ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ ಭವಿಷ್ಯ: 28-02-2021 ರಿಂದ 6-03-2021 ರವರೆಗೆ

Last Updated 28 ಫೆಬ್ರುವರಿ 2021, 0:42 IST
ಅಕ್ಷರ ಗಾತ್ರ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ:8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಉದ್ದಿಮೆಗಳಲ್ಲಿ ತಾಂತ್ರಿಕ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯರಿಗೆ ಹೆಚ್ಚಿನ ಜವಾಬ್ದಾರಿಗಳು ಒದಗಿಬರುತ್ತದೆ. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಅಸ್ವಾಭಾವಿಕ ಆದಾಯ ಬರುವ ಸಾಧ್ಯತೆ ಇದೆ. ಚಿತ್ರಕಾರರಿಗೆ ಅವರ ಪ್ರತಿಭಾ ಪ್ರದರ್ಶನ ಮಾಡಲು ಉತ್ತಮ ಅವಕಾಶ ದೊರೆಯುತ್ತದೆ. ಕೆಲವರಿಗೆ ಚಿತ್ರಮಾರಾಟಗಳಿಂದ ಉತ್ತಮ ಲಾಭವಿದೆ. ರಾಜಕೀಯ ವಿಚಾರಗಳನ್ನು ವಿಭಿನ್ನ ದೃಷ್ಟಿಯಿಂದ ನೋಡಿ ವಿಮರ್ಶೆ ಮಾಡುವಿರಿ. ಆದಾಯದಷ್ಟೇ ಖರ್ಚು ಇರುತ್ತದೆ, ಆರ್ಥಿಕ ಸಮತೋಲನ ಬಹಳ ಮುಖ್ಯ. ಕುಟುಂಬದವರೊಡನೆ ಆರ್ಥಿಕ ವ್ಯವಹಾರ ಬೇಡ. ಆರೋಗ್ಯದ ಕಡೆ ಗಮನ ಹರಿಸಿರಿ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)
ಆದಾಯದಲ್ಲಿ ತುಸು ಏರಿಕೆಯನ್ನು ಕಾಣಬಹುದು. ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆ ಆಗುತ್ತದೆ .ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ಶಾರೀರಿಕ ಆಯಾಸ ಕಂಡುಬಂದರೂ ದೈನಂದಿಕ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಭೂಮಿಯ ವ್ಯವಹಾರಗಳಲ್ಲಿ ನಿಮ್ಮ ಹಟಮಾರಿತನ ಗೆದ್ದು ಹೆಚ್ಚಿನ ಹಣ ದೊರೆಯುತ್ತದೆ. ನೀರಿನ ವ್ಯಾಪಾರ ಮಾಡುವವರಿಗೆ ನಿಧಾನ ಅಭಿವೃದ್ಧಿ ಇರುತ್ತದೆ. ತಪ್ಪಾಗಿದ್ದ ಆಸ್ತಿಯ ದಾಖಲೆಗಳನ್ನು ಈಗ ಸರಿಪಡಿಸಿಕೊಳ್ಳಬಹುದು. ವೃತ್ತಿಯಲ್ಲಿ ಹೊಸ ಜಾಗಕ್ಕೆ ವರ್ಗಾವಣೆಗೊಂಡು ಸಂತೋಷ ಪಡುವಿರಿ. ಹೊಸ ಆದಾಯದ ಮೂಲದತ್ತ ಗಮನ ಹರಿಸುವಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ತೈಲ ಉದ್ಯಮದಲ್ಲಿ ತೊಡಗಿಸಿಕೊಂಡವರಿಗೆ ವ್ಯವಹಾರ ಸಿದ್ಧಿಸಿ ಆದಾಯವಿರುತ್ತದೆ. ಮಹಿಳೆಯರಿಗೆ ಸಾಮಾಜಿಕ ಗೌರವಗಳು ದೊರೆಯುತ್ತವೆ. ಕೆಲವರಿಗೆ ತವರಿನಿಂದ ಆಸ್ತಿ ದೊರೆಯಬಹುದು. ಅಪೇಕ್ಷಿತ ಸರ್ಕಾರಿ ಸಹಾಯಧನಗಳು ಇವರಿಗೆ ಸುಲಭವಾಗಿ ದೊರೆಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಅತಿಯಾಗಿ ಹಣ ತೊಡಗಿಸುವುದು ಬೇಡ. ಹೆಚ್ಚಿನ ಬಡ್ಡಿ ಆಸೆಗಾಗಿ ಹಣ ಕೊಡುವುದು ಬೇಡ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ತೊಂದರೆ ಕಾಣಿಸಬಹುದು. ಒಡಹುಟ್ಟಿದವರೊಡನೆ ಸಂಬಂಧಗಳು ಸುಧಾರಿಸಿ ಅನ್ಯೋನ್ಯತೆ ಮೂಡುತ್ತದೆ.ಉದ್ಯಮಿಗಳಿಗೆ ಕಾರ್ಮಿಕರಿಂದ ಕಿರಿಕಿರಿ ಆಗಬಹುದು. ವಾರಾಂತ್ಯಕ್ಕೆ ಅತಿಥಿಗಳು ಆಗಮಿಸಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಮೇಲ್ವರ್ಗದ ಗುತ್ತಿಗೆದಾರರಿಗೆ ಟೆಂಡರ್ ಮೂಲಕ ಹೊಸ ಗುತ್ತಿಗೆಗಳನ್ನು ಪಡೆಯುವಂತಹ ಅವಕಾಶವಿದೆ. ಕೃಷಿಕರಿಗೆ ಉತ್ತಮ ಬೆಳೆಗೆ ಜೊತೆಗೆ ಉತ್ತಮ ಹಣವನ್ನು ಪಡೆಯುವ ಅವಕಾಶವಿದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಮಕ್ಕಳು ನಿಮ್ಮ ಮಾತನ್ನು ಕೇಳದೆ ಇರಬಹುದು. ಸಾಲಸೋಲಗಳಿದ್ದಲ್ಲಿ ಅವುಗಳನ್ನು ತೀರಿಸಿ ನೆಮ್ಮದಿಯನ್ನು ಪಡೆಯಬಹುದು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ತಂದೆಯಿಂದ ಧನಸಹಾಯವನ್ನು ನಿರೀಕ್ಷಿಸಬಹುದು. ವೃತ್ತಿಯಲ್ಲಿ ಹೊಸ ರೀತಿಯ ಕಿರಿಕಿರಿಗಳನ್ನು ಕಾಣಬಹುದು.ಮೂಳೆ ನೋವುಗಳುಗಳಿದ್ದಲ್ಲಿ ಚಿಕಿತ್ಸೆ ಪಡೆಯಿರಿ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಸ್ತ್ರೀಯರಿಗೆ ಆರ್ಥಿಕ ಅಭಿವೃದ್ಧಿ ಇರುತ್ತದೆ. ಆಲಸ್ಯದ ನಡವಳಿಕೆ ಖಂಡಿತಬೇಡ. ಗೃಹನಿರ್ಮಾಣಕ್ಕೆ ಕೈ ಹಾಕುವ ಮೊದಲು ಆರ್ಥಿಕ ಸ್ಥಿತಿಯ ಬಗ್ಗೆ ಸರಿಯಾಗಿ ತಿಳಿಯಿರಿ. ಸರ್ಕಾರಿ ಸವಲತ್ತುಗಳನ್ನು ಅರ್ಜಿ ಸಲ್ಲಿಸಿ ಪಡೆಯಬಹುದು. ನೃತ್ಯ ಪಟುಗಳಿಗೆ ಉತ್ತಮ ಗುರುಗಳು ದೊರೆತು ಕಲಿಕೆಯಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಆರ್ಥಿಕ ಸ್ಥಿತಿಯು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವ್ಯವಹಾರಗಳಲ್ಲಿನ ಲಾಭಗಳು ಸ್ವಲ್ಪ ಕಡಿಮೆಯಾಗಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು ಹಿರಿಯ ಅಧಿಕಾರಿಗಳ ಅರ್ಜಿಯನ್ನು ಅರಿತು ನಡೆಯಬೇಕಾದೀತು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿಕೊಂಡವರಿಗೆ ಅನಿರೀಕ್ಷಿತವಾಗಿ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ವೈದ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸುವ ರೀತಿಯಲ್ಲಿ ವೃತ್ತಿಯಲ್ಲಿ ಬೆಳವಣಿಗೆ ನಡೆಯುತ್ತದೆ. ಕಲೆ ಸಂಗೀತ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ಹೋಟೆಲ್ ಉದ್ಯಮದವರ ಬೆಳವಣಿಗೆ ನಿಧಾನವಾಗಿ ಏರ ತೊಡಗುತ್ತದೆ. ಸರ್ಕಾರಿ ಕೆಲಸದಲ್ಲಿರುವವರು ಬಿಡುವಿಲ್ಲದ ಕೆಲಸದಿಂದ ಸಂಗಾತಿಯ ಕೋಪಕ್ಕೆ ತುತ್ತಾಗುವರು. ದುಂದುವೆಚ್ಚಕ್ಕೆ ಕಡಿವಾಣ ಹಾಕುವುದು ಅತಿಅಗತ್ಯ. ವಿನಾಕಾರಣ ತಾಯಿಯನ್ನು ಕೆರಳಿಸಿ ಅವರ ಕೋಪಕ್ಕೆ ತುತ್ತಾಗುವ ಸಂದರ್ಭವಿದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಖರ್ಚು ಜಾಸ್ತಿಯಾಗುವ ಸಂದರ್ಭವಿದೆ, ಆರ್ಥಿಕ ಸಮತೋಲನ ಅತಿ ಅಗತ್ಯ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕಫಲಿತಾಂಶ ಇರುತ್ತದೆ. ಸಮಾಜ ಸೇವೆ ಮಾಡುವವರ ವಿರುದ್ಧ ಆರ್ಥಿಕ ದುರುಪಯೋಗದ ಅಪವಾದ ಕೇಳಿಬರುತ್ತದೆ. ವಿದೇಶಕ್ಕೆ ದಿನಸಿ ವಸ್ತುಗಳನ್ನು ಅಲ್ಪ ಪ್ರಮಾಣದಲ್ಲಿ ರಫ್ತು ಮಾಡುತ್ತಿದ್ದವರಿಗೆ ಪೂರ್ಣ ಪ್ರಮಾಣದ ರಫ್ತಿಗೆ ಅವಕಾಶ ದೊರೆಯುತ್ತದೆ. ವ್ಯವಹಾರದಲ್ಲಿ ಎಲ್ಲರನ್ನೂ ಹಿಡಿತಕ್ಕೆ ತೆಗೆದು ಕೊಳ್ಳಲು ಹೋಗಿ ನಿಮ್ಮ ಸ್ಥಾನಕ್ಕೆ ಕುಂದು ತಂದು ಕೊಳ್ಳುವಿರಿ. ಕಟ್ಟಡ ನಿರ್ಮಾಣ ಮಾಡುವವರಿಗೆ ಸ್ವಲ್ಪ ರೀತಿಯ ಆರ್ಥಿಕ ಹಿನ್ನಡೆಯನ್ನು ಕಾಣಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಹದಗೆಟ್ಟಿದ್ದ ಹಿರಿಯರ ಆರೋಗ್ಯಗಳು ಸುಸ್ಥಿತಿಗೆ ಬರುತ್ತವೆ. ವ್ಯಾಪಾರಕ್ಕೆ ಬೇಕಾದ ಧನಸಂಗ್ರಹ ಒದಗಿ ಬರುತ್ತದೆ. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ವಿದ್ಯಾ ಪರಿಕರಗಳು ದೊರೆಯುತ್ತವೆ. ಉನ್ನತ ಅಧಿಕಾರಿಗಳ ಸಹಾಯದಿಂದ ಕೆಳದರ್ಜೆ ನೌಕರರಿಗೆ ಅನುಕೂಲವಾಗುತ್ತದೆ. ಮಕ್ಕಳಿಂದ ಆರ್ಥಿಕ ಸಹಕಾರ ಒದಗುತ್ತದೆ. ಬಹಳ ದಿನಗಳಿಂದ ಕಾಯುತ್ತಿದ್ದ ಸ್ಥಿರಾಸ್ತಿಯ ದಾಖಲೆಗಳು ಸಿಗುತ್ತವೆ. ಸಣ್ಣಮಾತಿಗಾಗಿ ಸಂಗಾತಿಯು ಮುನಿಸಿಕೊಳ್ಳಬಹುದು. ಶಸ್ತ್ರ ಚಿಕಿತ್ಸಕ ವೈದ್ಯರಿಗೆ ಬಹಳ ಬೇಡಿಕೆ ಬಂದು ಉತ್ತಮ ಗೌರವ ಕೂಡ ದೊರೆಯುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಷಾಢ ಉತ್ತರಾಷಾಢ 1)
ನಿಮ್ಮ ಯೋಜನೆಗಳಿಗೆ ಇದ್ದ ಅಡ್ಡಿಗಳು ಈಗ ನಿವಾರಣೆಯಾಗುತ್ತದೆ. ಹೊಸ ಅವಕಾಶಗಳು ನಿಮ್ಮನ್ನು ಅರಸಿಬರುತ್ತವೆ. ಹಣದ ಒಳಹರಿವಿನಲ್ಲಿ ಏರಿಕೆಯನ್ನು ಕಾಣಬಹುದು. ವಾಹನಗಳ ಬಿಡಿಭಾಗಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಏಳಿಗೆ ಇದೆ. ವಿದ್ಯುತ್ ಉಪಕರಣಗಳನ್ನು ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸವಿರುತ್ತದೆ. ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯಕ್ಕೆ ಹಣ ಒಗ್ಗೂಡಿಸಲು ತಯಾರಿ ನಡೆಸುವಿರಿ. ಜವಳಿ ಉತ್ಪನ್ನಗಳನ್ನು ರಫ್ತು ಮಾಡುವವರಿಗೆ ಹೊಸ ಹೊಸ ರಫ್ತಿನ ಮೂಲಗಳು ಸಿಗುತ್ತವೆ. ಬಟ್ಟೆ ಹೊಲೆಯುವ ಕೆಲಸವನ್ನು ಮಾಡುವವರಿಗೆ ಕೆಲಸ ಹೆಚ್ಚು ಸಿಗುತ್ತದೆ ತನ್ಮೂಲಕ ಆದಾಯವೂ ಹೆಚ್ಚುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸಾಮಾಜಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಾಗುತ್ತದೆ. ಆರ್ಥಿಕವಾಗಿ ಚೇತರಿಕೆಯನ್ನು ಕಾಣಬಹುದು. ನಿಮ್ಮ ಒಳ್ಳೆಯತನವನ್ನು ದುರುಪಯೋಗಮಾಡಿಕೊಳ್ಳದಂತೆ ಎಚ್ಚರ ವಹಿಸಿರಿ. ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿರುವವರಿಗೆ ಗೌರವದ ಜೊತೆಗೆ ಸೂಕ್ತವಾದ ಸಂಭಾವನೆಯೂ ಸಹ ಇರುತ್ತದೆ. ರಾಜಕೀಯ ಜೀವನದಲ್ಲಿ ಸ್ಥಾನಮಾನಗಳನ್ನು ಭದ್ರಪಡಿಸಿಕೊಳ್ಳಲು ಮುಖಂಡರ ಜೊತೆ ಮಾತನಾಡುವಿರಿ. ದುಡುಕು ಸ್ವಭಾವ ಎಂದಿಗೂ ಬೇಡ ಇದರಿಂದ ನಿಮಗೆ ಹಾನಿಯಾಗಬಹುದು. ಹಣದ ಒಳಹರಿವು ಏರಿಕೆ ಮಾರ್ಗದಲ್ಲಿ ಇರುತ್ತದೆ. ಮಕ್ಕಳು ಹಣಕ್ಕಾಗಿ ನಿಮ್ಮನ್ನು ಅವಲಂಬಿಸಬಹುದು. ಹೊಸ ವಾಹನ ಖರೀದಿ ಈಗ ಬೇಡ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಎಲ್ಲ ರೀತಿಯಿಂದ ಧನ ಸಂಗ್ರಹಣೆಗೆ ಮುಂದಾಗುವಿರಿ. ಪೀಠೋಪಕರಣಗಳು, ಗೃಹಾಲಂಕಾರ ವಸ್ತುಗಳನ್ನು ಖರೀದಿಸಲು ಮುಂದಾಗುವಿರಿ. ಹಣದ ಒಳಹರಿವು ತಕ್ಕಮಟ್ಟಿಗೆ ಇರುತ್ತದೆ. ಆಯುಧ ವ್ಯಾಪಾರ ಮಾಡುವ ವ್ಯಕ್ತಿಗಳು ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ಹಿರಿಯರ ಶಿಸ್ತುಬದ್ಧ ಜೀವನ ಕಿರಿಯರಿಗೆ ದಾರಿದೀಪವೆನಿಸುವುದು. ಗುರಿತಲುಪುವ ವಿಚಾರದಲ್ಲಿ ಸ್ನೇಹಿತರ ಸಹಕಾರ ದೊರೆಯುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ವಿಶೇಷ ಗೌರವ ಸಿಗುವ ಸಂದರ್ಭವಿದೆ. ಸಹೋದ್ಯೋಗಿಗಳೊಡನೆ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹಣದ ಹರಿವು ಉತ್ತಮವಾಗಿರುತ್ತದೆ. ಸರ್ಕಾರಿ ಸಾಲಗಳು ಸಿಗುವುದು ಸ್ವಲ್ಪ ನಿಧಾನವಾಗುತ್ತದೆ. ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಹಗುರಾಗುತ್ತದೆ. ಲೋಹದ ವ್ಯಾಪಾರಿಗಳಿಗೆ ಅಭಿವೃದ್ಧಿ ಇರುತ್ತದೆ. ನಿಮ್ಮ ನಡವಳಿಕೆಯಲ್ಲಿ ದ್ವಂದ್ವವಿದ್ದು ತೀರ್ಮಾನ ತೆಗೆದುಕೊಳ್ಳುವಲ್ಲಿ ನಿಧಾನವಾಗುತ್ತದೆ. ಶೀತ ಬಾಧೆ ನಿಮ್ಮನ್ನು ಕಾಡಬಹುದು. ಬರಹಗಾರರಿಗೆ ಬೇಡಿಕೆ ಹೆಚ್ಚಾಗುವುದು.ವ್ಯವಹಾರದಲ್ಲಿ ಹೂಡಿದ್ದ ಬಂಡವಾಳಗಳು ಚೆನ್ನಾಗಿ ಬೆಳೆಯುತ್ತವೆ. ವ್ಯವಹಾರದಲ್ಲಿ ನಿಮಗೆ ಪ್ರಾಮುಖ್ಯತೆ ದೊರೆತು ಹೆಚ್ಚಿನ ಹಣ ದೊರೆಯುತ್ತದೆ. ಮನೆಯಲ್ಲಿ ದೇವತಾರಾಧನೆಯನ್ನು ಮಾಡಿ ತೃಪ್ತಿ ಪಡುವಿರಿ. ಸಂಗಾತಿಯ ಸಲಹೆಗಳು ನಿಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT