ಅದರಲ್ಲಿ ಈ ರೀತಿ ಬರೆದಿತ್ತು. ‘ಆತ್ಮೀಯರೆ, ಮೌಖಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ನೀವೇ ಪ್ರಥಮ ರ್ಯಾಂಕ್ ಬಂದಿದ್ದೀರಿ. ಆದರೆ ನಿಮ್ಮಲ್ಲಿ ಪ್ರಾಮಾಣಿಕ ಗುಣವಿಲ್ಲ. ನಿಮ್ಮ ಪರೀಕ್ಷೆ ಸಲುವಾಗಿ ಆ ಪಾಕೇಟದಲ್ಲಿ ಹತ್ತು ಸಾವಿರ ರೂಪಾಯಿ ಟೆಬಲ್ ಡ್ರಾದಲ್ಲಿ ನಾವೇ ಇಟ್ಟಿದ್ದೆವು. ಅದನ್ನು ಹಿಂದಿರುಗಿಸುವಷ್ಟು ಸೌಜನ್ಯ ನಿಮ್ಮಲ್ಲಿ ಇಲ್ಲ. ಪ್ರಾಮಾಣಿಕತೆ ಇಲ್ಲ. ಹೀಗಾಗಿ ಮ್ಯಾನೇಜರ್ ಹುದ್ದೆ ಕಳೆದುಕೊಂಡಿದ್ದೀರಿ‘ ಎಂದು ಬರೆದಿತ್ತು.