚಿ ಮತ್ತೊಂದು ಸಹಜೀವನವನ್ನು ‘ಶಾಶ್ವತ ಸಂಬಂಧ’ ಎಂದು ಘೋಷಿಸಿಕೊಂಡು ‘ವಿವಾಹಿತ’ ಮುದ್ರೆ ಪಡೆದು, ಮೊದಲ ಸಂಗಾತಿಗೆ ಮಾಡುವ ದ್ರೋಹಗಳನ್ನೂ ಗುರುತಿಸಬಹುದು.–ಧನಂಜಯ್ ಎನ್., ಪ್ರಕಾಶಕ
ಸಹಜೀವನದ ವಿಚಾರದಲ್ಲಿ ಕೇಂದ್ರ ಸರ್ಕಾರದ ಆಲೋಚನಾ ಕ್ರಮ ದೇಶದ ಸಂಪ್ರದಾಯವಾದೀ ಮನಸ್ಸುಗಳನ್ನು ಸಮಾಧಾನಗೊಳಿಸುವ ಒಂದು ತಂತ್ರವಾಗಿಯೂ ನನಗೆ ಕಾಣುತ್ತಿದೆ. ವಿವಿಧ ನಂಬಿಕೆಗಳಿರುವ ಜನರು ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ಆರೋಗ್ಯಕರ ಸಮಾಜವನ್ನು ರೂಪಿಸಬಹುದು. ನಮ್ಮ ಸಂವಿಧಾನದ ಉದ್ದೇಶವೂ ಇದೇ ಅಲ್ಲವೇ?–ನವ್ಯಾ ಕಡಮೆ, ಸಿನಿಮಾಟೋಗ್ರಾಫರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.